More

    ಕೃಷ್ಣನಿಗೆ ‘ಕೃಷ್ಣ’ ಸಾಥ್​; ದಿಲ್​ ಪಸಂದ್ ಚಿತ್ರದಲ್ಲಿ ಅಜೇಯ್​ ರಾವ್​ ವಿಶೇಷ ಪಾತ್ರ

    ‘ಡಾರ್ಲಿಂಗ್’ ಕೃಷ್ಣ ನಾಯಕರಾಗಿ ನಟಿಸಿರುವ ‘ದಿಲ್ ಪಸಂದ್’ ಚಿತ್ರವುವೆಂಬರ್ 11ರಂದು ರಾಜ್ಯಾದ್ಯಂತ ಬಿಡುಗಡೆಯಾಗತ್ತಿದೆ. ಈ ಮಧ್ಯೆ, ಚಿತ್ರತಂಡದಿಂದ ಸರ್​ಪ್ರೈಸ್ ಸುದ್ದಿಯೊಂದು ಹೊರಬಿದ್ದಿದ್ದು, ಅಜೇಯ್​ ರಾವ್​ ಚಿತ್ರದಲ್ಲೊಂದು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಇದನ್ನೂ ಓದಿ: ದೀಪಾವಳಿ ಸಂಭ್ರಮದಲ್ಲಿ ರಶ್ಮಿಕಾ: ಶೂಟಿಂಗ್​ಗೆ ರಜೆ ಹಾಕಿ ಮನೆಯಲ್ಲಿ ಹಬ್ಬ ಆಚರಣೆ

    ರಶ್ಮಿ ಫಿಲಂಸ್ ಲಾಂಛನದಲ್ಲಿ ಸುಮಂತ್ ಕ್ರಾಂತಿ ನಿರ್ಮಿಸಿರುವ ‘ದಿಲ್​ ಪಸಂದ್​’ ಚಿತ್ರವನ್ನು ಶಿವತೇಜಸ್​ ನಿರ್ದೇಶನ ಮಾಡಿದ್ದಾರೆ. ಪ್ರೇಮಕಥೆಯೊಂದಿಗೆ ಫ್ಯಾಮಿಲಿ ಸೆಂಟಿಮೆಂಟ್​ ಇರುವ ಈ ಚಿತ್ರದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಮುಕ್ತಾಯದ ಹಂತ ತಲುಪಿದ್ದು, ಸದ್ಯದಲ್ಲೇ ಚಿತ್ರವನ್ನು ಸೆನ್ಸಾರ್​ ಮಂಡಳಿ ವೀಕ್ಷಿಸಿ, ಪ್ರಮಾಣ ಪತ್ರ ನೀಡಲಿದೆ.

    ಅಂದಹಾಗೆ, ಅಜೇಯ್​ ರಾವ್​ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರೂ, ಚಿತ್ರಕ್ಕೆ ಟ್ವಿಸ್ಟ್​ ಕೊಡುತ್ತಾರಂತೆ. ದ್ವಿತೀಯಾರ್ಧದಲ್ಲಿ ಅವರ ಪಾತ್ರ ಬರಲಿದ್ದು, ಚಿತ್ರಕ್ಕೆ ಅವರು ಯಾವ ತರಹ ಟ್ವಿಸ್ಟ್​ ಕೊಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ.

    ಇದನ್ನೂ ಓದಿ: ಮಗಳು ಅವೆಲ್ಲ ಅರ್ಥವಾಗದಷ್ಟು ಚಿಕ್ಕವಳು: ಕೊಹ್ಲಿ ಆಟಕ್ಕೆ ಸಂಭ್ರಮಿಸಿ ಅನುಷ್ಕಾ ಪ್ರತಿಕ್ರಿಯಿಸಿದ್ದು ಹೀಗೆ..

    ಕೃಷ್ಣಗೆ ನಾಯಕಿಯಾಗಿ ನಿಶ್ವಿಕಾ‌ ನಾಯ್ಡು ಮತ್ತು ಮೇಘ ಶೆಟ್ಟಿ ನಟಿಸಿದ್ದು, ಮಿಕ್ಕಂತೆ ಸಾಧು ಕೋಕಿಲ, ರಂಗಾಯಣ ರಘು, ತಬಲ ನಾಣಿ, ಗಿರಿ, ಅರುಣಾ ಬಾಲರಾಜ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಜುನ್​ ಜನ್ಯ ಅವರ ಸಂಗೀತ, ಶೇಖರ್ ಚಂದ್ರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಈಗಾಗಲೇ ‘ದಿಲ್​ ಪಸಂದ್​’ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದೆ.

    ಗುರೂಜಿ ಆಕೆಯನ್ನಷ್ಟೇ ಹೊಗಳುತ್ತಿದ್ದರು; ಪ್ರಿಯಾಂಕಾ ನನಗಿಂತ ಉತ್ತಮ ಡಾನ್ಸರ್ ಎಂದ ಕತ್ರಿನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts