ಮೈಸೂರು: ಹರಿಯಾಣದ ಚೌಧರಿ ಬನ್ಸಿಲಾಲ್ ವಿಶ್ವವಿದ್ಯಾಲಯದಲ್ಲಿ ಮಾರ್ಚ್ 7 ರಿಂದ 10 ರವರೆಗೆ ನಡೆಯಲಿರುವ 2021-22ನೇ ಸಾಲಿನ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ಕುಸ್ತಿ ಪಂದ್ಯಾವಳಿಗೆ ಮೈಸೂರು ವಿವಿ ತಂಡವನ್ನು ಆಯ್ಕೆ ಮಾಡಲಾಗಿದೆ.
ವಿವಿಯ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಸ್ಪೋರ್ಟ್ಸ್ ಪೆವಿಲಿಯನ್ ಮೈದಾನದಲ್ಲಿ ಇತ್ತೀಚೆಗೆ ತಂಡದ ಆಯ್ಕೆ ಪ್ರಕ್ರಿಯೆ ನಡೆದಿದೆ.
ಪಿಜಿಎಸ್ಇ ಮಾನಸ ಗಂಗೋತ್ರಿಯ ಎಸ್.ರಾಕೇಶ್(ನಾಯಕ), ಎಸ್.ಬಿ.ಆರ್.ಆರ್ ಮಹಾಜನ ಕಾಲೇಜಿನ ಯೋಗೇಶ್ ನಾಯಕ, ಸೋಮಾನಿ ಪ್ರಥಮ ದರ್ಜೆ ಕಾಲೇಜಿನ ಸುಹಾಸ್, ರಾಜೇಂದ್ರ, ಚೇತನ್, ಡಿ. ಬನಮ್ಯಯ ಕಾಲೇಜಿನ ಎಸ್.ಸಂತೋಷ್, ಮಂಡ್ಯ ಪಿಇಎಸ್ ಕಾಲೇಜಿನ ಎಸ್.ಯಶವಂತ್, ಎಚ್.ಎಂ.ಪ್ರೇಮ್, ಊಟಿ ರಸ್ತೆಯ ಜೆಎಸ್ಎಸ್ ಕಾಲೇಜಿನ ಕೆ.ಚೇತನ್ಗೌಡ, ಬಿಷಪ್ ನಾರ್ಮನ್ನ ಜಿ.ಭೈರಪ್ಪ ನಾಯಕ, ವಿಜಯ ಕಾಲೇಜಿನ ಅರವಿಂದ ಠಾಕೂರ್, ಎನ್ಐಇ ಕಾಲೇಜಿನ ಆರ್.ಶಕ್ತಿ, ವಿದ್ಯಾಶ್ರಮ ಪ್ರಥಮ ದರ್ಜೆ ಕಾಲೇಜಿನ ಜೆ.ವರುಣ್ ಆಯ್ಕೆಯಾಗಿದ್ದಾರೆ.
ತರಬೇತುದಾರ ಎಲ್.ಮಂಜಪ್ಪ, ವ್ಯವಸ್ಥಾಪಕ ಆರ್.ರಮೇಶ್ ಜತೆ ತಮ್ಮ ತಂಡ ಹರಿಯಾಣದ ಚೌಧರಿ ಬನ್ಸಿಲಾಲ್ ವಿವಿಗೆ ಪ್ರಯಾಣ ಬೆಳೆಸಿದೆ ಎಂದು ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.