More

    ಅಕ್ಷಯ್​ ಕುಮಾರ್ ಜತೆ ಸೂರ್ಯವಂಶಿ ಚಿತ್ರದಲ್ಲಿ ನಟಿಸಿದ ಕಲಾವಿದ ಇದೀಗ ತರಕಾರಿ ವ್ಯಾಪಾರಿ!

    ಕಳೆದ ನಾಲ್ಕು ತಿಂಗಳಿಂದ ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಿನಿಮಾ ಕ್ಷೇತ್ರ ಸಂಪೂರ್ಣ ಸ್ಥಗಿತಗೊಂಡಿತ್ತು. ಈಗೀಗ ಚಿತ್ರೀಕರಣ ನಡೆಯುತ್ತಿದೆಯಾದರೂ, ಮೊದಲಿನಷ್ಟು ಬಿರುಸಾಗಿಲ್ಲ. ಹಾಗಾಗಿ ಕೆಲಸ ಇಲ್ಲದೆ, ಸಿಕ್ಕ ಸಿಕ್ಕ ಉದ್ಯೋಗದಲ್ಲಿ ತೊಡಗಿಸಿಕೊಂಡ ಕಲಾವಿದರೇ ಹೆಚ್ಚು. ಇದೀಗ ಇಲ್ಲೊಬ್ಬ ಸಿನಿಮಾ ಕಲಾವಿದ, ನಟನೆ ಕಯ ಬಿಟ್ಟು ತರಕಾರಿ ಮಾರಾಟಕ್ಕೆ ಇಳಿದಿದ್ದಾನೆ!

    ಇದನ್ನೂ ಓದಿ: ಪವನ್​ ಕಲ್ಯಾಣ್​ ಹೊಸ ಅವತಾರಕ್ಕೆ ಕಾರಣವೇನು? ಕೊನೆಗೂ ಸಿಕ್ತು ಉತ್ತರ!

    ರೋಹಿತ್​ ಶೆಟ್ಟಿ ನಿರ್ದೇಶನದಲ್ಲಿ ಅಕ್ಷಯ್​ ಕುಮಾರ್ ನಾಯಕತ್ವದಲ್ಲಿ ಸೂರ್ಯವಂಶಿ ಸಿನಿಮಾ ಸಿದ್ಧವಾಗಿದೆ. ಆ ಸಿನಿಮಾದಲ್ಲಿ ಒಂದು ಪಾತ್ರ ನಿಭಾಯಿಸಿದ್ದ ಒಡಿಶಾದ ಕಾರ್ತಿಕ್​ ಸಾಹೋ, ಇದೀಗ ತರಕಾರಿ ವ್ಯಾಪಾರದಲ್ಲಿ ನಿರತರಾಗಿದ್ದಾರೆ. ಅದರಲ್ಲಿ ಸದ್ಯ ಸಂಪಾದನೆ ಮುಂದುವರಿಸಿದ್ದು, ಮುಂದಿನ ದಿನಗಳಲ್ಲಿ ಸಿನಿಮಾಕ್ಷೇತ್ರದ ಬೆಳವಣಿಗೆ ನೋಡಿಕೊಂಡು ಮತ್ತೆ ಮುಂಬೈನತ್ತ ಬರುವ ಯೋಚನೆಯಲ್ಲಿದ್ದಾರೆ.

    ಇದನ್ನೂ ಓದಿ: ನಾನು ಡ್ರಾಮಾ ಮಾಡ್ತಿಲ್ಲ ಎಂದು ಆಸ್ಪತ್ರೆಯಿಂದಲೇ ವಿಡಿಯೋ ಪೋಸ್ಟ್ ಮಾಡಿದ ನಟಿ ವಿಜಯಲಕ್ಷ್ಮೀ

    ಕಾರ್ತಿಕ್​ ಸಾಹೋ 17 ವರ್ಷದವನಿದ್ದಾಗಲೇ, ಮುಂಬೈಗೆ ಆಗಮಿಸಿದ್ದ. ಆರಂಭದಲ್ಲಿ ಅಮಿತಾಬ್​ ಬಚ್ಚನ್​, ಸಚಿನ್​ ತೆಂಡೂಲ್ಕರ್​ಗೆ ಬಾಡಿಗಾರ್ಡ್ ಆಗಿ ಕೆಲಸ ಮಾಡಿದ್ದರು. ಕೆಲ ಸಿನಿಮಾಗಳಲ್ಲಿ ಸಾಹಸ ಸನ್ನಿವೇಶಗಳಲ್ಲಿಯೂ ಕಾಣಿಸಿಕೊಂಡಿದ್ದರು. ಇದೀಗ ಅದೆಲ್ಲದಕ್ಕೂ ತಾತ್ಕಾಲಿಕ ಗುಡ್​ ಬೈ ಹೇಳಿ ತರಕಾರಿ ಮಾರಾಟ ಮಾಡುತ್ತಿದ್ದಾರೆ. (ಏಜೆನ್ಸೀಸ್​)​

    ಸುಶಾಂತ್​ ಆತ್ಮಹತ್ಯೆಗೆ ರಿಯಾ ಚಕ್ರವರ್ತಿ ಪ್ರಚೋದನೆ, ದೂರು ದಾಖಲಿಸಿದ ರಜಪೂತ್​ ತಂದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts