ಮಳವಳ್ಳಿ: ಪಟ್ಟಣದ ಕೇಶವಮೂರ್ತಿ ಪುತ್ರಿ ಐಶ್ವರ್ಯಾಲಕ್ಷ್ಮೀ ಅವರು ಶಾಲಾ ಶಿಕ್ಷಣ ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಜೂಡೋ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪಟ್ಟಣದ ಶಿವನ್ ಸ್ಕೂಲ್ ಆಫ್ ಡಾನ್ಸ್, ಕರಾಟೆ, ಜೂಡೋ ಶಾಲೆಯಲ್ಲಿ ತರಬೇತಿ ಪಡೆದಿದ್ದ ಇವರು, ಇತ್ತೀಚೆಗೆ ರಾಮನಗರದಲ್ಲಿ ನಡೆದಿದ್ದ ಕುಸ್ತಿಯಲ್ಲಿ ತೃತಿಯ ಹಾಗೂ ಜೂಡೋ ಪಂದ್ಯದಲ್ಲಿ ಪ್ರಥಮ ಸ್ಥಾನ ಗಳಿಸಿದ್ದರು. ಜ.11 ರಿಂದ 15 ರವರೆಗೆ ರಾಜಸ್ಥಾನದಲ್ಲಿ ನಡೆಯುತ್ತಿರುವ ರಾಷ್ಟ್ರ ಮಟ್ಟದ ಜೂಡೋ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದಾರೆ. ವಿದ್ಯಾರ್ಥಿನಿ ಐಶ್ವರ್ಯಾ ಲಕ್ಷ್ಮೀ ಅವರು ವಿಜೇತರಾಗುವ ಮೂಲಕ ರಾಷ್ಟ್ರಕ್ಕೆ ಕೀರ್ತಿ ತರಲೆಂದು ಶಾಲೆಯ ತರಬೇತುದಾರ ಯೋಗೇಶ್ ಮತ್ತು ಕುಟುಂಬದವರು ಹಾರೈಸಿದ್ದಾರೆ.