More

    ಧಾರವಾಡದ ವಿಧಿ ವಿಜ್ಞಾನ ವಿವಿ ಕ್ಯಾಂಪಸ್‌ನ ಶಂಕುಸ್ಥಾಪನೆ ಮಾಡಿದ ಅಮಿತ್​ ಷಾ

    ಧಾರವಾಡ: ಇಂದು ಧಾರವಾಡದ ವಿಧಿ ವಿಜ್ಞಾನ ವಿವಿ ಕ್ಯಾಂಪಸ್‌ನ ಶಂಕು ಸ್ಥಾಪನೆಯನ್ನು ಗೃಹಮಂತ್ರಿ ಅಮಿತ್​ ಷಾ ನಡೆಸಿದ್ದು ಶಂಕುಸ್ಥಾಪನೆಗೂ ಮುಂಚೆ ವಿಧಿಯುಕ್ತ ಪೂಜೆಯನ್ನು ನಡೆಸಲಾಯಿತು.

    ಪೂಜಾ ವಿಧಿಯನ್ನು ವಿಧಿವಿಜ್ಞಾನ ವಿವಿ ಧಾರವಾಡ ಕ್ಯಾಂಪಸ್ ಉಸ್ತುವಾರಿ ಮಂಜುನಾಥ್​ ನೆರವೇರಿಸಿದರು. ಈ ಹಿನ್ನೆಲೆಯಲ್ಲಿ ಅಮಿತ್‌ ಶಾ ಪೂಜೆಯಲ್ಲಿಯೂ ಭಾಗಿಯಾಗಿದ್ದು ಅಮಿತ್​ ಷಾಗೆ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಗೃಹ ಸಚಿವ ಅರಗ ಜ್ಞಾನೇಂದ್ರ, ಹಾಲಪ್ಪ ಆಚಾರ ಸಾಥ್ ನೀಡಿದ್ದಾರೆ.

    ಮೊದಲ ಇಟ್ಟಿಗೆ ಇಟ್ಟು ಶಿಲಾನ್ಯಾಸ ಮಾಡಿದ ಅಮಿತ್​ ಷಾ, ಮಂಗಳಾರತಿ ಬೆಳಗಿದರು. ಪೂಜೆಯ ಬಳಿಕ ಅಮಿತ್​ ಷಾ ಸಹಿ ಪ್ರಸಾದವನ್ನು ಸ್ವೀಕರಿಸಿದ್ದು ಪ್ರಹ್ಲಾದ್​ ಕೋಶಿ ಜೊತೆಗೆ ಹಂಚಿಕೊಂಡು ತಿಂದಿದ್ದಾರೆ.

    ಇದೇ ಸಂದರ್ಭ ಅಮಿತ್​ ಷಾ ಶಂಕುಸ್ಥಾಪನೆಯ ಅಡಿಗಲ್ಲನ್ನೂ ಅನಾವರಣ ಮಾಡಿದ್ದಾರೆ. ಹೀಗೆ ಪೋರೆನ್ಸಿಕ್ ವಿವಿ ಕ್ಯಾಂಪಸ್ ಶಂಕುಸ್ಥಾಪನೆ ಪೂರ್ಣಗೊಂಡಿದ್ದು ಕೃಷಿ ವಿವಿ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ವೇದಿಕೆಯತ್ತ ಅಮಿತ್ ಷಾ ತೆರಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts