ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಐಶ್ವರ್ಯಾ ರೈ ಮತ್ತು ಪುತ್ರಿ ಆರಾಧ್ಯಾ ಹೋಮ್ ಕ್ವಾರಂಟೈನ್ ಆಗಿದ್ದಾರೆ. ಇತ್ತ ಆದಷ್ಟು ಬೇಗ ಅಮಿತಾಬ್ ಕುಟುಂಬ ಈ ಕಾಯಿಲೆಯಿಂದ ಆಚೆ ಬರಲಿ. ಬೇಗ ಚೇತರಿಸಿಕೊಂಡು ಹೊರಬರಲಿ ಎಂದು ಅಭಿಮಾನಿ ಬಳಗ ಮತ್ತು ಸಿನಿಮಾ ತಾರೆಯರು ಹಾರೈಸುತ್ತಿದ್ದಾರೆ. ಇದರ ನಡುವೆಯೇ ಪಶ್ಚಿಮ ಬಂಗಾಲದ ಅಭಿಮಾನಿ ಬಳಗ ಅಮಿತಾಬ್ ಕುಟುಂಬದ ಚೇತರಿಕೆಗಾಗಿ ಸತತವಾಗಿ ಹೋಮ ಹವನ ಮಾಡುವ ಕಾರ್ಯದಲ್ಲಿ ತೊಡಗಿದೆ.
ಇದನ್ನೂ ಓದಿ: ನಾಲ್ಕು ಭಾಷೆಗಳಲ್ಲಿ ಡಬ್ ಆಗುತ್ತಿದೆ ಕನ್ನಡ್ ಗೊತ್ತಿಲ್ಲ
ಭಾನುವಾರವೇ ಅಮಿತಾಬ್ಗೆ ಕೋವಿಡ್ ಇರುವುದು ವರದಿಯಾದ ಬಳಿಕ, ಕರೊನಾ ಮಹಾಮಾರಿಯಿಂದ ಬೇಗ ಸುಧಾರಿಸಿಕೊಳ್ಳಲಿ ಎಂದು ಯಜ್ಞ ಆರಂಭಿಸಿತ್ತು ಪಶ್ಚಿಮ ಬಂಗಾಲದ ಕೋಲ್ಕತ್ತದಲ್ಲಿನ ಅಭಿಮಾನಿ ಬಳಗ. ಅದಾದ ಬಳಿಕ ಅಭಿಷೇಕ್, ಐಶ್ವರ್ಯಾ ಮತ್ತು ಆರಾಧ್ಯಾಗೂ ಪಾಸಿಟಿವ್ ಇರುವುದು ಗೊತ್ತಾಗುತ್ತಿದ್ದಂತೆ, ನಾನ್ಸ್ಟಾಪ್ ಹೋಮ ಹವನ ಮಾಡುವ ಬಗ್ಗೆ ನಿರ್ಧರಿಸಿದೆ.
ಇದನ್ನೂ ಓದಿ: ಸುಶಾಂತ್ ಸಾವಿಗೆ ಒಂದು ತಿಂಗಳು: ಡಿಪಿ ಚೇಂಜ್ ಮಾಡಿದ ಗೆಳತಿ
ಈಗಾಗಲೇ ಭಾನುವಾರದಿಂದ ಆರಂಭವಾದ ಹೋಮ ಹವನ ಪ್ರಕ್ರಿಯೆ, ಬಚ್ಚನ್ ಕುಟುಂಬ ಇದರಿಂದ ಪೂರ್ಣ ಚೇತರಿಸಿಕೊಳ್ಳುವ ವರೆಗೂ ಈ ಯಜ್ಞ ನಡೆಯಲಿದೆಯಂತೆ. ಕೋಲ್ಕತ್ತದಲ್ಲಿ ಅಮಿತಾಬ್ ಬಚ್ಚನ್ ಹೆಸರಿನಲ್ಲಿ ಅಭಿಮಾನಿಗಳು ದೇವಸ್ಥಾನ ತೆರೆದಿರುವುದು ಗೊತ್ತಿರುವ ವಿಚಾರ. ಅದೇ ದೇಗುಲದಲ್ಲಿ ಹೊಮ ಹವನ ನಡೆಯುತ್ತಿದ್ದು, ಸೀಮಿತ ಸಂಖ್ಯೆಯಲ್ಲಿ ಅಭಿಮಾನಿಗಳು ಈ ಹವನದಲ್ಲಿ ಪಾಲ್ಗೊಂಡಿದ್ದಾರೆ. (ಏಜೆನ್ಸೀಸ್)
ನಟಿ ಸಾರಾ ಅಲಿಖಾನ್ ಡ್ರೈವರ್ಗೆ ಕರೊನಾ; ಆತಂಕದಲ್ಲಿ ಸೈಫ್ ಅಲಿಖಾನ್ ಕುಟುಂಬ