More

    ಸಮರ್ಪಕ ಬಸ್ ಬಿಡುಗಡೆಗೆ ಆಗ್ರಹ

    ನಾಗರಮುನ್ನೋಳಿ: ಶಾಲಾ-ಕಾಲೇಜಿಗೆ ತೆರಳಲು ಸಮಯಕ್ಕೆ ಸರಿಯಾಗಿ ಬಸ್ ಒದಗಿಸಬೇಕೆಂದು ಆಗ್ರಹಿಸಿ, 4 ಗಂಟೆ ಕಾಲ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿದರು.

    ಗೋಕಾಕ ಹಾಗೂ ಬಾಗಲಕೋಟೆ ಕಡೆಯಿಂದ ಬರುವ ಬಸ್ಸುಗಳು ಜನರಿಂದ ತುಂಬಿದ್ದು, ಬಸ್ ನಿಲುಗಡೆ ಯಾಗುವುದಿಲ್ಲ. ಇದರಿಂದ ಕಾಲೇಜಿಗೆ ತೆರಳಲು ತೊಂದರೆ ಯಾಗುತ್ತಿದ್ದು, ಶಿಕ್ಷಣದಲ್ಲಿ ಹಿಂದುಳಿಯುತ್ತಿದ್ದೇವೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಪ್ರತಿಭಟನಾ ಸ್ಥಳಕ್ಕೆ ಡಿಪೋ ವ್ಯವಸ್ಥಾಪಕ ವಿನೋದ ಅಮಣಗಿ ಭೇಟಿ ನೀಡಿ, ನಾಳೆಯಿಂದ ಹೆಚ್ಚುವರಿ ಬಸ್ ಬಿಡುವ ಭರವಸೆ ನೀಡಿದರು. ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು. ಪ್ರತಿಭಟನೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸಿದರು. ಚಿಕ್ಕೋಡಿ ಪಿಎಸ್‌ಐ ಬಸಗೌಡ ನೇರ್ಲಿ ಬಿಗಿಬಂದೋಬಸ್ತ್ ಕೈಗೊಂಡಿದ್ದರು.

    ಮಲ್ಲಿಕಾರ್ಜುನ ಈಟಿ, ರಮೇಶ ಕಾಳನ್ನವರ, ಶಿವಾನಂದ ಮರ್ಯಾಯಿ, ಜಾಕೀರ್ ನದಾ, ಮಂಜುನಾಥ ಆಲೂರೆ, ಪೀರಸಾಬ್ ಮುಲ್ತಾನಿ, ಅನಿಲ ಕರೋಶಿ, ಪವನ ಪಾಟೀಲ, ಬಸವರಾಜ ಈಟಿ, ಸುಂದೀಪ ಬಿರನಗಡ್ಡಿ,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts