More

    ಆಂಜನೇಯಸ್ವಾಮಿ ತೇರು

    ಅರಸೀಕೆರೆ: ತಾಲೂಕಿನ ಬಾಣಾವರ ಗ್ರಾಮದಲ್ಲಿರುವ ಶ್ರೀ ಕೋಟೆ ಆಂಜನೇಯಸ್ವಾಮಿ ದೇವರ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು.

    ಗ್ರಾಮ ದೇವತೆಗಳಾದ ಕರಾಳಮ್ಮ, ಪ್ಲೇಗಿನಮ್ಮ, ಕಾಳಮ್ಮ, ಬನಶಂಕರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸರ್ವಾಲಂಕೃತ ರಥದಲ್ಲಿ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಿದ್ದಂತೆ ನೆರೆದಿದ್ದ ಜನಸ್ತೋಮ ಜಯಘೋಷ ಮೊಳಗಿಸಿ ಬಾಳೆಹಣ್ಣು, ದವನ ಎಸೆದು ಭಕ್ತಿ ಸಮರ್ಪಿಸಿದರು. ದೊಡ್ಡೇನಹಳ್ಳಿ, ಎ.ಮಲ್ಲಾಪುರ, ಚಿಕ್ಕಾರೆಹಳ್ಳಿ, ಸಾಲಾಪುರ, ಮನಕತ್ತೂರು, ಉಪ್ಪನಹಳ್ಳಿ, ಸರ್ವೆಕೊಪ್ಪಲು, ತೊಂಡಿಗನಹಳ್ಳಿ, ಶಾನೆಗೆರೆ ಸೇರಿ ಹತ್ತಾರು ಹಳ್ಳಿಗಳ ಜನರು ಇದ್ದರು. ದೇವಾಲಯ ಸಮಿತಿ ವತಿಯಿಂದ ಭಕ್ತರಿಗೆ ಪಾನಕ, ಫಲಾಹಾರ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts