ವಿಜಯವಾಣಿ ಸುದ್ದಿಜಾಲ ಗದಗ
ಅಮರನಾಥ ದರ್ಶನ ಮುಗಿಸಿ ಮರಳುವಾಗ ಶುಕ್ರವಾರ ತಡರಾತ್ರಿ ರಸ್ತೆ ಮಧ್ಯೆ ಗುಡ್ಡ ಕುಸಿತದಿಂದ ಗದಗ ನಗರದ 26 ಜನರು ಪತ್ರಗಂಜ ಎಂಬುವ ಸ್ಥಳದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ವಿನೋದ ಪಟೇಲ್, ನೀತಾ ಪಟೇಲ್, ಚಂದುಲಾಲ್, ಭಾವನಾ, ತೇಜಾ, ಶಾರಧಾ, ಬೂಮಿಕಾ, ರಿತೇಶ್, ಪ್ರವಿಣ, ಟೀನಾ, ರಾಜೇಶ್, ವೈಶಾಲಿ, ಪಾಲಕ್, ಯಶ್, ಪ್ರವಿಣ್ ಸಿ, ಪಿಂಕಿ ಪಿ, ವಿನಯ, ಜಾನವಿ, ಭವೇಶ್, ತೃಪ್ತಿ, ದೀವಿಕಾ ಮತ್ತು ಮಾಳವಿಕಾ ಸಂಕಷ್ಟಕ್ಕೆ ಸಿಲುಕಿದ ಯಾತ್ರಿಗಳು.
ರಸ್ತೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವಿಟರ್ ಮೂಲಕ ಯಾತ್ರಿಗಳು ಮನವಿ ಮಾಡಿದ್ದರು. ಈ ವಿಷಯ ಗದಗ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಗಮನಕ್ಕೆ ಬಂದಿದೆ. ಇವರನ್ನು ಮರಳಿ ಕರೆ ತರಲು ಗದಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಸ್. ನಾಮಗೌಡ ಅವರಿಂದ ಹಾಗೂ ಜಿಲ್ಲಾಡಳಿತದಿಂದ ಈಗಾಗಲೇ ಸಿದ್ಧತೆ ನಡೆಸಿದೆ. ಕೇಂದ್ರ ಸರ್ಕಾರದ ವಿಶೇಷ ಪ್ರತಿನಿಧಿಗಳು ಹಾಗೂ ಮಿಲಿಟರಿ ಪಡೆ ಸುರಕ್ಷಿತವಾಗಿ ಯಾತ್ರಿಗಳು ಊರಿಗೆ ತೆರಳಲು ಸಹಾಯ ಮಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಜಿಲ್ಲಾ ಪೊಲೀಸ್ ಇಲಾಖೆ ನಿರಂತರ ಸಂಪರ್ಕದಲ್ಲಿದೆ ಎಂದು ಎಸ್ಪಿ ಬಿ.ಎಸ್. ನೇಮಗೌಡ ತಿಳಿಸಿದ್ದಾರೆ.
ಬಾಕ್ಸ್:
ಜು.4 ರಂದು ಗದಗ ದಿಂದ ಯುಥ್ಸ್ ಅಸೋಸಿಯೇಷನ್ ವತಿಯಿಂದ 6 ಜನರ ಮತ್ತೊಂದು ತಂಡವಾಗಿ ಅಮರನಾಥ ಯಾತ್ರೆಗೆ ತೆರಳಿದ್ದು ಅವರು ಸುರತರಾಗಿದ್ದಾರೆ ಎಂದು ತಿಳಿದು ಬಂದಿದೆ. ಅಸೋಶಿಯೇಷನಿನ್ ಪ್ರಧಾನ ಕಾರ್ಯದಶಿರ್ ರಾಜು ಮುಧೋಳ, ಸಹ ಕಾರ್ಯದಶಿರ್ ಆನಂದ ಗುಡಿಮನಿ, ಸದಸ್ಯರಾದ ತಿಮ್ಮಣ್ಣ ಕೋನರೆಡ್ಡಿ, ಅಜೀತ ವಾರಕರ್, ಆನಂದ ಸೆಟರೆಡ್ಡಿ, ಮಹಾಲಿಂಗಯ್ಯ ಹಿರೇಮಠ ಅವರು ಸುರತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೋಟ್:
ಮಳೆ ನಿರಂತರವಾಗಿ ಸುರಿಯುತ್ತಿದೆ. ಏಕಾಏಕಿ ಗುಡ್ಡ ಕುಸಿತ ಪರಿಣಾಮ ಬೇಸ್ ಕ್ಯಾಂಪ್ ನಲ್ಲಿ ಇದ್ದೇವೆ. ಬೆಳಗ್ಗೆ ಮತ್ತು ಮಧ್ಯಾಹ್ನ ಊಟದ ಸಮಸ್ಯೆ ಎದುರಾಯಿತು. ಇನ್ನೂಳಿದಂತೆ ಇತರೆ ಸಮಸ್ಯೆಗಳಿಲ್ಲ.
– ವಿಶಾಲ ಮುಂದಡಾ. ಸಂಕಷ್ಟಕ್ಕೆ ಸಿಲುಕಿಕೊಂಡವರು.