More

    ಶಿವಮೊಗ್ಗ ಎಪಿಎಂಸಿ ಹೈಡ್ರಾಮ-ಅಧ್ಯಕ್ಷರ ರಾಜೀನಾಮೆ ವಾಪಸ್

    ಶಿವಮೊಗ್ಗ: ಅನಿರೀಕ್ಷಿತ ಬೆಳವಣಿಗೆಯಲ್ಲಿ ಶಿವಮೊಗ್ಗ ಎಪಿಎಂಸಿ ಅಧ್ಯಕ್ಷ ಕೆ.ಪಿ.ದುಗ್ಗಪ್ಪ ಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಆದರೆ 11 ದಿನಗಳಲ್ಲೇ ಅವರು ರಾಜೀನಾಮೆ ಹಿಂಪಡೆದಿದ್ದಾರೆ. ಇದರೊಂದಿಗೆ ಎಪಿಎಂಸಿ ಅಧ್ಯಕ್ಷ ಸ್ಥಾನಕ್ಕೇರುವ ಎಸ್.ಎನ್.ಮಹೇಶ್ ಕನಸು ನನಸಾಗುವ ಅವಕಾಶವಿಲ್ಲದಂತಾಗಿದೆ.
    ಕಳೆದ ವರ್ಷ ಜುಲೈನಲ್ಲಿ 20 ತಿಂಗಳ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ದುಗ್ಗಪ್ಪಗೌಡ, ಏ.8ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಗೆಳೆಯ ಎಸ್.ಎನ್.ಮಹೇಶ್‌ಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವುದಾಗಿ ಮಾತು ನೀಡಿದ್ದೆ. ಅದರಂತೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಆ ಸಂದರ್ಭದಲ್ಲಿ ತಿಳಿಸಿದ್ದರು. ರಾಜೀನಾಮೆ ಹಿಂಪಡೆಯಲು ಏ.23ರವರೆಗೂ ಅವಕಾಶವಿತ್ತು. ಸೋಮವಾರ ರಾಜೀನಾಮೆ ಹಿಂಪಡೆದು ದುಗ್ಗಪ್ಪ ಗೌಡ ಅಚ್ಚರಿ ಮೂಡಿಸಿದ್ದಾರೆ.
    ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ದೇಶಕರಿಗೆ ಸೋಮವಾರ ಪತ್ರ ಬರೆದಿರುವ ಅವರು, ನಾನು ಶಿವಮೊಗ್ಗ ಎಪಿಎಂಸಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಲು ಸಶಕ್ತನಾಗಿದ್ದೇನೆ. ಒತ್ತಾಯಪೂರ್ವಕವಾಗಿ ನಾನು ರಾಜೀನಾಮೆ ನೀಡಬೇಕಾಯಿತು. ಈಗ ಅದನ್ನು ಹಿಂಪಡೆಯುತ್ತೇನೆ ಎಂದು ತಿಳಿಸಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts