More

    ಈ ಸರ್ಕಾರ ಯಾವಾಗ ಹೋಗುತ್ತೋ ಗೊತ್ತಿಲ್ಲ: ಸಚಿವ ಆನಂದ್ ಸಿಂಗ್ ಅಚ್ಚರಿಯ ಹೇಳಿಕೆ

    ಬಳ್ಳಾರಿ: ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ಆನಂದ್​ ಸಿಂಗ್ ಅವರು ಇಂದು ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದು, ಅದೀಗ ಭರ್ಜರಿ ಚರ್ಚೆಗೆ ಕಾರಣವಾಗಿದೆ.

    ಬಳ್ಳಾರಿಯ ಹೊಸಪೇಟೆ ತಾಲೂಕಿನ ಕಮಾಲಾಪುರದ ಅಟಲ್ ಬಿಹಾರಿ ವಾಜಪೇಯಿ ಪ್ರಾಣಿಸಂಗ್ರಹಾಲಯದಲ್ಲಿ 66ನೇ ವನ್ಯ ಜೀವಿ ಸಂರಕ್ಷಣಾ ಸಪ್ತಾಹದ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಆನಂದ್ ಸಿಂಗ್​, ಈ ಸರ್ಕಾರ ಯಾವಾಗ ಇರತ್ತೋ…ಯಾವಾಗ ಹೋಗುತ್ತೋ ಗೊತ್ತಿಲ್ಲ ಎಂದು ಹೇಳಿದ್ದಾರೆ. ಆದರೆ ಕೂಡಲೇ ಎಚ್ಚೆತ್ತುಕೊಂಡು, ನನ್ನ ಹೇಳಿಕೆಯನ್ನು ಅನ್ಯಥಾ ಭಾವಿಸಬೇಡಿ ಎಂದಿದ್ದಾರೆ. ಇದನ್ನೂ ಓದಿ: ಅನ್​​ಲಾಕ್​ ಇದೆ ಎಂದ ಮಾತ್ರಕ್ಕೆ ಅಸಡ್ಡೆ ಬೇಡ; ಆರೋಗ್ಯ ಸಚಿವರು ನೀಡಿದ್ದಾರೊಂದು ಎಚ್ಚರಿಕೆ

    ಆದರೆ ಆನಂದ್​ ಸಿಂಗ್​ ಹೀಗೆ ಹೇಳಲು ಕಾರಣ ಏನಿರಬಹುದು ಎಂಬ ಪ್ರಶ್ನೆ ಎದ್ದಿದೆ. ಸರ್ಕಾರಕ್ಕೆ ಅಭದ್ರತೆ ಕಾಡುತ್ತಿದೆಯಾ? ಅಥವಾ ಆನಂದ್ ಸಿಂಗ್​ ಏನಾದರೂ ರಾಜಕೀಯ ತಂತ್ರಗಾರಿಕೆ ನಡೆಸುತ್ತಿದ್ದಾರಾ ಎಂಬಿತ್ಯಾದಿ ಮಾತುಗಳೂ ಕೇಳಿಬರುತ್ತಿವೆ.

    ಹಿಂದಿನ ಸಮ್ಮಿಶ್ರ ಸರ್ಕಾರ ಉರುಳಲು ಸಚಿವ ಆನಂದ್ ಸಿಂಗ್​ ಕೂಡ ಕಾರಣರಾಗಿದ್ದರು. ವಿಜಯನಗರ ಜಿಲ್ಲೆ ಮತ್ತು ಜಿಂದಾಲ್ ಭೂಮಿ ಪರಭಾರೆ ನೆಪವೊಡ್ಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

    ಇದು ಭಾರತದ 1328ನೇ ಚಿಟ್ಟೆ ಪ್ರಬೇಧ, ಸಿಕ್ಕಿದ್ದೆಲ್ಲಿ ಗೊತ್ತೇ?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts