ಬೆಂಗಳೂರು: ಲಾಕ್ಡೌನ್ ಶುರುವಾದ ಮೇಲಿಂದ ಒಂದಲ್ಲ ಒಂದು ಕೆಟ್ಟ ಸುದ್ದಿಗಳು ಕಿವಿಗಪ್ಪಳಿಸುತ್ತಿವೆ. ಅದರಲ್ಲಿ ಸಾವಿನ ಸುದ್ದಿಗಳೇ ಹೆಚ್ಚು. ಕನ್ನಡದ ಚಿರು ಸರ್ಜಾ, ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳುವ ಮುನ್ನವೇ, ಸ್ಯಾಂಡಲ್ವುಡ್ನಿಂದ ಮತ್ತೊಂದು ಸಾವಿನ ಸುದ್ದಿ ಹೊರಬಿದ್ದಿದೆ. ಆದರೆ, ಆ ಸುದ್ದಿ ಸುಳ್ಳು ಎಂಬುದೇ ನಿಟ್ಟಿಸಿರು ಬಿಡುವ ವಿಚಾರ!
ಹೌದು, ನಟಿ ತೇಜಸ್ವಿನಿ ಪ್ರಕಾಶ್ ಇನ್ನಿಲ್ಲ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಪೋಸ್ಟರ್ಗಳಲ್ಲಿ ತೇಜಸ್ವಿನಿ ಪ್ರಕಾಶ್ ಇನ್ನಿಲ್ಲ.. ಕಣ್ಣೀರಲ್ಲಿ ಇಡೀ ರಾಜ್ಯದ ಜನತೆ.. ಅಯ್ಯೋ ಏನಾಗಿದೆ ಗೊತ್ತ.. ಕೇಳಿದ್ರೆ ಶಾಕ್ ಆಗ್ತೀರಾ.. ಎಂಬಂಥ ಸಾಲುಗಳನ್ನೊಳಗೊಂಡ ಫೇಕ್ ಸುದ್ದಿ ಹರಿದಾಡಿ, ಆತಂಕ ಸೃಷ್ಟಿಸಿದ್ದವು. ಇದೀಗ ಆ ಸುದ್ದಿಗೆ ಸ್ವತಃ ತೇಜಸ್ವಿನಿ ಪ್ರಕಾಶ್ ಸ್ಪಷ್ಟನೆ ನೀಡಿದ್ದು, ಇದೆಲ್ಲ ಸುಳ್ಳು ಸುದ್ದಿ. ನಾನು ಬದುಕಿದ್ದೇನೆ ಎಂದಿದ್ದಾರೆ. ಫೇಸ್ಬುಕ್ನಲ್ಲಿ ಈ ಬಗ್ಗೆ ವಿವರವಾಗಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: PHOTO GALLERY| ಹುಟ್ಟುಹಬ್ಬದ ಸಂಭ್ರಮದಲ್ಲಿರೋ ನಟಿ ದೀಪಾ ಸನ್ನಿಧಿಯ ಸ್ಟನ್ನಿಂಗ್ ಫೋಟೋಗಳು!
‘ಕಳೆದೊಂದು ತಿಂಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ, ಒಂದಿಷ್ಟು ಯೂಟ್ಯೂಬ್ ಚಾನೆಲ್ಗಳಲ್ಲಿ ನನ್ನ ಸಾವಿನ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಈ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ನನ್ನ ಆಪ್ತರು, ಹಿತೈಷಿಗಳು ಪದೇಪದೆ ಕರೆ ಮಾಡಿ ಈ ಬಗ್ಗೆ ಕೇಳುತ್ತಿದ್ದರು. ನಾನು ಇದು ಸುಳ್ಳು ಸುದ್ದಿ ಎಂದು ಅವರಿಗೆ ತಿಳಿಹೇಳುತ್ತಿದ್ದೆ. ಬಳಿಕ ಆ ಬಗ್ಗೆ ಗಮನ ಹರಿಸುವುದನ್ನೇ ಬಿಟ್ಟೆ. ಆದರೆ, ಆ ಬಗ್ಗೆ ಧ್ವನಿ ಎತ್ತಲೇಬೇಕಿತ್ತು. ಈ ರೀತಿಯ ಸುದ್ದಿಯಿಂದ ನಿಮ್ಮ ಚಾನೆಲ್ಗೆ ಹೆಚ್ಚು ಕ್ಲಿಕ್ಗಳು ಸಿಗಬಹುದು. ಆದರೆ, ಇದರಿಂದ ನನ್ನ ಕುಟುಂಬಕ್ಕೆ ಏನಾಗುತ್ತಿದೆ ಎಂಬುದನ್ನು ಅರಿತಿದ್ದೀರಾ? ’ ಎಂದು ಗರಂ ಆಗಿದ್ದಾರೆ
PHOTOS| ವೈರಲ್ ಆಗ್ತಿದೆ ಹೆಬ್ಬುಲಿ ಬೆಡಗಿ ಅಮಲಾ ಪೌಲ್ ಹಾಟ್ ಬಿಕಿನಿ ಫೋಟೋ…!
ಚಿರು ಸಾವಿಗೆ ಸಾಂತ್ವಾನ ಹೇಳಿದ ರಾಘವೇಂದ್ರ ರಾಜ್ಕುಮಾರ್ ಕುಟುಂಬಕ್ಕೆ ಕಾನೂನು ಸಂಕಷ್ಟ