More

    ದರ್ಶನ್​ ಕರೆಗೆ ಓಗೊಟ್ಟು ಜಾಗ್ವಾರ್​​ ದತ್ತು ಪಡೆದ ಅಮೂಲ್ಯ …

    ಬೆಂಗಳೂರು: ರಾಜ್ಯದ ಮೃಗಾಲಯಗಳಲ್ಲಿನ ಸ್ಥಿತಿ ಕಂಡು ಸ್ಯಾಂಡಲ್‌ವುಡ್ ನಟ ದರ್ಶನ್ ಪ್ರಾಣಿ, ಪಕ್ಷಿಗಳನ್ನು ದತ್ತು ಸ್ವೀಕರಿಸುವಂತೆ ಮನವಿ ಮಾಡಿದ್ದರು. ಆ ಒಂದು ಮಾತಿಗೆ ಅಭೂತ ಪೂರ್ವ ಬೆಂಬಲ ಸಿಕ್ಕಿದ್ದು ಗೊತ್ತಿರುವ ವಿಚಾರ.

    ಇದನ್ನೂ ಓದಿ: ಬಿಗ್​ ಬಾಸ್​ ಮತ್ತೆ ಶುರು; ಪರಮೇಶ್ವರ್​ ಗುಂಡ್ಕಲ್​ ನೀಡಿರುವ ಮಾಹಿತಿ ಇಲ್ಲಿದೆ…

    ಈಗಾಗಲೇ ಸ್ಯಾಂಡಲ್​ವುಡ್​ನ ಅನೇಕ ನಟ-ನಟಿಯರು ರಾಜ್ಯಾದ್ಯಂತ ಇರುವ 9 ಮೃಗಾಲಯಗಳ ಪೈಕಿ ಹಲವು ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದಿದ್ದಾರೆ. ಇತ್ತೀಚೆಗಷ್ಟೇ, ಸ್ಯಾಂಡಲ್‌ವುಡ್‌ನ ನಟಿಯರಾದ ಪ್ರಿಯಾಂಕಾ ತಿಮ್ಮೇಶ್ ಮತ್ತು ಅದ್ವಿತಿ ಶೆಟ್ಟಿ ಮೈಸೂರು ಮೃಗಾಲಯದಲ್ಲಿನ ಬ್ಲಾಕ್ ಬಕ್ ಮತ್ತು ನಕ್ಷತ್ರ ಆಮೆಯನ್ನು ವರ್ಷದ ಅವಧಿಗೆ ದತ್ತು ಪಡೆದಿದ್ದಾರೆ. ಈಗ ಆ ಸಾಲಿಗೆ ಅಮೂಲ್ಯ ಮತ್ತು ಅವರ ಪತಿ ಜಗದೀಶ್​ ಸಹ ಸೇರಿಕೊಂಡಿದ್ದಾರೆ.

    ಅಮೂಲ್ಯ ಮತ್ತು ಅವರ ಪತಿ ಜಗದೀಶ್​ ಚಂದ್ರ, ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಜಾಗ್ವಾರ್​ವೊಂದನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದಿದ್ದಾರೆ. ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿರುವ ಜಗದೀಶ್​, ಜಾಗ್ವಾರ್ ದತ್ತು ಪಡೆಯಲು ಪ್ರೇರಣೆ ನೀಡಿದ್ದಕ್ಕಾಗಿ ದರ್ಶನ್​ಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

    ಇದನ್ನೂ ಓದಿ: VIDEO| ಸಂಚಾರಿ ವಿಜಯ್​ ಕುರಿತು ಅಪರೂಪದ ವಿಡಿಯೋ ಹಂಚಿಕೊಂಡ ಸತೀಶ್​ ನೀನಾಸಂ

    ಸಂಕಷ್ಟದಲ್ಲಿರುವ ಪ್ರಾಣಿ-ಪಕ್ಷಿಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ನೆರವು ನೀಡಿ ಎಂದು ದರ್ಶನ್​ ಕರೆ ನೀಡಿದ ಒಂದೇ ವಾರದಲ್ಲಿ ಕೋಟಿ ರೂಪಾಯಿಗೂ ಅಧಿಕ ಮೊತ್ತ ಸಂಗ್ರಹವಾಗಿರುವುದು ವಿಶೇಷ.

    ‘ಆರ್​ಆರ್​ಆರ್​’ ಶೂಟಿಂಗ್​ಗೆ ಆಲಿಯಾ ಸಿದ್ಧತೆ: ಅದಕ್ಕೂ ಮೊದಲು ‘ಗಂಗೂಬಾಯಿ..’ ಚಿತ್ರೀಕರಣದಲ್ಲೂ ಭಾಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts