ಮುಂಬೈ: ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ಅಕ್ಷಯ್ ಕುಮಾರ್ ಹೆಸರನ್ನು ತಳುಕು ಹಾಕಿದ್ದ ಯೂಟ್ಯೂಬರ್ಗೆ ಇದೀಗ ಸಂಕಷ್ಟ ಎದುರಾಗಿದೆ. ಯಾವುದೇ ಸೂಕ್ತ ಸಾಕ್ಷ್ಯ ಇಲ್ಲದೆ ಸುಳ್ಳು ಸುದ್ದಿ ಪ್ರಸಾರ ಬಿತ್ತರಿಸಿದ್ದಕ್ಕೆ ನಟ ಅಕ್ಷಯ್ ಕುಮಾರ್ ಯೂಟ್ಯೂಬರ್ ರಶೀದ್ ಸಿದ್ದಿಕಿ ವಿರುದ್ಧ ಬರೋಬ್ಬರಿ 500 ಕೋಟಿ ರೂಪಾಯಿ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಇದನ್ನೂ ಓದಿ: ಶೂಟಿಂಗ್ ಶುರುವಾಗುವುದಕ್ಕೂ ಮುನ್ನವೇ ‘ಆದಿಪುರುಷ್’ ರಿಲೀಸ್ ದಿನಾಂಕ ಪ್ರಕಟ
ಇತ್ತೀಚೆಗಷ್ಟೇ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮತ್ತವರ ಪುತ್ರ ಆದಿತ್ಯಾ ಠಾಕ್ರೆ ವಿರುದ್ಧವೂ ಒಂದಷ್ಟು ಸುಳ್ಳು ಮಾಹಿತಿಯನ್ನು ಹರಿಬಿಟ್ಟ ಆರೋಪದಡಿ ರಶೀದ್ ಸಿದ್ದಿಕಿಯನ್ನು ಬಂಧಿಸಲಾಗಿತ್ತು. ಬಳಿಕ ಬೇಲ್ ಪಡೆದು ಮರಳಿದ್ದ ರಶೀದ್ ವಿರುದ್ಧ ಇದೀಗ 500 ಕೋಟಿಯ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಿದ್ದಾರೆ ಅಕ್ಷಯ್.
ಅಂದಹಾಗೆ, ಜೂನ್ 7ರಂದು ಆತ್ಮಹತ್ಯೆ ಮಾಡಿಕೊಂಡ ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಅಕ್ಷಯ್ ಕುಮಾರ್ ಹೆಸರನ್ನು ರಶೀದ್ ಸೇರಿಸಿದ್ದ. ಸುಶಾಂತ್ ಪ್ರೇಯಸಿ ರಿಯಾ ಕೆನಡಾಕ್ಕೆ ಹೋಗಲು ಅಕ್ಷಯ್ ಕುಮಾರ್ ಸಹಾಯ ಮಾಡಿದ್ದಾರೆ. ಅಷ್ಟೇ ಅಲ್ಲ ಉದ್ಧವ್ ಠಾಕ್ರೆ ಮತ್ತು ಪುತ್ರ ಆದಿತ್ಯಾ ಠಾಕ್ರೆ ಜತೆಗೆ ಗುಪ್ತವಾಗಿ ಮಾತುಕತೆ ನಡೆಸಿ ಈ ಕೃತ್ಯ ಎಸೆಗಿದ್ದಾರೆ ಎಂಬ ಸುಳ್ಳು ವದಂತಿಯನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ್ದ.
ಇದನ್ನೂ ಓದಿ: ಭೋಜಪುರಿಗೆ ಹರ್ಷಿಕಾ; ಲಂಡನ್ನಲ್ಲಿ ಇಡೀ ಚಿತ್ರದ ಚಿತ್ರೀಕರಣ
ಆ ವಿಡಿಯೋವೊಂದರಿಂದಲೇ ಬರೋಬ್ಬರಿ 15 ಲಕ್ಷ ಆದಾಯ ರಶೀದ್ಗೆ ಬಂದಿತ್ತು. ಮೂಲತಃ ಬಿಹಾರದ ರಶೀದ್, ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್. (ಏಜೆನ್ಸಿಸ್)
ಅಮಿತಾಬ್ ಚಿತ್ರಕ್ಕೆ ಅಜಯ್ ದೇವ್ಗನ್ ಆ್ಯಕ್ಷನ್ ಕಟ್; ರಾಕುಲ್ ಪ್ರೀತ್ ನಾಯಕಿ