More

    ಮತ್ತೆ ಬಂದ ಅಂಜಲಿ; ನೇತ್ರಾವತಿಯ ತಾಯಿಯಾಗಿ ಬಣ್ಣದ ಲೋಕಕ್ಕೆ..

    ಬೆಂಗಳೂರು: ‘ಅನಂತನ ಅವಾಂತರ’ ಖ್ಯಾತಿಯ ಅಂಜಲಿ, ಚಿತ್ರಗಳಲ್ಲಿ ನಟಿಸಿ ದೊಡ್ಡ ಗ್ಯಾಪ್ ಆಗಿದೆ. 22 ವರ್ಷಗಳಿಂದ ಚಿತ್ರರಂಗದಿಂದ ದೂರವಿದ್ದ ಅಂಜಲಿ, ಕಳೆದ ವರ್ಷವೇ ಸಂದರ್ಶನವೊಂದರಲ್ಲಿ ಮಾತನಾಡುವಾಗ ಮತ್ತೆ ಅಭಿನಯಿಸುವ ಆಸೆಯನ್ನು ವ್ಯಕ್ತಪಡಿಸಿದ್ದರು. ಆ ಆಸೆ ಇದೀಗ ಕೈಗೂಡುತ್ತಿದೆ. ಆದರೆ, ಅಂಜಲಿ ಅವರು ಬಣ್ಣ ಹಚ್ಚುತ್ತಿರುವುದು ಹಿರಿತೆರೆಯಲ್ಲಲ್ಲ, ಕಿರುತೆರೆಯಲ್ಲಿ. ಡಾ. ರಾಜಕುಮಾರ್ ಕುಟುಂಬದ ಪೂರ್ಣಿಮಾ ಪ್ರೊಡಕ್ಷನ್ಸ್​ನಡಿ ‘ನೇತ್ರಾವತಿ’ ಎಂಬ ಧಾರಾವಾಹಿಯು ಉದಯ ಟಿವಿಯಲ್ಲಿ ಮೂಡಿಬರಲಿದೆ ಎಂಬ ವಿಷಯ ಇತ್ತೀಚೆಗಷ್ಟೇ ಸಾಕಷ್ಟು ಸುದ್ದಿಯಾಗಿತ್ತು. ಈಗ ಇದೇ ‘ನೇತ್ರಾವತಿ’ ಧಾರಾವಾಹಿಯ ಮೂಲಕ ಅಂಜಲಿ ಬಣ್ಣದ ಬದುಕಿಗೆ ರೀಎಂಟ್ರಿ ಕೊಡುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಅವರು ನಾಯಕಿ ನೇತ್ರಾವತಿಯ ತಾಯಿ ಭಾಗೀರಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಇದುವರೆಗೂ ಹಲವು ಚಿತ್ರಗಳಲ್ಲಿ ನಟಿಸಿದ್ದರೂ, ಇದೇ ಮೊದಲ ಬಾರಿ ಭಾವನಾತ್ಮಕ ಪಾತ್ರವೊಂದರಲ್ಲಿ ಅವರು ನಟಿಸುತ್ತಿದ್ದಾರಂತೆ.

    ಈ ಧಾರಾವಾಹಿಯಲ್ಲಿ ಅಂಜಲಿ ಜತೆಗೆ ದುರ್ಗಾಶ್ರೀ, ಸನ್ನಿ ಮಹಿಪಾಲ್, ಸಚಿನ್, ಚೈತ್ರಾ ರಾವ್ ಮುಂತಾದವರು ನಟಿಸುತ್ತಿದ್ದು, ಸಂತೋಷ್ ಗೌಡ ನಿರ್ದೇಶನ ಮಾಡುತ್ತಿದ್ದಾರೆ. ‘ನೇತ್ರಾವತಿ’ ಧಾರಾವಾಹಿಯು ಮಾರ್ಚ್ 15ರಿಂದ ಸೋಮವಾರದಿಂದ ಶನಿವಾರದವರೆಗೂ ಉದಯ ಟಿವಿಯಲ್ಲಿ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.

    ಹೆಂಡತಿಯನ್ನು ಸೇರಲೊಪ್ಪದ ಗಂಡ, ಆಕೆಗೆ ದೆವ್ವ ಹಿಡಿದಿದೆ ಎಂದು ಕಿರುಕುಳ ಕೊಟ್ಟ; ಪತಿ, ಅತ್ತೆ-ಮಾವನ ವಿರುದ್ಧ ದೂರಿತ್ತ ಮಹಿಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts