More

    ‘ಸಾವಿರುಪಾಯಿಗೆ ಸ್ವರ್ಗ’ ತೋರಿಸ್ತಾರಂತೆ ಅಲ್ಲು ರಘು …

    ಬೆಂಗಳೂರು: ‘ಟಿಕ್​ಟಾಕ್​’ ಇದ್ದಾಗ ರೀಲ್ಸ್​ ಮಾಡಿ, ‘ಟಿಕ್​ಟಾಕ್​ ಸ್ಟಾರ್​’ ಎಂದೇ ಜನಪ್ರಿಯರಾಗಿದ್ದ ಅಲ್ಲು ರಘು, ಇದೀಗ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಮೊದಲ ಪ್ರಯತ್ನವಾಗಿ ‘ಸಾವಿರುಪಾಯಿಗೆ ಸ್ವರ್ಗ’ ಎಂಬ ಕಿರುಚಿತ್ರವನ್ನು ಸದ್ದಿಲ್ಲದೆ ನಿರ್ದೇಶನ ಮಾಡಿದ್ದಾರೆ.

    ಇದನ್ನೂ ಓದಿ: ಒಂದೇ ದಿನ ಬಿಡುಗಡೆಯಾಗಲಿದೆ ಅದಿತಿ ಅಭಿನಯದ ಎರಡು ಚಿತ್ರಗಳು …

    ‘ಸಾವಿರುಪಾಯಿಗೆ ಸ್ವರ್ಗ’ ಚಿತ್ರಕ್ಕೆ ಅಲ್ಲು ರಘು ಕಥೆ ಬರೆದು ನಿರ್ದೇಶನ ಮಾಡಿದ್ದು, ಶಿವಪುತ್ರ, ವರುಣ್ ಆರಾಧ್ಯ, ರಶ್ಮಿತ ಗೌಡ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಿರುಚಿತ್ರಕ್ಕೆ ರಾಘವ್​ ಹಾಗೂ ಅಭಿನಂದನ್​ ಅವರ ಸಂಗೀತ ಮತ್ತು ನವೀನ್​ ಕುಮಾರ್​ ಚಲ್ಲ ಛಾಯಾಗ್ರಹಣವಿದೆ.

    ಈ ಕಿರುಚಿತ್ರದ ಬಗ್ಗೆ ಮಾತನಾಡುವ ರಘು, ‘ನನಗೆ ಚಿಕ್ಕ ವಯಸ್ಸಿನಿಂದಲೂ ಸಿನಿಮಾಗಳು ತುಂಬಾ ಇಷ್ಟ. ಉಪೇಂದ್ರ, ಕಾಶಿನಾಥ್ ನನಗೆ ಸ್ಪೂರ್ತಿ. ಆ ಸ್ಫೂರ್ತಿಯಿಂದಲೇ ಒಂದು ಪ್ರಯತ್ನ ಮಾಡಿದ್ದೇನೆ’ ಎನ್ನುತ್ತಾರೆ.

    ಇದನ್ನೂ ಓದಿ: ‘ವೈಶಂಪಾಯನ ತೀರ’ದಲ್ಲಿ ಪ್ರಕೃತಿ ಮತ್ತು ಮನುಷ್ಯನ ಸಂಘರ್ಷ …

    ರಘು ಮೊದಲು ಒಂದು ಸಿನಿಮಾ ಮಾಡುವ ಉದ್ದೇಶವಿತ್ತಂತೆ. ಆದರೆ, ಅದು ಅಷ್ಟು ಸುಲಭವಲ್ಲ, ಮೊದಲು ಒಂದು ಕಿರುಚಿತ್ರ ಮಾಡಿ ಅನುಭವ ಪಡೆದುಕೋ ಎಂದು ಸಲಹೆ ನೀಡಿದವರು ಸಂಕಲನಕಾರ ಕೃಷ್ಣ ಸುಜನ್​. ಅವರು ಮತ್ತು ರಘು ಬಹಳ ವರ್ಷಗಳ ಸ್ನೇಹಿತರಂತೆ. ಆ ಸಲಹೆ ಮೇರೆಗೆ ರಘು ಈ ಕಿರುಚಿತ್ರ ಮಾಡಿದ್ದಾರೆ.

    20ನೇ ವಯಸ್ಸಿಗೇ ಇಷ್ಟೊಂದು ಆಸ್ತಿ ಮಾಡಿದ್ದಳು ನಟಿ ತುನಿಷಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts