ಮುಂಬೈ: ಕರೊನಾ ಎರಡನೇ ಅಲೆಯಿಂದ ಇಡೀ ದೇಶವೇ ತತ್ತರಿಸಿ ಹೋಗಿದ್ದು, ಕೋಟ್ಯಂತರ ಜನ ಸಂಕಷ್ಟದಲ್ಲಿದ್ದಾರೆ. ಇದಕ್ಕೆ ಸ್ಪಂದಿಸಿರುವ ಬಾಲಿವುಡ್ನ ಹಲವು ಸೆಲೆಬ್ರಿಟಿಗಳು ತಮ್ಮದೇ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ.
ಇದನ್ನೂ ಓದಿ: ವಿಕ್ರಮ್ ವೇದಾ ರೀಮೇಕ್ನಿಂದ ಹೃತಿಕ್ ಔಟ್?
ಈಗಾಗಲೇ ಅಕ್ಷಯ್ ಕುಮಾರ್, ಸೋನು ಸೂದ್, ಅಜಯ್ ದೇವಗನ್, ಪ್ರಿಯಾಂಕಾ ಚೋಪ್ರಾ, ಜಾಕ್ಲೀನ್ ಫರ್ನಾಂಡಿಸ್, ಸಲ್ಮಾನ್ ಖಾನ್ ಸೇರಿದಂತೆ ಹಲವರು ತಮ್ಮದೇ ರೀತಿಯಲ್ಲಿ ಸ್ಪಂದಿಸಿದ್ದಾರೆ. ಅಮಿತಾಭ್ ಬಚ್ಚನ್ ಸಹ ಈ ಸಾಲಿಗೆ ಸೇರಿದ್ದು, ಎರಡು ಕೋಟಿ ದೇಣಿಗೆ ನೀಡಿದ್ದಾರೆ.
ನವದೆಹಲಿಯ ಶ್ರೀ ಗುರು ತೇಜ್ ಬಹದ್ದೂರ್ ಕೋವಿಡ್ ಸೆಂಟರ್ಗೆ ಎರಡು ಕೋಟಿ ರೂ.ಗಳನ್ನು ಅಮಿತಾಭ್ ಬಚ್ಚನ್ ನೀಡಿದ್ದಾರೆ. ಈ ವಿಷಯವನ್ನು ಅಮಿತಾಭ್ ಎಲ್ಲೂ ಹೇಳಿಕೊಂಡಿಲ್ಲ. ಈ ಕೈಯಲ್ಲಿ ಕೊಟ್ಟಿದ್ದು, ಆ ಕೈಗೆ ಗೊತ್ತಾಗಬಾರದು ಎಂದು ಸುಮ್ಮನಾಗಿಬಿಟ್ಟಿದ್ದಾರೆ.
ಇದನ್ನೂ ಓದಿ: ಒಕ್ಕೂಟದ 3 ಸಾವಿರ ಕಾರ್ಮಿಕರಿಗೆ ರೇಷನ್ ಕಿಟ್ ವಿತರಿಸಲು ಉಪ್ಪಿ ತೀರ್ಮಾನ
ಆದರೆ, ದೆಹಲಿಯ ಸಿಖ್ ಗುರುದ್ವಾರಾ ಮ್ಯಾನೇಜ್ಮೆಂಟ್ ಕಮಿಟಿಯ ಮಂಜಿಂದಿರ್ ಸಿಂಗ್ ಸರ್ಸಾ ಈ ವಿಷಯವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಮಿತಾಭ್ ಕೊಟ್ಟ ಹಣದಲ್ಲಿ ವಿದೇಶಗಳಿಂದ ಆಕ್ಸಿಜನ್ ಸಿಲಿಂಡರ್ಗಳನ್ನು ತರಿಸಲಾಗುವುದು ಎಂದು ಹೇಳಲಾಗುತ್ತಿದೆ. ಈ ಕೋವಿಡ್ ಸೆಂಟರ್ ಇಂದಿನಿಂದ ಪ್ರಾರಂಭವಾಗಲಿದೆ.
ಒಂದು ವಾರಕ್ಕಿಂತ ಹೆಚ್ಚು ಕಾಲ ಇನ್ಸ್ಟಾಗ್ರಾಂನಲ್ಲಿ ಇರುವ ನಂಬಿಕೆ ಇಲ್ಲ: ಕಂಗನಾ