ಬೆಂಗಳೂರು: ಸ್ಟಾರ್ ಹೀರೋಗಳ ಕಟೌಟ್ಗಳಿಗೆ ಕ್ಷೀರಾಭಿಷೇಕ ಮಾಡಿದ್ದನ್ನು ನೋಡಿದ್ದೇವೆ. ನೆಚ್ಚಿನ ನಟನ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಚಿತ್ರಮಂದಿರದ ಬಳಿ ನಿಂತಿರುವ ಬೃಹತ್ ಫೋಟೋಕ್ಕೂ ಹಾಲಿನ ಅಭಿಷೇಕ ಮಾಡುವ ಅಭಿಮಾನಿಗಳಿದ್ದಾರೆ. ಕಲಾವಿದರ ಫೋಟೋವನ್ನೇ ದೇವರಂತೆ ಪೂಜಿಸುವವರೂ ನಮ್ಮ ಮಧ್ಯೆ ಇದ್ದಾರೆ. ಅವರ ಹೆಸರಲ್ಲಿ ದೇವರ ಬಳಿ ನಿತ್ಯ ಅರ್ಚನೆ ಮಾಡಿಸುವವರೂ ಕಾಣಸಿಗುತ್ತಾರೆ. ಆದರೆ, ಈ ರೀತಿಯ ಅವಕಾಶ ನಾಯಕಿಯರಿಗೆ ಸಿಗುವುದು ತುಂಬ ವಿರಳ. ಹೀಗಿರುವಾಗಲೇ ಕಡಿಮೆ ಅವಧಿಯಲ್ಲಿ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಕನ್ನಡತಿ ರಶ್ಮಿಕಾ ಮಂದಣ್ಣಗೆ ಈಗ ರಾಭಿಷೇಕದ ಅಭಿಮಾನ ದೊರಕಿದೆ. ಅಂದರೆ, ತೆಲುಗು ನಾಡಿನ ಅಭಿಮಾನಿಯೊಬ್ಬ ರಶ್ಮಿಕಾ ಹೆಸರಲ್ಲಿ ದೇವರಿಗೆ ರಾಭಿಷೇಕ ಮಾಡಿಸಿದ್ದಾನೆ. ಈ ಭಕ್ತಿಗೆ ಸ್ವತಃ ರಶ್ಮಿಕಾ ಮೂಕವಿಸ್ಮಿತರಾಗಿದ್ದಾರೆ.
ನರಸಿಂಹಸ್ವಾಮಿ ಮತ್ತು ರಾವೇಂದ್ರ ಮೂರ್ತಿಗೆ ರಶ್ಮಿಕಾ ಮಂದಣ್ಣ ಹೆಸರಲ್ಲಿ ಕ್ಷೀರಾಭಿಷೇಕ ಮಾಡಿಸಿರುವ ಅಭಿಮಾನಿ, ಆ ವಿಡಿಯೋವನ್ನು ಟ್ವಿಟರ್ನಲ್ಲಿ ರಶ್ಮಿಕಾಗೂ ಟ್ಯಾಗ್ ಮಾಡಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ರಶ್ಮಿಕಾ, “ನನ್ನ ಹೆಸರಲ್ಲಿ ಕ್ಷೀರಾಭಿಷೇಕ ಮಾಡಿಸುವಷ್ಟು ನಾನೇನು ಮಾಡಿಲ್ಲ. ಆದರೂ ನಿಮ್ಮ ಪ್ರೀತಿಗೆ ಧನ್ಯವಾದಗಳು’ ಎಂದಿದ್ದಾರೆ. ಈ ರೀತಿಯ ಹಾಲಿನ ಅಭಿಷೇಕ ಮಾಡಿಸಿದ್ದಕ್ಕೆ ಒಂದಷ್ಟು ಮಂದಿ ಮೆಚ್ಚುಗೆ ಸೂಚಿಸಿದರೆ, ಮತ್ತೆ ಕೆಲವರು ಇಷ್ಟೆಲ್ಲ ಬೇಕಿತ್ತ ಎಂದು ಕಿಚಾಯಿಸಿದ್ದಾರೆ. ಭಾನುವಾರವಷ್ಟೇ ರಶ್ಮಿಕಾ 24ನೇ ಜನ್ಮ ದಿನವನ್ನು ಆಚರಿಸಿಕೊಂಡರು. ಲಾಕ್ಡೌನ್ ಹಿನ್ನೆಲೆಯಲ್ಲಿ ಮನೆಯಿಂದ ಆಚೆ ಬರದೆ, ಸರಳವಾಗಿ ಕುಟುಂಬದ ಜತೆ ಸೆಲೆಬ್ರೆಟ್ ಮಾಡಿದರು.