More

    ತೇಜಸ್ವಿನಿ ಪ್ರಕಾಶ್​ ಸಾವಿನ ಸುದ್ದಿ ವೈರಲ್​!; ಹರಿದಾಡಿದ ಸುದ್ದಿ ಬಗ್ಗೆ ಸ್ಪಷ್ಟನೆ ಕೊಟ್ಟ ನಟಿ

    ಬೆಂಗಳೂರು: ಲಾಕ್​ಡೌನ್​ ಶುರುವಾದ ಮೇಲಿಂದ ಒಂದಲ್ಲ ಒಂದು ಕೆಟ್ಟ ಸುದ್ದಿಗಳು ಕಿವಿಗಪ್ಪಳಿಸುತ್ತಿವೆ. ಅದರಲ್ಲಿ ಸಾವಿನ ಸುದ್ದಿಗಳೇ ಹೆಚ್ಚು. ಕನ್ನಡದ ಚಿರು ಸರ್ಜಾ, ಬಾಲಿವುಡ್​ ನಟ ಸುಶಾಂತ್​ ಸಿಂಗ್​ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳುವ ಮುನ್ನವೇ, ಸ್ಯಾಂಡಲ್​ವುಡ್​ನಿಂದ ಮತ್ತೊಂದು ಸಾವಿನ ಸುದ್ದಿ ಹೊರಬಿದ್ದಿದೆ. ಆದರೆ, ಆ ಸುದ್ದಿ ಸುಳ್ಳು ಎಂಬುದೇ ನಿಟ್ಟಿಸಿರು ಬಿಡುವ ವಿಚಾರ!

    ಹೌದು, ನಟಿ ತೇಜಸ್ವಿನಿ ಪ್ರಕಾಶ್​ ಇನ್ನಿಲ್ಲ ಎಂಬ ಸುದ್ದಿ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಪೋಸ್ಟರ್​ಗಳಲ್ಲಿ ತೇಜಸ್ವಿನಿ ಪ್ರಕಾಶ್​ ಇನ್ನಿಲ್ಲ.. ಕಣ್ಣೀರಲ್ಲಿ ಇಡೀ ರಾಜ್ಯದ ಜನತೆ.. ಅಯ್ಯೋ ಏನಾಗಿದೆ ಗೊತ್ತ.. ಕೇಳಿದ್ರೆ ಶಾಕ್​ ಆಗ್ತೀರಾ.. ಎಂಬಂಥ ಸಾಲುಗಳನ್ನೊಳಗೊಂಡ ಫೇಕ್​ ಸುದ್ದಿ ಹರಿದಾಡಿ, ಆತಂಕ ಸೃಷ್ಟಿಸಿದ್ದವು. ಇದೀಗ ಆ ಸುದ್ದಿಗೆ ಸ್ವತಃ ತೇಜಸ್ವಿನಿ ಪ್ರಕಾಶ್​ ಸ್ಪಷ್ಟನೆ ನೀಡಿದ್ದು, ಇದೆಲ್ಲ ಸುಳ್ಳು ಸುದ್ದಿ. ನಾನು ಬದುಕಿದ್ದೇನೆ ಎಂದಿದ್ದಾರೆ. ಫೇಸ್​ಬುಕ್​ನಲ್ಲಿ ಈ ಬಗ್ಗೆ ವಿವರವಾಗಿ ಬರೆದುಕೊಂಡಿದ್ದಾರೆ.

    ತೇಜಸ್ವಿನಿ ಪ್ರಕಾಶ್​ ಸಾವಿನ ಸುದ್ದಿ ವೈರಲ್​!; ಹರಿದಾಡಿದ ಸುದ್ದಿ ಬಗ್ಗೆ ಸ್ಪಷ್ಟನೆ ಕೊಟ್ಟ ನಟಿ ತೇಜಸ್ವಿನಿ ಪ್ರಕಾಶ್​ ಸಾವಿನ ಸುದ್ದಿ ವೈರಲ್​!; ಹರಿದಾಡಿದ ಸುದ್ದಿ ಬಗ್ಗೆ ಸ್ಪಷ್ಟನೆ ಕೊಟ್ಟ ನಟಿ ತೇಜಸ್ವಿನಿ ಪ್ರಕಾಶ್​ ಸಾವಿನ ಸುದ್ದಿ ವೈರಲ್​!; ಹರಿದಾಡಿದ ಸುದ್ದಿ ಬಗ್ಗೆ ಸ್ಪಷ್ಟನೆ ಕೊಟ್ಟ ನಟಿ ತೇಜಸ್ವಿನಿ ಪ್ರಕಾಶ್​ ಸಾವಿನ ಸುದ್ದಿ ವೈರಲ್​!; ಹರಿದಾಡಿದ ಸುದ್ದಿ ಬಗ್ಗೆ ಸ್ಪಷ್ಟನೆ ಕೊಟ್ಟ ನಟಿ

     ಇದನ್ನೂ ಓದಿ: PHOTO GALLERY| ಹುಟ್ಟುಹಬ್ಬದ ಸಂಭ್ರಮದಲ್ಲಿರೋ ನಟಿ ದೀಪಾ ಸನ್ನಿಧಿಯ ಸ್ಟನ್ನಿಂಗ್​ ಫೋಟೋಗಳು!

    ‘ಕಳೆದೊಂದು ತಿಂಗಳಿಂದ ಸೋಷಿಯಲ್​ ಮೀಡಿಯಾಗಳಲ್ಲಿ, ಒಂದಿಷ್ಟು ಯೂಟ್ಯೂಬ್​ ಚಾನೆಲ್​ಗಳಲ್ಲಿ ನನ್ನ ಸಾವಿನ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಈ ಸುದ್ದಿ ಎಲ್ಲೆಡೆ ವೈರಲ್​ ಆಗುತ್ತಿದ್ದಂತೆ ನನ್ನ ಆಪ್ತರು, ಹಿತೈಷಿಗಳು ಪದೇಪದೆ ಕರೆ ಮಾಡಿ ಈ ಬಗ್ಗೆ ಕೇಳುತ್ತಿದ್ದರು. ನಾನು ಇದು ಸುಳ್ಳು ಸುದ್ದಿ ಎಂದು ಅವರಿಗೆ ತಿಳಿಹೇಳುತ್ತಿದ್ದೆ. ಬಳಿಕ ಆ ಬಗ್ಗೆ ಗಮನ ಹರಿಸುವುದನ್ನೇ ಬಿಟ್ಟೆ. ಆದರೆ, ಆ ಬಗ್ಗೆ ಧ್ವನಿ ಎತ್ತಲೇಬೇಕಿತ್ತು. ಈ ರೀತಿಯ ಸುದ್ದಿಯಿಂದ ನಿಮ್ಮ ಚಾನೆಲ್​ಗೆ ಹೆಚ್ಚು ಕ್ಲಿಕ್​ಗಳು ಸಿಗಬಹುದು. ಆದರೆ, ಇದರಿಂದ ನನ್ನ ಕುಟುಂಬಕ್ಕೆ ಏನಾಗುತ್ತಿದೆ ಎಂಬುದನ್ನು ಅರಿತಿದ್ದೀರಾ? ’ ಎಂದು ಗರಂ ಆಗಿದ್ದಾರೆ

    PHOTOS| ವೈರಲ್​ ಆಗ್ತಿದೆ ಹೆಬ್ಬುಲಿ ಬೆಡಗಿ ಅಮಲಾ ಪೌಲ್​ ಹಾಟ್​ ಬಿಕಿನಿ ಫೋಟೋ…!

    ಚಿರು ಸಾವಿಗೆ ಸಾಂತ್ವಾನ ಹೇಳಿದ ರಾಘವೇಂದ್ರ ರಾಜ್​ಕುಮಾರ್​ ಕುಟುಂಬಕ್ಕೆ ಕಾನೂನು ಸಂಕಷ್ಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts