More

    ಶೆಹನ್ಶಾ ದೇಗುಲದಲ್ಲಿ ನಡೆಯುತ್ತಿದೆ ಯಜ್ಞ; ಬಚ್ಚನ್​ ಕುಟುಂಬದ ಚೇತರಿಕೆಗಾಗಿ ನಾನ್​ಸ್ಟಾಪ್​ ಹೋಮ

    ಕೋವಿಡ್​ ಪಾಸಿಟಿವ್​ ಬಂದ ಹಿನ್ನೆಲೆಯಲ್ಲಿ ಅಮಿತಾಬ್​ ಬಚ್ಚನ್​ ಮತ್ತು ಅಭಿಷೇಕ್​ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಐಶ್ವರ್ಯಾ ರೈ ಮತ್ತು ಪುತ್ರಿ ಆರಾಧ್ಯಾ ಹೋಮ್ ಕ್ವಾರಂಟೈನ್​ ಆಗಿದ್ದಾರೆ. ಇತ್ತ ಆದಷ್ಟು ಬೇಗ ಅಮಿತಾಬ್​ ಕುಟುಂಬ ಈ ಕಾಯಿಲೆಯಿಂದ ಆಚೆ ಬರಲಿ. ಬೇಗ ಚೇತರಿಸಿಕೊಂಡು ಹೊರಬರಲಿ ಎಂದು ಅಭಿಮಾನಿ ಬಳಗ ಮತ್ತು ಸಿನಿಮಾ ತಾರೆಯರು ಹಾರೈಸುತ್ತಿದ್ದಾರೆ. ಇದರ ನಡುವೆಯೇ ಪಶ್ಚಿಮ ಬಂಗಾಲದ ಅಭಿಮಾನಿ ಬಳಗ ಅಮಿತಾಬ್​ ಕುಟುಂಬದ ಚೇತರಿಕೆಗಾಗಿ ಸತತವಾಗಿ ಹೋಮ ಹವನ ಮಾಡುವ ಕಾರ್ಯದಲ್ಲಿ ತೊಡಗಿದೆ.

    ಇದನ್ನೂ ಓದಿ: ನಾಲ್ಕು ಭಾಷೆಗಳಲ್ಲಿ ಡಬ್ ಆಗುತ್ತಿದೆ ಕನ್ನಡ್ ಗೊತ್ತಿಲ್ಲ

    ಭಾನುವಾರವೇ ಅಮಿತಾಬ್​ಗೆ ಕೋವಿಡ್ ಇರುವುದು ವರದಿಯಾದ ಬಳಿಕ, ಕರೊನಾ ಮಹಾಮಾರಿಯಿಂದ ಬೇಗ ಸುಧಾರಿಸಿಕೊಳ್ಳಲಿ ಎಂದು ಯಜ್ಞ ಆರಂಭಿಸಿತ್ತು ಪಶ್ಚಿಮ ಬಂಗಾಲದ ಕೋಲ್ಕತ್ತದಲ್ಲಿನ ಅಭಿಮಾನಿ ಬಳಗ. ಅದಾದ ಬಳಿಕ ಅಭಿಷೇಕ್​, ಐಶ್ವರ್ಯಾ ಮತ್ತು ಆರಾಧ್ಯಾಗೂ ಪಾಸಿಟಿವ್​ ಇರುವುದು ಗೊತ್ತಾಗುತ್ತಿದ್ದಂತೆ, ನಾನ್​ಸ್ಟಾಪ್​ ಹೋಮ ಹವನ ಮಾಡುವ ಬಗ್ಗೆ ನಿರ್ಧರಿಸಿದೆ.

    ಇದನ್ನೂ ಓದಿ: ಸುಶಾಂತ್‌ ಸಾವಿಗೆ ಒಂದು ತಿಂಗಳು: ಡಿಪಿ ಚೇಂಜ್‌ ಮಾಡಿದ ಗೆಳತಿ

    ಈಗಾಗಲೇ ಭಾನುವಾರದಿಂದ ಆರಂಭವಾದ ಹೋಮ ಹವನ ಪ್ರಕ್ರಿಯೆ, ಬಚ್ಚನ್​ ಕುಟುಂಬ ಇದರಿಂದ ಪೂರ್ಣ ಚೇತರಿಸಿಕೊಳ್ಳುವ ವರೆಗೂ ಈ ಯಜ್ಞ ನಡೆಯಲಿದೆಯಂತೆ. ಕೋಲ್ಕತ್ತದಲ್ಲಿ ಅಮಿತಾಬ್​ ಬಚ್ಚನ್​ ಹೆಸರಿನಲ್ಲಿ ಅಭಿಮಾನಿಗಳು ದೇವಸ್ಥಾನ ತೆರೆದಿರುವುದು ಗೊತ್ತಿರುವ ವಿಚಾರ. ಅದೇ ದೇಗುಲದಲ್ಲಿ ಹೊಮ ಹವನ ನಡೆಯುತ್ತಿದ್ದು, ಸೀಮಿತ ಸಂಖ್ಯೆಯಲ್ಲಿ ಅಭಿಮಾನಿಗಳು ಈ ಹವನದಲ್ಲಿ ಪಾಲ್ಗೊಂಡಿದ್ದಾರೆ. (ಏಜೆನ್ಸೀಸ್​)

    ನಟಿ ಸಾರಾ ಅಲಿಖಾನ್ ಡ್ರೈವರ್​ಗೆ ಕರೊನಾ; ಆತಂಕದಲ್ಲಿ ಸೈಫ್​ ಅಲಿಖಾನ್​ ಕುಟುಂಬ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts