ಲಾಹೋರ್: ಹಿಂದು ವಿರೋಧಿ ಘೋಷಣೆ ಪ್ರಕಟಿಸಿದ್ದಕ್ಕೆ ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಪಕ್ಷದ ಮುಖ್ಯಸ್ಥ ಕ್ಷಮೆ ಕೇಳಿದ್ದಾನೆ. ಆತನ ಪರ ಇದ್ದ ಬ್ಯಾನರ್ಗಳಲ್ಲಿ ಇದ್ದ ಹಿಂದು ವಿರೋಧಿ ಘೋಷಣೆಯನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.
ಆಡಳಿತ ಪಕ್ಷ ತೆಹರಿಕ್ ಎ ಇನ್ಸಾಫ್ ಪಕ್ಷ ಮುಖಂಡ ಮಿಯಾನ್ ಅಕ್ರಮ್ ಉಸ್ಮಾನ್ ಎಂಬಾತ ಕಾರ್ಯಕ್ರಮವೊಂದಕ್ಕೆ ಸಂಬಂಧಪಟ್ಟಂತೆ ಬ್ಯಾನರ್ ಕಟ್ಟಲಾಗಿತ್ತು. ಅದರಲ್ಲಿ (ಹಿಂದು ಬಾತ್ ಸೆ ನಹಿ, ಲಾತ್ ಸೆ ನಹಿ ಮಾನತಾ ಹೈ) ಹಿಂದು ಮಾತಿಗೆ ಬಗ್ಗಲ್ಲ, ಪೆಟ್ಟಿಗೆ ಬಗ್ಗುತ್ತಾನೆ ಎಂದು ಬರೆಯಲಾಗಿತ್ತು.
ಬ್ಯಾನರ್ನಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಮಹಮ್ಮದ್ ಅಲಿ ಜಿನ್ನಾ ಮತ್ತು ತನ್ನ ಫೋಟೋವನ್ನು ಬ್ಯಾನರ್ನಲ್ಲಿ ಉಸ್ಮಾನ್ ಮುದ್ರಿಸಿದ್ದ. ಈ ಬಗ್ಗೆ ಖಂಡನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಉಸ್ಮಾನ್ ಟ್ವೀಟರ್ನಲ್ಲಿ ಕ್ಷಮೆ ಯಾಚಿಸಿದ್ದಾನೆ. ಅಲ್ಲದೆ ಉಭಯ ಗಡಿಗಳಲ್ಲಿ ಹಿಂದುಗಳು ಶಾಂತಿಯುತ ಜೀವನ ನಡೆಸಬೇಕು ಎಂದು ಬರೆದುಕೊಂಡಿದ್ದಾನೆ.
ಮಾನವ ಹಕ್ಕುಗಳ ಸಚಿವೆ ಶಿರೀನ್ ಮಜಾರಿ ಟ್ವೀಟ್ನಲ್ಲಿ ಉಸ್ಮಾನ್ ಅವರ ಈ ನಡೆಯನ್ನು ಖಂಡಿಸಲಾಗಿದೆ. ಅವರು ತಕ್ಷಣ ಆ ಬ್ಯಾನರ್ಗಳನ್ನು ಹಿಂಪಡೆದಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ಉಸ್ಮಾನ್ ಅವರ ನಡೆಯನ್ನು ಖಂಡಿಸಿ ಇದು ವ್ಯಕ್ತಿಯೊಬ್ಬನ ಅವಮಾನಕರ ಮತ್ತು ಅಜ್ಞಾನದ ವಿಧಾನ ಎಂದು ಜರಿದಿದ್ದಾರೆ. (ಏಜೆನ್ಸೀಸ್)