ಬಂಕುರಾ: ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಗೃಹ ಸಚಿವ ಅಮಿತ್ ಷಾ ಅವರು ನಿನ್ನೆ ಚತುರ್ದಿಹಿ ಗ್ರಾಮದ ಬುಡಕಟ್ಟು ಜನಾಂಗದ ಬಿಜೆಪಿ ಕಾರ್ಯಕರ್ತನ ಮನೆಯಲ್ಲಿ ಬಾಳೆಲೆ ಊಟ ಮಾಡಿದರು.
ಅಮಿತ್ ಷಾ ಅವರು ಬಿಜೆಪಿ ಕಾರ್ಯಕರ್ತ ಬಿಭೀಷಣ್ ಹನ್ಸ್ಡಾ ಅವರ ಮನೆಯಲ್ಲಿ ನೆಲದ ಮೇಲೆ ಕುಳಿತು, ಬಂಗಾಳಿ ಖಾದ್ಯಗಳಾದ ಅನ್ನ, ರೊಟ್ಟಿ, ದಾಲ್, ಪೋತೋಲ್ ಭಾಜಾ(ಸೋರೆಕಾಯಿ ಫ್ರೈ), ಶುಕ್ತೋ, (ಬಂಗಾಳದ ಪ್ರಸಿದ್ಧ ತರಕಾರಿ ಖಾದ್ಯ), ಆಲೂ ಪೋಸ್ಟೊ (ಗಸಗಸೆ ಬೀಜದ ಪೇಸ್ಟ್ನಲ್ಲಿ ಬೇಯಿಸಿದ ಆಲೂ ಖಾದ್ಯ) ಹಾಗೂ ಪಾಪಡ್ಗಳನ್ನು ಸವಿದಿದ್ದಾರೆ.ಇದರೊಂದಿಗೆ ರಸಗುಲ್ಲಾ, ಸಂಡೇಶ್ ಮತ್ತು ‘ಮಿಶ್ತಿ ದೋಯಿಯಂತಹ ಸಿಹಿತಿಂಡಿಗಳನ್ನೂ ಅಮಿತ್ ಷಾ ಅವರಿಗಾಗಿ ತಯಾರಿಸಲಾಗಿತ್ತು. ಆದರೆ ಅವರು ಅದನ್ನು ಸೇವಿಸಲಿಲ್ಲ. ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣೆ 2020 : 120 ವರ್ಷಗಳಲ್ಲೇ ಅತ್ಯಧಿಕ ಮತದಾನ ಪ್ರಮಾಣ
ಈ ವೇಳೆ ಅಮಿತ್ ಷಾ ಅವರೊಂದಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್ ಮತ್ತು ಪಕ್ಷದ ರಾಜ್ಯದ ಮುಖ್ಯಸ್ಥ ದಿಲೀಪ್ ಘೋಷ್ ಇದ್ದರು.
ಊಟದ ನಂತರ ಮನೆಯಲ್ಲಿದ್ದ ಹಗ್ಗದ ಮಂಚದ ಮೇಲೆ ಕುಳಿತ ಅಮಿತ್ ಷಾ, ಸ್ಥಳೀಯ ಜನರೊಂದಿಗೆ ಮಾತುಕತೆ ನಡೆಸಿದರು. ಇನ್ನು ಅಮಿತ್ ಷಾ ಆ ಹಳ್ಳಿಗೆ ಬರುವಾಗ ಅಲ್ಲಿನ ಜನರು, ಡ್ರಮ್ ಬಾರಿಸಿ, ಶಂಖ ಊದಿ ಮೆರವಣಿಗೆ ಮೂಲಕ ಅವರನ್ನು ಸ್ವಾಗತಿಸಿದ್ದರು.
ನನಗಂತೂ ತುಂಬ ಖುಷಿಯಾಗಿದೆ. ಅಮಿತ್ ಷಾ ಅವರಿಗೆ ಔತಣಕೂಟ ಏರ್ಪಡಿಸಿದ್ದು ನನಗೆ ಸಂತೋಷ ತಂದಿದೆ. ಇದು ನನ್ನ ಜೀವನದಲ್ಲಿ ನೆನಪಿನಲ್ಲಿ ಉಳಿಯುವ ದಿನ ಎಂದು ಬಿಜೆಪಿ ಕಾರ್ಯಕರ್ತ ಬಿಭೀಷಣ್ ಹನ್ಸ್ಡಾ ಹೇಳಿದ್ದಾರೆ. (ಏಜೆನ್ಸೀಸ್)
ಅಫಿಡವಿಟ್ನಲ್ಲಿ ಆಸ್ತಿ ವಿವರ ಮರೆಮಾಚಿ ಶಾಸಕತ್ವ ಕಳೆದುಕೊಂಡ ಮಾಜಿ ಕಾಂಗ್ರೆಸ್ ನಾಯಕ