ಕೋಲಾರ: ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗಮನದಿಂದ ಕೋಲಾರದಲ್ಲಿನ ಶೋಭಾಯಾತ್ರೆ ತಡೆಯಲಾಗಿದ್ದು, ಬಳಿಕ ಅವರನ್ನು ಅಲ್ಲಿಂದ ವಾಪಸ್ ಕಳಿಸುತ್ತಿದ್ದಂತೆ ಶೋಭಾಯಾತ್ರೆ ಆರಂಭಗೊಂಡಿದೆ.
ಮುತಾಲಿಕ್ ವಾಪಸ್ ತೆರಳಿದ ನಂತರ ಪೊಲೀಸರ ಮನವೊಲಿಸಿದ ಶ್ರೀರಾಮಸೇನೆ ಕಾರ್ಯಕರ್ತರು, ಶೋಭಾಯಾತ್ರೆಗೆ ಅನುಮತಿ ಪಡೆದರು. ಬಳಿಕ ಕೋಲಾರದ ಗಾಂಧಿವನದಿಂದ ಶೋಭಾಯಾತ್ರೆ ಆರಂಭಗೊಂಡಿತು.
ಕೋಲಾರದ ಈ ಶೋಭಾಯಾತ್ರೆಯಲ್ಲಿ ಸಂಸದ ಮುನಿಸ್ವಾಮಿ ಹಾಗೂ ಶಾಸಕ ರಾಜೂಗೌಡ ಕೂಡ ಭಾಗಿಯಾದರು. ಕಾರ್ಯಕರ್ತರು ಶೋಭಾಯಾತ್ರೆ ಸಂದರ್ಭ ಸಂಸದ ಮುನಿಸ್ವಾಮಿಯನ್ನು ಹೆಗೆಲ ಮೇಲೆ ಹೊತ್ತು ಕುಣಿದರು. ನಗರದ ಎಂ.ಜಿ. ರಸ್ತೆಯಿಂದ ಕಾಲೇಜು ವೃತ್ತದತ್ತ ಶೋಭಾಯಾತ್ರೆ ತೆರಳಿತು.
ಕೋಲಾರಕ್ಕೆ ಪ್ರಮೋದ್ ಮುತಾಲಿಕ್ ಆಗಮನ, ಪೊಲೀಸರು ಗರಂ; ವಾಪಸ್ ಕಳಿಸುವಂತೆ ಆಯೋಜಕರಿಗೆ ಸೂಚನೆ!