More

    ಭಾರತದ ಶಕ್ತಿ ಜಾಗೃತಗೊಳಿಸಿದ ಆರ್ ಎಸ್ಎಸ್, ಹಿರಿಯ ಪ್ರಚಾರಕ ಸು. ರಾಮಣ್ಣ ಅಭಿಮತ

    ಹುಬ್ಬಳ್ಳಿ: ತುತ್ತು ಅನ್ನ, ಹಾಲಿಗಾಗಿ ಅನ್ಯ ದೇಶಗಳನ್ನು ಬೇಡಿಕೊಳ್ಳುತ್ತಿದ್ದ ಭಾರತವು ಇಂದು ತನ್ನ ಶಕ್ತಿಯನ್ನು ಜಾಗೃತಗೊಳಿಸಿಕೊಂಡು ವಿಕಸಿತ ದೇಶವಾಗುತ್ತಿದೆ. ಇದಕ್ಕೆ ಬೇಕಾದ ರಾಜಕೀಯ ಶಕ್ತಿಗೆ ಪ್ರೇರಣೆ ನೀಡಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದು ಆರ್ ಎಸ್ ಎಸ್ ಹಿರಿಯ ಪ್ರಚಾರಕ ಸು. ರಾಮಣ್ಣ ಅವರು ಅಭಿಪ್ರಾಯಪಟ್ಟರು.

    ಇಲ್ಲಿಯ ವಿಜಯನಗರದ ಅನಂತ ಪ್ರೇರಣಾ ಕೇಂದ್ರದಲ್ಲಿ ಭಾನುವಾರ ಏರ್ಪಡಿಸಿದ್ದ ವಾಷಿರ್ಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

    ಜನಪ್ರಿಯತೆಗೂ ಶ್ರೇಷ್ಠತೆಗೂ ವ್ಯತ್ಯಾಸವಿದೆ. ಹೆಡಗೆವಾರ ಅವರು ಆರ್ ಎಸ್ ಎಸ್ ಮೂಲಕ ಈ ದೇಶದ ಸಂಸ್ಕೃತಿ, ಪರಂಪರೆಯನ್ನು ಜತನದಿಂದ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ಮಾಡಿದರು. ಅವರು ಇಂತಹ ಶ್ರೇಷ್ಠ ಕೆಲಸದ ಮೂಲಕ ಭಾರತಮಾತೆಯನ್ನು ಜನಪ್ರಿಯಗೊಳಿಸಲು ಪ್ರಯತ್ನ ಮಾಡಿದರು.

    ಇದೀಗ ಭಾರತ ವಿಕಸಿತ ದೇಶವಾಗಿಸಲು ಆರ್ಎಸ್ಎಸ್ ಪ್ರೇರಣೆಯಾಗಿದೆ. ನಾವೆಲ್ಲರೂ ನಿಮಿತ್ತ ಮಾತ್ರ, ಭಗವಂತನ ಕಾರ್ಯ ಮಾಡಲು ಬಂದವರು ಎಂದರು.

    ಭಗವದ್ಗೀತೆಯ ಸಾರವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ವಾರಸುದಾರಿಕೆಯನ್ನು ಸಂ ಪರಿವಾರ ಮಾಡುತ್ತಿದೆ. ವಟವೃಕ್ಷದ ಒಂದೊಂದು ಬೇರುಗಳಾಗಿ ನಾವೆಲ್ಲರೂ ಕೆಲಸ ಮಾಡಬೇಕು. ಅಂದಾಗ ಭಾರತವೆಂಬ ವೃಕ್ಷ ಗಟ್ಟಿಯಾಗಿ ನೆಲೆಯೂರಲು ಸಾಧ್ಯ ಎಂದರು.

    ಅನಂತಕುಮಾರ್ ಪ್ರೇರಣೆ:
    ಎಚ್.ಎನ್. ಅನಂತಕುಮಾರ ಅವರ ದೇಶ ಸೇವೆ ಸ್ಮರಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಅವರು ನನಗೆ ಅಪ್ತರು, ಒಡನಾಡಿ, ಮಾರ್ಗದರ್ಶಕರಾಗಿದ್ದರು ಎಂದರು.

    ಬಿಜೆಪಿಗೆ ಶಕ್ತಿ ತುಂಬಿದ್ದ ಅವರ ಹೋರಾಟ, ರಾಜಕೀಯ ಜೀವನ ನಮಗೆ ಪ್ರೇರಣೆಯಾಗಿದೆ. ಸಾಮಾನ್ಯ ಕುಟುಂಬದಿಂದ ಬಂದು ರಾಜಕೀಯದಲ್ಲಿ ಎತ್ತರಕ್ಕೆ ಬೆಳೆದರು. ಅವರ ರಾಜಕೀಯ ಜೀವನ ಎಲ್ಲರಿಗೂ ಪ್ರೇರಣಾದಾಯಕವಾಗಿದೆ ಎಂದರು.

    ಸದಾ ಕ್ರೀಯಾಶೀಲರಾಗಿದ್ದ ಅವರು, ಎಂಥದೇ ನೋವು, ಕಷ್ಟ ಬಂದರೂ ತೋರಿಸಿಕೊಡದೇ ನಮಗೆ ಸದಾ ನಗು ಮುಖವನ್ನು ಬಿಟ್ಟು ಹೋಗಿದ್ದಾರೆ ಎಂದು ಹೇಳಿದರು.

    ಅನ್ನಪ್ರಸಾದ: ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ದಿನದಿಂದಲೂ ನಿತ್ಯ ಅನ್ನಪ್ರಸಾದ ವ್ಯವಸ್ಥೆ ಮಾಡುವ ಮೂಲಕ ಅದಮ್ಯ ಚೇತನ ಸಂಸ್ಥೆ ಮಾದರಿ ಕೆಲಸ ಮಾಡುತ್ತಿದೆ ಎಂದು ಜೋಶಿ ಬಣ್ಣಿಸಿದರು.

    ಗದಗ ಪಂಚಾಯತರಾಜ ವಿಶ್ವವಿದ್ಯಾಲಯ ಕುಲಪತಿ ಪ್ರೊ. ವಿಷ್ಣುಕಾಂತ ಚಟಪಲ್ಲಿ ಮಾತನಾಡಿ, ಅನಂತಕುಮಾರ ಪ್ರತಿಷ್ಠಾನದ ಮೂಲಕ ಅವರ ನೇತೃತ್ವ, ಕರ್ತೃತ್ವ ಶಕ್ತಿಯನ್ನು ಪ್ರಸಾರ ಮಾಡುವ ಕೆಲಸ ನಡೆದಿದೆ. ಇದನ್ನು ಇನ್ನಷ್ಟು ಹೆಚ್ಚು ಮಾಡುವ ಸಲುವಾಗಿ ಪ್ರೇರಣಾ ಕೇಂದ್ರ ಆರಂಭಿಸಲಾಗಿದೆ. ಮಹಿಳೆಯರು, ಯುವಕರಿಗೆ ಪ್ರೇರಣೆ ಜತೆಗೆ ತರಬೇತಿ ನೀಡಲಾಗುತ್ತಿದೆ. ಇದಕ್ಕಾಗಿ ಸಲಹಾ ಸಮಿತಿ ರಚನೆ ಮಾಡಲಾಗಿದೆ ಎಂದರು.

    ವೀಣಾ ಅಠವಲೆ ಕೇಂದ್ರದ ವಾಷಿರ್ಕ ವರದಿ ವಾಚನ ಮಾಡಿದರು. ಅನಂತ ಚೇತನ ಕೃತಿ ಹಾಗೂ ಅನಂತಪಥ ಮಾಸಪತ್ರಿಕೆಯನ್ನು ಗಣ್ಯರು ಬಿಡುಗಡೆ ಮಾಡಿದರು.

    ಶಾಸಕ ಮಹೇಶ ಟೆಂಗಿನಕಾಯಿ, ಅದಮ್ಯ ಚೇತನದ ತೇಜಸ್ವಿನಿ ಅನಂತಕುಮಾರ, ನಂದಕುಮಾರ್, ಮಾಜಿ ಶಾಸಕ ಅಶೋಕ ಕಾಟವೆ, ರಂಗಾ ಬದ್ದಿ, ರೂಪಾ ಶೆಟ್ಟಿ, ಮೀನಾ ಒಂಟಮುರಿ, ಸುಭಾಸಸಿಂಗ್ ಜಮಾದಾರ, ಪ್ರಮುಖರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts