More

    ‘ಆಸೆಯೇ ದುಃಖಕ್ಕೆ ಮೂಲ’ ಎನ್ನಲಿದ್ದಾರಾ ಬಿಗ್​-ಬಿ ಅಮಿತಾಭ್ ಬಚ್ಚನ್​?

    ವಾರಾಣಸಿ: ‘ಆಸೆಯೇ ದುಃಖಕ್ಕೆ ಮೂಲ’ ಎಂದಾಕ್ಷಣ ಎಲ್ಲರ ಮನಸ್ಸಲ್ಲೂ ಒಮ್ಮೆ ಬುದ್ಧನ ನೆನಪಾಗಿ ಬಿಡುತ್ತದೆ. ನಿಜ.. ಇದು ಬುದ್ಧನ ಮಾತೇ ಆಗಿದ್ದರೂ ಸದ್ಯದಲ್ಲೇ ಇದು ಬಿಗ್​-ಬಿ ಅಮಿತಾಭ್ ಬಚ್ಚನ್​ ಬಾಯಿಂದ ಹೊರಹೊಮ್ಮಿದರೂ ಅಚ್ಚರಿ ಏನಿಲ್ಲ.

    ಏಕೆಂದರೆ ಬುದ್ಧನ ಹಲವು ಸಂದೇಶ, ಆತನ ಬದುಕು ಎಲ್ಲದಕ್ಕೂ ಬಿಗ್​-ಬಿ ಶೀಘ್ರದಲ್ಲೇ ದನಿ ಆಗಲಿದ್ದಾರೆ. ಅರ್ಥಾತ್​, ಬುದ್ಧನ ಸಂದೇಶಗಳು ಹಾಗೂ ಬದುಕನ್ನು ಆಧರಿಸಿ ನಡೆಯುವ ಧ್ವನಿ-ಬೆಳಕಿನ ಪ್ರದರ್ಶನಕ್ಕೆ ಅಮಿತಾಭ್​ ಬಚ್ಚನ್​ ಧ್ವನಿ ನೀಡಲಿದ್ದಾರೆ. ಭಗವಾನ್​ ಬುದ್ಧನ ಕುರಿತು ಇಂಥದ್ದೊಂದು ಲೈಟ್​ ಆ್ಯಂಡ್​ ಸೌಂಡ್ ಶೋ ಉತ್ತರಪ್ರದೇಶದ ಸಾರನಾಥ್​ನಲ್ಲಿ ಶೀಘ್ರದಲ್ಲೇ ಆಯೋಜನೆ ಆಗಲಿದೆ.

    ಈಗಾಗಲೇ ಮಾಡಿಕೊಂಡಿದ್ದ ಯೋಜನೆ ಪ್ರಕಾರ ಇದಕ್ಕೆ ಬಿಗ್​-ಬಿ ಸೆಪ್ಟೆಂಬರ್​ ತಿಂಗಳಾಂತ್ಯದೊಳಗೆ ಡಬ್ಬಿಂಗ್ ಮಾಡಿ ಮುಗಿಸಿರಬೇಕಿತ್ತು. ಆದರೆ ಅವರಿಗೆ ಕರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದು, ಅಕ್ಟೋಬರ್​ 25ರ ಒಳಗೆ ರೆಕಾರ್ಡಿಂಗ್ ಮುಗಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಈ ಲೈಟ್​ ಆ್ಯಂಡ್​ ಸೌಂಡ್​ ಶೋ ಈ ವರ್ಷದ ಕೊನೆಯಲ್ಲಿ ಆರಂಭಗೊಳ್ಳುವಂತೆ ತಯಾರಿಗಳು ನಡೆಯುತ್ತಿವೆ. ಬುದ್ಧನ ಬಾಲ್ಯದಿಂದ ಹಿಡಿದು ಪರಿನಿರ್ವಾಣದ ವರೆಗಿನ ಬದುಕು ಇದರಲ್ಲಿ ಅನಾವರಣ ಆಗಲಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts