More

    ಕಾಶಿಯಲ್ಲಿ ಸಿಲುಕಿ ಸಂಕಷ್ಟ ಎದುರಿಸಿದ್ದ ಯಾತ್ರಾರ್ಥಿಗಳು ವಾಪಸ್​​! ಸಚಿವರು, ಅಧಿಕಾರಿಗಳ ಸಹಾಯಕ್ಕೆ ಶ್ಲಾಘನೆ

    ಮಂಡ್ಯ: ಕಾಶಿಯಾತ್ರೆ ಪ್ರವಾಸ ಕೈಗೊಂಡಿದ್ದ ಮಂಡ್ಯದ 72ಮಂದಿ ಅಲ್ಲೇ ಸಂಕಷ್ಟದಲ್ಲಿ ಸಿಲುಕಿ ಇಲ್ಲಿ ಬರಲಾಗದ ಸ್ಥಿತಿಯಲ್ಲಿದ್ದರು, ಸದ್ಯ ಸಚಿವರು ಹಾಗೂ ಅಧಿಕಾರಿಗಳ ನೆರವಿನಿಂದ ತಮ್ಮ ಊರಿಗೆ ಮರಳಿದ್ದಾರೆ.

    ಎಲ್ಲೆಲ್ಲೂ ಅಗ್ನಿಪಥ ಪ್ರತಿಭಟನೆ ಶುರುವಾದವು, ಇನ್ನೇನು ಕಾಶಿ ಯಾತ್ರೆ ಮುಗಿಸಿ ಬರುವ ವೇಳೆ ರೈಲು ಸಂಚಾರಕ್ಕೂ ಬ್ರೇಕ್​ ಬಿದ್ದಿತ್ತು, ಇದರಿಂದ ಕಂಗಾಲಾದ ಯಾತ್ರಿಗಳು ನೆರವು ನೀಡುವಂತೆ ಕೇಳಿಕೊಂಡಿದ್ದರು.

    ಕೊನೆಗೂ ಸಚಿವ ಗೋಪಾಲಯ್ಯ, ಮಂಡ್ಯ ಡಿಸಿ ಎಸ್.ಅಶ್ವಥಿ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ, ಉತ್ತರ ಪ್ರದೇಶದ ಟೂರಿಸ್ಟ್ ಪೊಲೀಸ್ ಇನ್ಸ್‌ಪೆಕ್ಟರ್ ಅರುಣ್‌ಕುಮಾರ್ ಸಿಂಗ್ ಮತ್ತು ನಾಗಮಂಗಲ ಮೂಲದ ಕಾಶಿಯಲ್ಲಿ ನೆಲೆಸಿರುವ ರವಿಕುಮಾರ್ ಎಂಬುವರ ನೆರವಿನೊಂದಿಗೆ ಸುಮಾರು 72 ಪ್ರವಾಸಿಗರಿಗೆ ಬಸ್ ವ್ಯವಸ್ಥೆ ಮಅಡಿದ್ದು, ಎರಡು ಎಸಿ ಬಸ್​​ನಲ್ಲಿ ಬಂದಿಳಿದಿದ್ದಾರೆ.

    ಜೂನ್ 17ಕ್ಕೆ ವಾಪಸ್ ಹೊರಡಬೇಕಿದ್ದ 72 ಮಂದಿ ವಾರಾಣಸಿಯಲ್ಲೇ ಸಿಲುಕಿದ್ದರು. ಮೂರು ದಿನದಿಂದ ಆತಂಕದಲ್ಲಿ ಕಾಲಕಳೆದಿದ್ದ ಪ್ರವಾಸಿಗರು ಈಗ ನಿಟ್ಟುಸಿರುಬಿಟ್ಟಿದ್ದಾರೆ. ಅಂತೆಯೇ ನೆರವಿಗೆ ಬಂದ ಸಚಿವರು ಹಾಗೂ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ತಮ್ಮ ಮಗನ ಹೆಸರು ಬಹಿರಂಗಪಡಿಸಿದ ಯುವರಾಜ್​​ ಸಿಂಗ್​​ ದಂಪತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts