More

    ಅಗ್ನಿಪಥ ಪ್ರತಿಭಟನೆ ಮುನ್ನೆಚ್ಚರಿಕೆ: ಬಂಗಾರಪೇಟೆ ರೈಲ್ವೇ ನಿಲ್ದಾಣಕ್ಕೆ ಪೊಲೀಸ್​ ಸರ್ಪಗಾವಲು

    ಕೋಲಾರ: ಅಗ್ನಿಪಥ ಯೋಜನೆ ವಿರೋಧಿಸಿ ರೈಲ್ವೇ ನಿಲ್ದಾಣಗಳಲ್ಲಿ ಪ್ರತಿಭಟನೆ ನಡೆಯುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಕೋಲಾರದಲ್ಲಿ ಭಾರೀ ಭದ್ರತೆ ಕೈಗೊಳ್ಳಲಾಗಿದೆ.

    ರಾಜ್ಯಕ್ಕೂ ಪ್ರತಿಭಟನೆ ಕಾವು ಕಾಲಿಟ್ಟಿರುವುದರಿಂದ ಎಚ್ಚೆತ್ತ ಪೊಲೀಸರು, ರೈಲ್ವೇ ನಿಲ್ದಾಣದಲ್ಲಿ ಸರ್ಪಗಾವಲಾಗಿ ನಿಂತಿದ್ದಾರೆ.ಮುಂಜಾಗ್ರತಾ ಕ್ರಮವಾಗಿ ಬಂಗಾರಪೇಟೆ ರೈಲು ನಿಲ್ದಾಣದಲ್ಲಿ ಪೊಲೀಸ್ ಬಂದೋಬಸ್ತ್​ ಕೈಗೊಳ್ಳಲಾಗಿದೆ. ಯಾವುದೇ ಪ್ರತಿಭಟನೆಗೆ ಅವಕಾಶ ನೀಡದಂತೆ ಕಟ್ಟೆಚ್ಚರ ವಹಿಸಲು ರೈಲು ನಿಲ್ದಾಣದಾದ್ಯಂತ ಹದ್ದಿನ ಕಣ್ಗಾವಲಿರಿಸಲಾಗಿದೆ.

    ಅಗ್ನಿಪಥ ಪ್ರತಿಭಟನೆ ಮುನ್ನೆಚ್ಚರಿಕೆ: ಬಂಗಾರಪೇಟೆ ರೈಲ್ವೇ ನಿಲ್ದಾಣಕ್ಕೆ ಪೊಲೀಸ್​ ಸರ್ಪಗಾವಲು

    ಆಂದ್ರ, ತಮಿಳುನಾಡು, ಉತ್ತರ ಭಾರತಕ್ಕೆ ಸಂಪರ್ಕ ಕಲ್ಪಿಸುವ ಬಂಗಾರಪೇಟೆ ರೈಲು ನಿಲ್ದಾಣದಲ್ಲಿ ಬರುವ ಪ್ರಯಾಣಿಕರ ಮೇಲೆಯೂ ನಿಗಾ ಇಡಲಾಗಿದೆ. ಒಟ್ಟಾರೆ ಪ್ರತಿಭಟನೆ ಕೈಗೊಳ್ಳುವವರ ವಿರುದ್ಧ ಕ್ರಮಕ್ಕೆ ಖಾಕಿ ಪಡೆ ಸಜ್ಜಾಗಿದೆ. (ದಿಗ್ವಿಜಯ ನ್ಯೂಸ್​) 

    ಅಗ್ನಿಪಥಕ್ಕೆ ವಿರೋಧ: ಈವರೆಗೆ 50 ಬೋಗಿಗಳು ಭಸ್ಮ, ನಷ್ಟದ ಲೆಕ್ಕ ಕೊಟ್ಟ ರೈಲ್ವೇ ಅಧಿಕಾರಿಗಳೇ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts