ಬೆಂಗಳೂರು: ನಟ ಅನಿರುದ್ಧ್ಗೆ ಮತ್ತೊಮ್ಮೆ ‘ಬ್ಯಾನ್’ ಬಿಸಿ ತಟ್ಟಿದೆ. ‘ಜೊತೆ ಜೊತೆಯಲಿ’ ಧಾರಾವಾಹಿ ತಂಡದಲ್ಲಿ ಉಂಟಾದ ವಿವಾದ ಭಾರೀ ಸುದ್ದಿಯಾಗಿತ್ತು. ಈ ಧಾರಾವಾಹಿಯಿಂದ ಹೊರ ಬಂದ ಅನಿರುದ್ಧ್ಗೆ ಮತ್ತೊಂದು ಕಂಟಕ ಎದುರಾಗಿದೆ. ಅನಿರುದ್ಧ್ ಜೊತೆ ಸೂರ್ಯವಂಶ ಸೀರಿಯಲ್ ತೆಗೆಯಲು ಮುಂದಾಗಿದ್ದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ಎಸ್.ನಾರಾಯಣ್ಗೆ ಬಿಗ್ ಶಾಕ್ ಕೊಟ್ಟಿದೆ ಕಿರುತೆರೆ ನಿರ್ಮಾಪಕರ ಸಂಘ.
ಜೊತೆಜೊತೆಯಲಿ ಸೀರಿಯಲ್ ತಂಡದೊಂದಿದೆ ಅನಿರುದ್ಧ್ ಕಿರಿಕ್ ಮಾಡಿದ್ದಾರೆ. ಹಾಗಾಗಿ ಅವರಿಗೆ ಸದ್ಯ ಯಾವುದೇ ಸೀರಿಯಲ್ನಲ್ಲಿ ಅವಕಾಶ ಕೊಡಬಾರದರು. ನಿಮ್ಮ ಸೂರ್ಯವಂಶ ಸೀರಿಯಲ್ನಲ್ಲೂ ಬ್ಯಾನ್ ಮಾಡಬೇಕು ಎಂದು ಕಿರುತೆರೆ ನಿರ್ಮಾಪಕರ ಸಂಘ ಎಸ್.ನಾರಾಯಣ್ಗೆ ಮನವಿ ಮಾಡಿದೆ. ನಾನು ಸದ್ಯಕ್ಕೆ ಏನೂ ಹೇಳಲ್ಲ. ಸ್ವಲ್ಪ ಕಾಲಾವಕಾಶ ಕೊಡಿ ಎಂದು ಎಸ್.ನಾರಾಯಣ್ ಹೇಳಿದ್ದಾರೆ ಎನ್ನಲಾಗಿದೆ.
2 ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣದಲ್ಲಿ ನಟ ಅನಿರುದ್ಧ್, ಎಸ್ ನಾರಾಯಣ್ ಅವರು ತಮ್ಮ ಕೈ ಹಿಡಿದುಕೊಂಡು ಮುನ್ನಡೆಸುತ್ತಿರುವ ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ‘‘ಅತ್ಯಂತ ಸಂತೋಷದಿಂದ ತಮ್ಮೆಲ್ಲರ ಜೊತೆ ಒಂದು ಸಿಹಿ ಸುದ್ದಿ ಹಂಚಿಕೊಳ್ಳುವೆ. ನಮ್ಮೆಲ್ಲರ ನೆಚ್ಚಿನ ಉದಯ ವಾಹಿನಿಯಲ್ಲಿ ಅತಿ ಶೀಘ್ರದಲ್ಲಿ ಪ್ರಸಾರವಾಗಲಿರುವ ಕಲಾ ಸಾಮ್ರಾಟ್ ಎಸ್. ನಾರಾಯಣ್ ಸರ್ ಅವರ ರಚನೆ ಹಾಗೂ ನಿರ್ದೇಶನದ ಹೊಸ ಧಾರಾವಾಹಿ ಸೂರ್ಯವಂಶದಲ್ಲಿ ನಾನು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಾ ಇದ್ದೇನೆ. ಇದು ತಮ್ಮೆಲ್ಲರ ಹಾರೈಕೆ, ಆರ್ಶೀವಾದಗಳ ಫಲ. ತಮ್ಮ ಪ್ರೀತಿ, ಪ್ರೋತ್ಸಾಹ ನನ್ನ ಮೇಲೆ ಸದಾ ಇರುತ್ತೆ ಅನ್ನೋ ಭರವಸೆ ನನಗಿದೆ’’ ಎಂದು ಬರೆದುಕೊಂಡಿದ್ದರು.
ಇದನ್ನು ನೋಡಿ ಖುಷಿ ಪಟ್ಟ ಅನಿರುದ್ಧ್ ಅಭಿಮಾನಿಗಳು ಕಮ್ ಬ್ಯಾಕ್ ಸರ್… ನಿಮ್ಮೊಂದಿಗೆ ನಾವಿದ್ದೇವೆ ಎಂದು ಶುಭಕೋರಿದ್ದರು. ಇದಾದ ಎರಡೇ ದಿನಕ್ಕೆ ಕಿರುತೆರೆ ನಿರ್ಮಾಪಕರ ಸಂಘ ಶಾಕ್ ಕೊಟ್ಟಿದೆ. ಅನಿರುದ್ಧ್ರ ಜೊತೆ ಧಾರಾವಾಹಿ ತೆಗೆಯದಂತೆ ಮನವಿ ಮಾಡಿದೆ. ಎಸ್.ನಾರಾಯಣ್ರ ನಿರ್ಧಾರ ಏನೆಂದು ಇನ್ನೂ ಬಹಿರಂಗವಾಗಿಲ್ಲ.
ಈ ಕುರಿತು ಇಂದು(ಡಿ.9) ಮಧ್ಯಾಹ್ನ ಫಿಲ್ಮ್ ಚೇಂಬರ್ನಲ್ಲಿ ಅಧ್ಯಕ್ಷ ಭಾಮ ಹರೀಶ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದ್ದು, ನಟ ಅನಿರುದ್ಧ್ ಮತ್ತು ಕಿರುತೆರೆ ನಿರ್ಮಾಪಕ ಸಂಘ ಪಾಲ್ಗೊಳ್ಳಲಿದೆ.
‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಅನಿರುದ್ಧ್ ರ ಜಾಗದಲ್ಲಿ ನಾಯಕನಟನಾಗಿ ತಾವು ಬೇರೆಯವರನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅವರೇ ವಾಪಸ್ ಬರಬೇಕು ಎಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಆದರೂ ಇದಾಗಲೇ ಧಾರಾವಾಹಿಯ ಕಥೆಯನ್ನೇ ಬದಲಿಸಲಾಗಿದೆ. ಈಗ ನಡೆಯುತ್ತಿರುವ ಧಾರಾವಾಹಿ ಕಥೆಯನ್ನು ಗಮನಿಸಿದರೆ, ಅನಿರುದ್ಧ್ ಪುನಃ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಾರರು ಎಂಬುದು ಬಹುತೇಕ ಖಚಿತವಾಗಿದೆ.
ಇಷ್ಟೇ ಅಲ್ಲದೇ, ಧಾರಾವಾಹಿ ಮತ್ತು ಯಾವುದೇ ರಿಯಾಲಿಟಿ ಷೋಗಳಲ್ಲಿ ಅನಿರುದ್ಧ ಅವರನ್ನು ಬಳಸಿಕೊಳ್ಳಬೇಡಿ ಎಂದು ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ಅಂಗ ಸಂಸ್ಥೆಯಾದ ಟೆಲಿವಿಷನ್ ನಿರ್ದೇಶಕರ ಸಂಘ ಈಗಾಗಲೇ ಕನ್ನಡದ ಅಷ್ಟೂ ಮನರಂಜನಾ ವಾಹಿನಿಗಳಿಗೆ ಮನವಿ ಮಾಡಿವೆ.
ಪಿಯು ಪಾಸಾದವರಿಗೆ ಕೇಂದ್ರ ಸರ್ಕಾರಿ ಹುದ್ದೆ: ಎಸ್ಎಸ್ಸಿಯಿಂದ 4,500 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ
ತುಮಕೂರಲ್ಲಿ ‘ನಾರಾಯಣ ದೇವಾಲಯ’ ಉದ್ಘಾಟನೆ: ಇದು ಕ್ಯಾಷ್ ಕೌಂಟರ್ ಇಲ್ಲದ ಮೊದಲ ಆಸ್ಪತ್ರೆ