More

    ಬುರಡಿಕಟ್ಟಿ ಗ್ರಾಪಂಗೆ ಅವಿರೋಧ ಆಯ್ಕೆ

    ಹಿರೇಕೆರೂರ: ತಾಲೂಕಿನ ಬುರಡಿಕಟ್ಟಿ ಗ್ರಾಪಂ ಅಧ್ಯಕ್ಷರಾಗಿ ಗಣೇಶ ಉಜ್ಜನಗೌಡ ಪಾಟೀಲ, ಉಪಾಧ್ಯಕ್ಷೆಯಾಗಿ ಶಕುಂತಲಮ್ಮ ತಿಪ್ಪಣ್ಣನವರ ಅವಿರೋಧವಾಗಿ ಅಯ್ಕೆಯಾದರು.

    ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಪಂಚಾಯಿತಿ ಕಚೇರಿಯಲ್ಲಿ ಬುಧವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ಎರಡು ಸ್ಥಾನಗಳಿಗೆ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿದ್ದವು. ಹೀಗಾಗಿ ಅಧ್ಯಕ್ಷರಾಗಿ ಗಣೇಶ ಪಾಟೀಲ, ಉಪಾಧ್ಯಕ್ಷೆಯಾಗಿ ಶಕುಂತಲಮ್ಮ ತಿಪ್ಪಣ್ಣನವರ ಅವಿರೋಧವಾಗಿ ಅಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ಎಸ್.ಬಿ. ದಂದೂರ, ಪಿಡಿಒ ಶಹಿನಬೀ ಕಲಕೋಟಿ, ನಾಗರಾಜ ಬಣಕಾರ ಕಾರ್ಯನಿರ್ವಹಿಸಿದರು. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆಯನ್ನು ಸನ್ಮಾನಿಸಲಾಯಿತು. ಗ್ರಾಪಂ ಸದಸ್ಯರಾದ ರಮೇಶ ಮೇಗಳಮನಿ, ನಯನಾ ಸಾಬೂಲುರ, ವಿದ್ಯಾ ಮಳೂರ, ಸುನೀತಾ ಮಾರುತೇಪ್ಪ ಮುಗಳಳ್ಳಿ, ಶಿವಾನಂದಪ್ಪ ಜಾಡರ, ಹೂವಪ್ಪ ನಿಂಗನಗೌಡ್ರ, ಪುಷ್ಪಾ ಶಿರಿಗೌಡ್ರ, ರಾಮಪ್ಪ ಮಳವಳ್ಳಿ, ಕವಿತಾ ಗಡದರ, ಸಿದ್ದನಗೌಡ ಗವಿಯಪ್ಪನವರ, ಮುಖಂಡರಾದ ಲೋಕಪ್ಪ ಮರಿಗೌಡ್ರ, ಉಳಿವೆಪ್ಪ ಸುತ್ತಕೋಟಿ, ಕನ್ನಪ್ಪ ಕೆಳಗಿನಮನಿ, ಬಸವರಾಜ ಭರಮಗೌಡ್ರ, ಪ್ರಕಾಶ ತಿಪ್ಪಣ್ಣನವರ, ಹಾಗೂ ಗ್ರಾಮಸ್ಥರು, ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts