ಚೆನ್ನೈ: ಚಿತ್ರನಟಿ, ರಾಜಕಾರಣಿ ಖುಷ್ಬೂ ಸುಂದರ್ ಸೋಮವಾರ ನವದೆಹಲಿಯಲ್ಲಿ ಬಿಜೆಪಿ ಸೇಪರ್ಡೆಯಾದ ಬೆನ್ನಿಗೆ ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ನಾಯಕರಲ್ಲಿ ಸಂಭ್ರಮ ಮೂಡಿರುವುದು ಕಂಡು ಅನೇಕರಿಗೆ ಅಚ್ಚರಿ. ಯಾಕೆ ಇಂಥಾ ಸಂಭ್ರಮ? ಎಂಬ ಕುತೂಹಲ!
ಮೀನುಗಾರಿಕೆ ಸಚಿವರೂ ಆಗಿರುವ ಪಕ್ಷದ ಹಿರಿಯ ನಾಯಕ ಡಿ.ಜಯಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಇದೊಂದು ಶುಭ ಸುದ್ದಿ. ಖುಷ್ಬೂ ನಮ್ಮ ಮಿತ್ರ ಪಕ್ಷ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇದೊಂದು ಉತ್ತಮ ನಡೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನನ್ನ ಗಮನಕ್ಕೆ ತರದೇ ಖಾತೆ ಬದಲಾಯಿಸಿದ್ದು ಸರಿಯೇ? ಸಿಎಂಗೆ ಶ್ರೀರಾಮುಲು ಪ್ರಶ್ನೆ
ಕಾಂಗ್ರೆಸ್ ಪಕ್ಷದೊಂದಿಗಿನ ಆರು ವರ್ಷದ ಯಾತ್ರೆಯನ್ನು ಖುಷ್ಬೂ ಕೊನೆಗೊಳಿಸಿ ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ಎಲ್. ಮುರುಗನ್ ಕೂಡ ಹಾಜರಿದ್ದರು. ರಾಜ್ಯದಲ್ಲಿ ಈ ಸಲದ ವಿಧಾನಸಭಾ ಚುನಾವಣೆಗೆ ಎಐಎಡಿಎಂಕೆ ನಾಯಕರಾಗಿ ಕೆ.ಪಳನಿಸಾಮಿ ಅವರನ್ನು ನೇಮಕ ಮಾಡಿರುವುದನ್ನು ಮಿತ್ರಪಕ್ಷವಾಗಿ ಬಿಜೆಪಿ ಕೂಡ ಈ ಹಿಂದೆಯೇ ಸ್ವಾಗತಿಸಿತ್ತು. (ಏಜೆನ್ಸೀಸ್)
ಪತ್ರಕರ್ತ ಸಿದ್ಧಿಕ್ ಬಂಧನ ಅಕ್ರಮವೆಂದ ಕೆಯುಡಬ್ಲ್ಯುಜೆ; ಪಿಎಫ್ಐ ನಂಟಿನ ಸಿದ್ಧಿಕ್ ಇರೋದು ಎಂದ ಪೊಲೀಸರು