More

    ಯೂಟ್ಯೂಬರ್​ ವಿರುದ್ಧ 500 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹಾಕಿದ ಅಕ್ಷಯ್​ ಕುಮಾರ್​

    ಮುಂಬೈ: ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣದಲ್ಲಿ ಅಕ್ಷಯ್​ ಕುಮಾರ್ ಹೆಸರನ್ನು ತಳುಕು ಹಾಕಿದ್ದ ಯೂಟ್ಯೂಬರ್​ಗೆ ಇದೀಗ ಸಂಕಷ್ಟ ಎದುರಾಗಿದೆ. ಯಾವುದೇ ಸೂಕ್ತ ಸಾಕ್ಷ್ಯ ಇಲ್ಲದೆ ಸುಳ್ಳು ಸುದ್ದಿ ಪ್ರಸಾರ ಬಿತ್ತರಿಸಿದ್ದಕ್ಕೆ ನಟ ಅಕ್ಷಯ್​ ಕುಮಾರ್ ಯೂಟ್ಯೂಬರ್​ ರಶೀದ್​ ಸಿದ್ದಿಕಿ ವಿರುದ್ಧ ಬರೋಬ್ಬರಿ 500 ಕೋಟಿ ರೂಪಾಯಿ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

    ಇದನ್ನೂ ಓದಿ: ಶೂಟಿಂಗ್​ ಶುರುವಾಗುವುದಕ್ಕೂ ಮುನ್ನವೇ ‘ಆದಿಪುರುಷ್’ ರಿಲೀಸ್ ದಿನಾಂಕ ಪ್ರಕಟ

    ಇತ್ತೀಚೆಗಷ್ಟೇ ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ಮತ್ತವರ ಪುತ್ರ ಆದಿತ್ಯಾ ಠಾಕ್ರೆ ವಿರುದ್ಧವೂ ಒಂದಷ್ಟು ಸುಳ್ಳು ಮಾಹಿತಿಯನ್ನು ಹರಿಬಿಟ್ಟ ಆರೋಪದಡಿ ರಶೀದ್​ ಸಿದ್ದಿಕಿಯನ್ನು ಬಂಧಿಸಲಾಗಿತ್ತು. ಬಳಿಕ ಬೇಲ್ ಪಡೆದು ಮರಳಿದ್ದ ರಶೀದ್​ ವಿರುದ್ಧ ಇದೀಗ 500 ಕೋಟಿಯ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಿದ್ದಾರೆ ಅಕ್ಷಯ್​.

    ಅಂದಹಾಗೆ, ಜೂನ್​ 7ರಂದು ಆತ್ಮಹತ್ಯೆ ಮಾಡಿಕೊಂಡ ಸುಶಾಂತ್​ ಸಿಂಗ್​ ಸಾವಿನ ಪ್ರಕರಣದಲ್ಲಿ ಅಕ್ಷಯ್​ ಕುಮಾರ್​ ಹೆಸರನ್ನು ರಶೀದ್​ ಸೇರಿಸಿದ್ದ. ಸುಶಾಂತ್​ ಪ್ರೇಯಸಿ ರಿಯಾ ಕೆನಡಾಕ್ಕೆ ಹೋಗಲು ಅಕ್ಷಯ್​ ಕುಮಾರ್ ಸಹಾಯ ಮಾಡಿದ್ದಾರೆ. ಅಷ್ಟೇ ಅಲ್ಲ ಉದ್ಧವ್ ಠಾಕ್ರೆ ಮತ್ತು ಪುತ್ರ ಆದಿತ್ಯಾ ಠಾಕ್ರೆ ಜತೆಗೆ ಗುಪ್ತವಾಗಿ ಮಾತುಕತೆ ನಡೆಸಿ ಈ ಕೃತ್ಯ ಎಸೆಗಿದ್ದಾರೆ ಎಂಬ ಸುಳ್ಳು ವದಂತಿಯನ್ನು ಯೂಟ್ಯೂಬ್​ನಲ್ಲಿ ಅಪ್​ಲೋಡ್ ಮಾಡಿದ್ದ.

    ಇದನ್ನೂ ಓದಿ: ಭೋಜಪುರಿಗೆ ಹರ್ಷಿಕಾ; ಲಂಡನ್​ನಲ್ಲಿ ಇಡೀ ಚಿತ್ರದ ಚಿತ್ರೀಕರಣ

    ಆ ವಿಡಿಯೋವೊಂದರಿಂದಲೇ ಬರೋಬ್ಬರಿ 15 ಲಕ್ಷ ಆದಾಯ ರಶೀದ್​ಗೆ ಬಂದಿತ್ತು. ಮೂಲತಃ ಬಿಹಾರದ ರಶೀದ್​, ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್. (ಏಜೆನ್ಸಿಸ್​)

    ಅಮಿತಾಬ್​ ಚಿತ್ರಕ್ಕೆ ಅಜಯ್​ ದೇವ್​ಗನ್ ಆ್ಯಕ್ಷನ್​ ಕಟ್​; ರಾಕುಲ್​ ಪ್ರೀತ್​ ನಾಯಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts