More

    ಚುನಾವಣೆ ನಂತರ ರಾಜ್ಯದಲ್ಲಿ ಸರ್ಕಾರ ಬದಲು

    ಹುಬ್ಬಳ್ಳಿ : ಲೋಕಸಭೆ ಚುನಾವಣೆ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಅಸ್ತಿತ್ವದಲ್ಲಿ ಇರುವುದಿಲ್ಲ. ಅದು ಬದಲಾಗಲಿದೆ ಎಂದು ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಭವಿಷ್ಯ ನುಡಿದರು.

    ಇಲ್ಲಿನ ಅರವಿಂದ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಧಾರವಾಡ ತಾಲೂಕು ಅಮ್ಮಿನಭಾವಿ ಗ್ರಾಮದ ಮುಖಂಡರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ದೇಶದಲ್ಲಿ ಕಾಂಗ್ರೆಸ್ ಮೂರು ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡು ಎರಡು ಅಂಕಿಗೆ ಇಳಿಯಲಿದೆ ಎಂದರು.

    ಕಾಂಗ್ರೆಸ್​ನಲ್ಲಿ ಮುಖ್ಯಮಂತ್ರಿ ಪದವಿಗೆ ಈಗಲೇ ಕಿತ್ತಾಟ ಶುರುವಾಗಿದೆ. ಅಲ್ಲಿ ಬಹಳ ಗೊಂದಲಗಳಿವೆ. ಚುನಾವಣೆ ನಂತರ ಕಾಂಗ್ರೆಸ್ ಭೂತಕಾಲದ ಪಕ್ಷವಾಗಿ ಇತಿಹಾಸ ಸೇರಲಿದೆ. ಬಿಜೆಪಿ ವರ್ತಮಾನದ ಹಾಗೂ ಭವಿಷ್ಯದ ಪಕ್ಷವಾಗಿದೆ ಎಂದು ಜೋಶಿ ಹೇಳಿದರು.

    ಕಾಂಗ್ರೆಸ್ ಪಕ್ಷಕ್ಕೆ ನಾಯಕತ್ವ ಇಲ್ಲ. ಅದು ಚುನಾವಣೆ ನಂತರ ಒಡೆದು ಹೋಗಲಿದೆ ಎಂದರು.

    ಪಕ್ಷಕ್ಕೆ ಸೇರ್ಪಡೆಯಾದ ಮುಖಂಡರನ್ನು ಬಿಜೆಪಿ ಶಾಲು ಹಾಕಿ, ಸ್ವಾಗತಿಸಿದ ಪ್ರಲ್ಹಾದ ಜೋಶಿ, ಪಕ್ಷವು ಇನ್ನುಮುಂದೆ ನಿಮ್ಮ ಕಾಳಜಿ ಮಾಡಲಿದೆ. ಮುಂಬರುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳಿಗೆ ಸಿದ್ಧತೆ ಆರಂಭಿಸಬೇಕು ಎಂದು ತಿಳಿಸಿದರು.

    ಅಮ್ಮಿನಭಾವಿ ಗ್ರಾಮದ ಮುಖಂಡರಾದ ಟಿ.ಎಸ್. ಪಾಟೀಲ, ಮುತ್ತಣ್ಣ ಬಳ್ಳಾರಿ, ಸಂತೋಷ ಕಮತರ, ಜಗನ್ನಾಥ ಕುಸುಗಲ್ ಹಾಗೂ ಇತರರು ಬಿಜೆಪಿ ಸೇರಿದರು.

    ಶಾಸಕ ಎಂ.ಆರ್.ಪಾಟೀಲ, ಮಾಜಿ ಶಾಸಕರಾದ ಸೀಮಾ ಮಸೂತಿ, ಅಮೃತ ದೇಸಾಯಿ, ಮುಖಂಡರಾದ ಶಂಕರ ಮುಗದ, ನಿಂಗಪ್ಪ ಸುತಗಟ್ಟಿ, ಬಸವರಾಜ ಕುಂದಗೋಳಮಠ, ನೀಲಮ್ಮ ಸಿಬಿ, ತಾಪಂ ಮಾಜಿ ಸದಸ್ಯ ಸುರೇಂದ್ರ ದೇಸಾಯಿ, ಸುನೀಲ ಗುಡಿ ಹಾಗೂ ಇತರರು ಉಪಸ್ಥಿತರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts