ಬೆಂಗಳೂರು: ದೇಶದ್ರೋಹ ಘೋಷಣೆ ಕೂಗಿ ಜೈಲು ಪಾಲಾಗಿರುವ ಅಮೂಲ್ಯಾಳ ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗುತ್ತಿರುವ ಹಿನ್ನಲೆಯಲ್ಲಿ ಎಸ್ಐಟಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆಕೆಯ ಸ್ವ ಇಚ್ಛಾ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದಾರೆ.
ಆದರೆ ವಿಚಾರಣೆ ವೇಳೆ ಅಮೂಲ್ಯಾ ತೀವ್ರ ಉದ್ಧಟತನ ಮೆರೆದಿದ್ದಾಳೆ. ವಿಚಾರಣೆಯುದ್ದಕ್ಕೂ ಹಿಂದುತ್ವ ಮತ್ತು ಆರ್ಎಸ್ಎಸ್, ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾಳೆ. ನೀವು ಪಾಕಿಸ್ತಾನ್ ಜಿಂದಾಬಾದ್ ಅನ್ನೋದನ್ನ ಮಾತ್ರ ಹೈಲೈಟ್ ಮಾಡಿದ್ದೀರಿ. ನಾನು ಮುಂದೆ ಹೇಳೋದನ್ನೂ ಕೇಳಬೇಕಿತ್ತು ಎಂದು ಪೊಲೀಸರಿಗೇ ತಿರುಗಿ ಮಾತನಾಡಿದ್ದಾಳೆ.
ಮುಂದೆ ಏನು ಹೇಳಬೇಕೆಂದುಕೊಂಡಿದ್ದೆ ಈಗ ಹೇಳು ಎಂದು ಪೊಲೀಸರು ಕೇಳಿದರೆ, ಈಗ್ಯಾಕೆ ನಾನು ಹೇಳಲಿ, ಕೋರ್ಟ್ನಲ್ಲಿಯೇ ಮಾತನಾಡುತ್ತೇನೆ ಎಂದಿದ್ದಾಳೆ ಎನ್ನಲಾಗಿದೆ.
ತನ್ನ ಸಿದ್ಧಾಂತಗಳ ಬಗ್ಗೆಯೇ ಮಾತನಾಡಿದ ಅಮೂಲ್ಯಾ, ನೋಡಿ ಸರ್, ನೀವು ನನಗೆ ಇಷ್ಟು ದೊಡ್ಡ ಸೆಕ್ಯೂರಿಟಿ ಕೊಡುತ್ತಿದ್ದೀರಿ. ನೀವೇ ನನ್ನ ಸೆಲೆಬ್ರಿಟಿ ಮಾಡಿದ್ದಿರಿ ಎಂದು ಪೊಲೀಸರನ್ನೇ ಅಪಹಾಸ್ಯ ಮಾಡಿದ್ದಾಳೆ. (ದಿಗ್ವಿಜಯ ನ್ಯೂಸ್)