More

    ‘ತರೂರ್​ರನ್ನು ಬಾತ್​ರೂಮಿನಲ್ಲಿ ಕೂಡಿ ಹಾಕದೆ ಇದ್ದದ್ದು ಅವರ ಪುಣ್ಯ’ ಎಂದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ…

    ನವದೆಹಲಿ: ಶಶಿ ತರೂರ್​ರನ್ನು ಬಾತ್​ರೂಮಿನಲ್ಲಿ ಕೂಡಿ ಹಾಕದೇ ಇದ್ದದ್ದು ಅವರ ಪುಣ್ಯ ಎಂದು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಕಾಂಗ್ರೆಸ್​ನ ಕಾಲೆಳೆದಿದ್ದಾರೆ.

    ‘ಶಶಿ ತರೂರ್ ಚುನಾವಣೆಯಲ್ಲಿ, ಸೋತಿದ್ದು ಅಳುಮುಂಜಿ ಆಗಿದ್ದಾರೆ. ಅವರು ಕಾಂಗ್ರೆಸ್​ನಿಂದ ನ್ಯಾಯೋಚಿತ ಚುನಾವಣೆಯನ್ನು ನಿರೀಕ್ಷಿಸಬಾರದಿತ್ತು. ಅವರನ್ನು ಬಾತ್​ರೂಮಿನಲ್ಲಿ ಕೂಡಿ ಹಾಕದೆ ಇದ್ದದ್ದು ಅವರ ಪುಣ್ಯ.’ ಎಂದು ಅಮಿತ್​ ಮಾಳವೀಯ ಹೇಳಿದ್ದಾರೆ.

    ಕಾಂಗ್ರೆಸ್ ಅಧ್ಯಕ್ಷ ಘೋಷಣೆ ಆದ ಬೆನ್ನಲ್ಲೇ ಅಮಿತ್ ಮಾಳವೀಯ ‘ಶಶಿ ತರೂರ್​ರಿಗೆ ಇನ್ನು ಕೆಟ್ಟ ದಿನಗಳು ಬರಲಿವೆ. ಗಾಂಧಿಗಳ ವಿರುದ್ಧ ಹೋದದ್ದಕ್ಕೆ ಅವರಿಗೆ ಅವಮಾನ ಮಾಡಲಾಗುವುದು’ ಎಂದು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts