ನವದೆಹಲಿ: ಸುಡು.. ಸುಡು ಬೀಸಿಲು ಹೆಚ್ಚಾಗಿದೆ. ಬೀಸಿಲಿನ ಧಗೆ ಜತೆ ನೀರಿನ ಕೊರತೆ ಕೂಡಾ ಉಂಟಾಗಿದೆ. ಬೆಂಗಳೂರಿನ ಸದ್ಯದ ನೀರಿನ ಪರಿಸ್ಥಿತಿಯ ಬಗ್ಗೆ ಹೇಳಬೇಕಾಗಿಲ್ಲ. ನೀರಿನ ಕೊರತೆಗೆ ಸಂಬಂಧಿಸಿದ ಸುದ್ದಿಗಳನ್ನು ನಾವು ಕೇಳಿದ್ದೇವೆ, ನೋಡಿದ್ದೇವೆ ಈ ಹಿನ್ನೆಲೆಯಲ್ಲಿ ನೀರನ್ನು ಮಿತವಾಗಿ ಬಳಸುವುದು ಹೇಗೆ ಎಂಬ ಚರ್ಚೆ ಶುರುವಾಗಿದೆ. ಇದರೊಂದಿಗೆ, ನೀರನ್ನು ಉಳಿಸುವುದು ಹೇಗೆ ಎನ್ನುವ ಪ್ರಶ್ನೆಗೆ ಉದ್ಯಮಿ ಆನಂದ್ ಮಹೀಂದ್ರಾ ಅವರು ತಿಳಿಸಿದ್ದಾರೆ.
ಬೇಸಿಗೆಯಲ್ಲಿ ಎಸಿ ಬಳಸುವುದು ಸಾಮಾನ್ಯ. ಆದರೆ ಎಸಿಗಳಿಂದ ಹೊರಬರುವ ನೀರು ವ್ಯರ್ಥವಾಗುತ್ತಿದೆ. ಈ ನೀರನ್ನು ಸರಿಯಾದ ರೀತಿಯಲ್ಲಿ ಬಳಸಬಹುದು ಎಂಬುದನ್ನು ಈ ವೀಡಿಯೋದಲ್ಲಿ ತೋರಿಸಲಾಗಿದೆ.
This needs to become standard equipment throughout India wherever people use A/Cs
Water is Wealth.
It needs to be stored safely…
👏🏽👏🏽👏🏽
Spread the word. pic.twitter.com/vSK0bWy5jm
— anand mahindra (@anandmahindra) March 16, 2024
ಎಸಿ ಘಟಕದಿಂದ ಹೊರ ಬರುವ ನೀರೆಲ್ಲ ಪೈಪ್ ನಲ್ಲಿ ತುಂಬುವ ವ್ಯವಸ್ಥೆ ಮಾಡಲಾಗಿದೆ. ಅದರ ಕೊನೆಯಲ್ಲಿ ಸಣ್ಣ ಟ್ಯಾಪ್ ಅನ್ನು ಅಳವಡಿಸಲಾಗಿದೆ. ಈ ರೀತಿಯಲ್ಲಿ ಎಸಿಯಿಂದ ಹೊರಬರುವ ನೀರನ್ನು ಕೆಳಗೆ ಟ್ಯಾಪ್ ಮೂಲಕ ಯಾವುದಾದರೂ ಪಾತ್ರೆಗಳಿಗೆ ಹಿಡಿದಿಟ್ಟುಕೊಳ್ಳಬಹುದು. ಅಥವಾ ಎಸಿ ಕಂಡೆನ್ಸರ್ನಿಂದ ಸಣ್ಣ ಪೈಪ್ ಮೂಲಕ ನೇರವಾಗಿ ಯಾವುದಾದರೂ ದೊಡ್ಡ ಡ್ರಮ್ಗೆ ಬಂದು ಬೀಳುವಂತೆಯೂ ಮಾಡಬಹುದು. ಇದಕ್ಕೆ ಸಂಬಂಧಿಸಿದ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಆನಂದ್ ಮಹೀಂದ್ರಾ ಅವರು, ‘ಭಾರತದಲ್ಲಿ ಎಸಿ ಬಳಸುವ ಎಲ್ಲೆಡೆ ಇದೇ. ಆದ್ರೆ ಈ ರೀತಿಯ ವ್ಯವಸ್ಥೆ ಮಾಡಬೇಕು. ನೀರು ಅಮೂಲ್ಯವಾದುದು. ಇದನ್ನು ಎಚ್ಚರಿಕೆಯಿಂದ ಸಂಗ್ರಹಿಸಬೇಕು ಎಂದಿದ್ದಾರೆ. ನೀರನ್ನು ಕೊಂಚ ಮಟ್ಟಿಗೆ ಆದ್ರು ಹೇಗೆ ಉಳಿಸ ಬಹುದು ,ಮತ್ತು ಹೇಗೆ ಮರು ಬಳಕೆ ಮಾಡಬಹುದು ಎನ್ನುವುದನ್ನು ಇಲ್ಲಿ ತೋರಿಸಲಾಗಿದೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ನೀರಿನ ಬವಣೆ ನೀಗಿಸಲು ಇದು ಕೂಡ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ನೀರನ್ನು ತೋಟಗಾರಿಕೆ ಹಾಗೂ ಇತರೆ ವಾಷಿಂಗ್ ಉದ್ದೇಶಗಳಿಗೂ ಬಳಸಬಹುದು ಎಂಬುದು ನೆಟಿಜನ್ ಗಳ ಅಭಿಪ್ರಾಯವಾಗಿದೆ.