ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗನ್ ಸಮೇತ ಬಂದ ಮಾಜಿ ಸಚಿವರೊಬ್ಬರನ್ನು ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ ಪೊಲೀಸ್ ವಿಚಾರಣೆಗೆ ಒಳಪಡಿಸಿದ್ದ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.
ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಅವರು ಬ್ಯಾಗ್ನಲ್ಲಿ ಗನ್ ಇಟ್ಟುಕೊಂಡು ಏರ್ಪೋರ್ಟ್ ಪ್ರವೇಶಿಸಿದ್ದರು. ಈ ವೇಳೆ ಅವರು ಗನ್ ಬಗ್ಗೆ ಎಂಟ್ರಿ ಮಾಡಿಸಿರಲಿಲ್ಲ. ತಪಾಸಣೆ ವೇಳೆ ಬ್ಯಾಗ್ನಲ್ಲಿ ಗನ್ ಪತ್ತೆಯಾಗುತ್ತಿದ್ದಂತೆ ಗಾಬರಿಗೊಂಡ ಏರ್ಪೋರ್ಟ್ ಭದ್ರತಾ ಸಿಬ್ಬಂದಿ, ಕೂಡಲೇ ಆನಂದ್ ಆಸ್ನೋಟಿಕರ್ರನ್ನು ಪೊಲೀಸರಿಗೆ ಒಪ್ಪಿಸಿದರು. ಇದನ್ನೂ ಓದಿರಿ ಪಕ್ಷಾಂತರ ಗುಮ್ಮ ಮತ್ತೆ ಬಂತು! ಜೆಡಿಎಸ್ ತೊರೆದು ‘ಕೈ’ ಹಿಡಿಯಲು ಕ್ಷಣಗಣನೆ
ವಿಚಾರಣೆ ವೇಳೆ ಏರ್ಪೋರ್ಟ್ ಠಾಣೆ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡ ಅಸ್ನೋಟಿಕರ್, “ಸರ್.. ಅರ್ಜೆಂಟ್ ಇತ್ತು. ಹೀಗಾಗಿ ಗನ್ ಇರುವುದನ್ನು ಮರೆತೆ. ತಪ್ಪಾಯಿತು” ಎಂದರು. ಈ ಗನ್ಗೆ ಲೈಸನ್ಸ್ ಇರುವುದು ವಿಚಾರಣೆ ವೇಳೆ ದೃಢಪಟ್ಟಿದೆ. ಸದ್ಯ ಏರ್ಪೋರ್ಟ್ ಪೊಲೀಸರು ಅಸ್ನೋಟಿಕರ್ರ ಹೇಳಿಕೆ ದಾಖಲಿಸಿಕೊಂಡು ಕೆಲ ಹೊತ್ತಿನಲ್ಲೇ ಅವರನ್ನು ಬಿಟ್ಟು ಕಳುಹಿಸಲಿದ್ದಾರೆ.
ಅಯ್ಯೋ, ಮಗಳೇ ನಿಲ್ಲು ಎಂದು ತಾಯಿ ಗೋಗರೆಯುತ್ತಿದ್ದರೂ ಮಗಳು ನೀರಿಗೆ ಹಾರಿ ಪ್ರಾಣ ಬಿಟ್ಲು!