ಬೆಂಗಳೂರು: ‘ಟಿಕ್ಟಾಕ್’ ಇದ್ದಾಗ ರೀಲ್ಸ್ ಮಾಡಿ, ‘ಟಿಕ್ಟಾಕ್ ಸ್ಟಾರ್’ ಎಂದೇ ಜನಪ್ರಿಯರಾಗಿದ್ದ ಅಲ್ಲು ರಘು, ಇದೀಗ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಮೊದಲ ಪ್ರಯತ್ನವಾಗಿ ‘ಸಾವಿರುಪಾಯಿಗೆ ಸ್ವರ್ಗ’ ಎಂಬ ಕಿರುಚಿತ್ರವನ್ನು ಸದ್ದಿಲ್ಲದೆ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: ಒಂದೇ ದಿನ ಬಿಡುಗಡೆಯಾಗಲಿದೆ ಅದಿತಿ ಅಭಿನಯದ ಎರಡು ಚಿತ್ರಗಳು …
‘ಸಾವಿರುಪಾಯಿಗೆ ಸ್ವರ್ಗ’ ಚಿತ್ರಕ್ಕೆ ಅಲ್ಲು ರಘು ಕಥೆ ಬರೆದು ನಿರ್ದೇಶನ ಮಾಡಿದ್ದು, ಶಿವಪುತ್ರ, ವರುಣ್ ಆರಾಧ್ಯ, ರಶ್ಮಿತ ಗೌಡ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಿರುಚಿತ್ರಕ್ಕೆ ರಾಘವ್ ಹಾಗೂ ಅಭಿನಂದನ್ ಅವರ ಸಂಗೀತ ಮತ್ತು ನವೀನ್ ಕುಮಾರ್ ಚಲ್ಲ ಛಾಯಾಗ್ರಹಣವಿದೆ.
ಈ ಕಿರುಚಿತ್ರದ ಬಗ್ಗೆ ಮಾತನಾಡುವ ರಘು, ‘ನನಗೆ ಚಿಕ್ಕ ವಯಸ್ಸಿನಿಂದಲೂ ಸಿನಿಮಾಗಳು ತುಂಬಾ ಇಷ್ಟ. ಉಪೇಂದ್ರ, ಕಾಶಿನಾಥ್ ನನಗೆ ಸ್ಪೂರ್ತಿ. ಆ ಸ್ಫೂರ್ತಿಯಿಂದಲೇ ಒಂದು ಪ್ರಯತ್ನ ಮಾಡಿದ್ದೇನೆ’ ಎನ್ನುತ್ತಾರೆ.
ಇದನ್ನೂ ಓದಿ: ‘ವೈಶಂಪಾಯನ ತೀರ’ದಲ್ಲಿ ಪ್ರಕೃತಿ ಮತ್ತು ಮನುಷ್ಯನ ಸಂಘರ್ಷ …
ರಘು ಮೊದಲು ಒಂದು ಸಿನಿಮಾ ಮಾಡುವ ಉದ್ದೇಶವಿತ್ತಂತೆ. ಆದರೆ, ಅದು ಅಷ್ಟು ಸುಲಭವಲ್ಲ, ಮೊದಲು ಒಂದು ಕಿರುಚಿತ್ರ ಮಾಡಿ ಅನುಭವ ಪಡೆದುಕೋ ಎಂದು ಸಲಹೆ ನೀಡಿದವರು ಸಂಕಲನಕಾರ ಕೃಷ್ಣ ಸುಜನ್. ಅವರು ಮತ್ತು ರಘು ಬಹಳ ವರ್ಷಗಳ ಸ್ನೇಹಿತರಂತೆ. ಆ ಸಲಹೆ ಮೇರೆಗೆ ರಘು ಈ ಕಿರುಚಿತ್ರ ಮಾಡಿದ್ದಾರೆ.