ನವದೆಹಲಿ: ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬರುತ್ತಿದೆ. ಈ ಕಷ್ಟದ ಸಮಯದಲ್ಲಿ ಸೋಂಕಿತರ ಸಹಾಯಕ್ಕೆ ಅನೇಕರು ಮುಂದಾಗಿದ್ದಾರೆ. ಅದರಂತೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡ ಸೋಂಕಿತರ ನೆರವಿಗೆ ಮುಂದೆ ಬಂದಿದ್ದಾರೆ.
ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ನಡೆಸುತ್ತಿರುವ ಗಂಭೀರ್ ಫೌಂಡೇಷನ್ಗೆ ನಟ ಅಕ್ಷಯ್ ಕುಮಾರ್ 1 ಕೋಟಿ ರೂಪಾಯಿ ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಆ ಹಣವನ್ನು ಸೋಂಕಿತರ ಆಹಾರ, ಆಕ್ಸಿಜನ್ ಸೇರಿ ವಿವಿಧ ಬೇಡಿಕೆಗಳಿಗೆ ಬಳಸಿಕೊಳ್ಳುವಂತೆ ತಿಳಿಸಿದ್ದಾರೆ.
Every help in this gloom comes as a ray of hope. Thanks a lot @akshaykumar for committing Rs 1 crore to #GGF for food, meds and oxygen for the needy! God bless 🙏🏻 #InThisTogether @ggf_india
— Gautam Gambhir (@GautamGambhir) April 24, 2021
ಅಕ್ಷಯ್ ಅವರು ಈ ರೀತಿ ಸಹಾಯ ಹಸ್ತ ಚಾಚಿರುವ ಬಗ್ಗೆ ಗೌತಮ್ ಗಂಭೀರ್ ಟ್ವಿಟ್ಟರ್ನಲ್ಲಿ ಮಾಹಿತಿ ನೀಡಿದ್ದಾರೆ. ನೆರವು ನೀಡಲು ಮುಂದೆ ಬಂದಿದ್ದಕ್ಕಾಗಿ ಧನ್ಯವಾದಗಳು. ಕತ್ತಲೆಯಲ್ಲಿ ಮುಳುಗಿರುವಾಗ ಪ್ರತಿ ಸಹಾಯವೂ ಭರವಸೆಯ ಕಿರಣವಾಗುತ್ತದೆ. ನಿಮಗೆ ದೇವರು ಒಳ್ಳೆಯದು ಮಾಡಲಿ ಎಂದು ಟ್ವೀಟ್ ಮಾಡಿದ್ದಾರೆ. ಅಂದ ಹಾಗೆ ಅಕ್ಷಯ್ ಕುಮಾರ್ ಅವರು ಕಳೆದ ವರ್ಷ ಕೂಡ ಪಿಎಂ ಕೇರ್ಸ್ ಗೆ 25 ಕೋಟಿ ರೂಪಾಯಿ ದೇಣಿಗೆ ನೀಡಿದ್ದರು. (ಏಜೆನ್ಸೀಸ್)
ಏ.. ಲೈನ್ ಬಿಟ್ಟು ಮುಂದೋಗ್ತೀಯಾ? ಜಿಲ್ಲಾಸ್ಪತ್ರೆಯಲ್ಲೇ ಜನರ ಮಾರಾಮಾರಿ
ಫ್ರೆಂಡ್ಸ್ ಜತೆ ಹೊರಗೆ ಸುತ್ತಾಡಿದನೆಂದು 9 ವರ್ಷದ ಮಗನನ್ನೇ ಕೊಂದ ಅಪ್ಪ!