More

    ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ

    ವಿಜಯಪುರ: ಸಮೀಪದ ಐನಾಪುರ ಗ್ರಾಮದಲ್ಲಿ ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ಜಯ ಕರ್ನಾಟಕ ರಕ್ಷಣಾ ಸೇನೆ ಹಾಗೂ ಶ್ರೀಶಕ್ತಿ ಮಹಿಳಾ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಸೋಮವಾರ ಪಿಡಿಒ ಸರಿತಾ ನಾಯಕ ಅವರಿಗೆ ಮನವಿ ಸಲ್ಲಿಸಿದರು.
    ಜಯ ಕನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಕೃಷ್ಣ ಭೋಸಲೆ ಮಾತನಾಡಿ, ಐನಾಪುರ ಗ್ರಾಮದಲ್ಲಿ ಹಲವು ವರ್ಷಗಳಿಂದ ಕುಡಿಯುವ ನೀರಿನ ತೊಂದರೆಯಾಗಿದ್ದು, ಐನಾಪುರ ಗ್ರಾಮಸ್ಥರೆಲ್ಲ ಕಿ.ಮೀ. ದೂರದಿಂದ ಸೈಕಲ್ ಮೇಲೆ ನೀರು ತರುವಂಥ ಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಅಧ್ಯಕ್ಷರಿಗೆ ಹಾಗೂ ಪಿಡಿಒಗಳಿಗೆ ಹಿಂದೆಯೂ ಮನವಿ ಸಲ್ಲಿಸಿದ್ದೇವೆ. ಆದರೂ ಇಲ್ಲಿವರೆಗೆ ಪಂಚಾಯಿತಿಯವರು ಸಮಸ್ಯೆಗೆ ಸ್ಪಂದಿಸದ ಕಾರಣ ಪ್ರತಿಭಟನೆ ಮಾಡುತ್ತಿದ್ದೇವೆ. ಈಗಲೂ ಸಮಸ್ಯೆಗೆ ಸ್ಪಂದಿಸದಿದ್ದರೇ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
    ಪಿಡಿಒ ಸರಿತಾ ನಾಯಕ ಮನವಿ ಸ್ವೀಕರಿಸಿ, ಹಲವು ವರ್ಷಗಳಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ವಾರದೊಳಗಾಗಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಬಸವರಾಜ ಗಳವೆ, ಅಮೀದಾ ಜಾಗೀರದಾರ್, ರಾಜು ಮನಗೂಳಿ, ಉಮೇಶ ರುದ್ರಮುನಿ, ರಾಜು ಭಿಸೆ, ಪ್ರೇಮದಾಸ ರಾಠೋಡ, ಮಲ್ಲಿಕಾರ್ಜುನ ಬಸ್ತಾಳ, ಬಸೀರಹ್ಮದ್ ಹೊನ್ನಟಗಿ, ಸುರೇಶ ಇಂಚಗೇರಿ, ಯೇಸುಬಾಯಿ ಬಸ್ತಾಳ, ಗೀತಾ ಪುಟ್ಟಲಕಟ್ಟಿ, ಕಸ್ತೂರಿ ಹಳ್ಳದ, ಮಹಾದೇವಿ ಜೋಗುರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts