More

    ಅದನ್ನೆಲ್ಲ ನಂಬಬೇಡಿ, ನಂಗೇನೂ ಆಗಿಲ್ಲ..: ನಟ ಕುರಿ ಪ್ರತಾಪ್ ಸ್ಪಷ್ಟನೆ ಕೊಟ್ಟಿದ್ದೇಕೆ?

    ಬೆಂಗಳೂರು: ಸೋಷಿಯಲ್ ಮೀಡಿಯಾ ಎಂದಮೇಲೆ ಅಲ್ಲಿ ಜನರಿಗೊಂದು ಮಾತು-ಅಭಿಪ್ರಾಯ ಹೊರಹೊಮ್ಮುತ್ತಿರುವುದು ಹೊಸದೇನಲ್ಲ. ಆದರೆ ಕೆಲವೊಮ್ಮೆ ಸುಳ್ಳುಸುಳ್ಳೇ ವಿಷಯಗಳು ಪೋಸ್ಟ್ ಆಗಿ ವೈರಲ್ ಆಗುವುದಷ್ಟೇ ಅಲ್ಲ, ಸಂಬಂಧ ಪಟ್ಟವರನ್ನು ಎಷ್ಟೋ ಸಲ ಇಕ್ಕಟ್ಟಿಗೆ ಸಿಲುಕಿಸಿಬಿಡುತ್ತದೆ. ಅಂಥದ್ದೇ ಒಂದು ಸನ್ನಿವೇಶಕ್ಕೆ ನಟ ಕುರಿತ ಪ್ರತಾಪ್ ಒಳಗಾಗಿದ್ದು, ಅವರು ಆ ಬಗ್ಗೆ ವಿಡಿಯೋ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.

    ಕುರಿ ಪ್ರತಾಪ್ ಇನ್ನಿಲ್ಲ ಎಂಬ ರೀತಿ ಸುದ್ದಿ ಹಬ್ಬಿಸಿ ಕೇಳುಗರನ್ನು-ನೋಡುಗರನ್ನು ಬಕ್ರಾ ಮಾಡಿ ವಿಕೃತ ಖುಷಿ ಕಂಡುಕೊಳ್ಳುವ ಕೆಲವರ ಕಿಡಿಗೇಡಿತನದಿಂದಾಗಿ ಕುರಿ ಪ್ರತಾಪ್ ಸ್ಪಷ್ಟನೆ ಕೊಡಬೇಕಾಗಿ ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಸಾವಿನ ಸುಳ್ಳು ಸುದ್ದಿ ಬರ್ತಿದೆ ಅಂತ ತುಂಬ ಜನ ಕರೆ ಮಾಡಿದ್ದರು. ಅವರಿಗೆಲ್ಲ ಉತ್ತರ ಕೊಟ್ಟು ಕೊಟ್ಟು ಸಾಕಾಯಿತು. ಅದಕ್ಕೆ ವಿಡಿಯೋ ಮಾಡಿ ಸ್ಪಷ್ಟನೆ ನೀಡುತ್ತಿದ್ದೇನೆ ಎಂಬುದಾಗಿ ಕುರಿ ಪ್ರತಾಪ್ ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಮಗ ಮಾಡಿದ ಆ ಒಂದು ಕೆಲಸ ಅಮ್ಮನನ್ನೂ ಬಲಿ ಪಡೆಯಿತಾ?; ಪತಿ ಸತ್ತ ಕೆಲವೇ ಕ್ಷಣಗಳಲ್ಲಿ ಪತ್ನಿಗೂ ಸಾವು!

    ಹಾಗೆಲ್ಲ ಯಾಕೆ ಯಾರು ಹಬ್ಬಿಸುತ್ತಾರೋ ಗೊತ್ತಿಲ್ಲ, ಚೆನ್ನಾಗಿದ್ದವರಿಗೂ ಹೀಗೆಲ್ಲ ಹಬ್ಬಿಸುತ್ತಾರೆ. ನಾನು ಮನೆಯಲ್ಲಿ ಚೆನ್ನಾಗಿದ್ದೇನೆ. ನನಗೇನೂ ಆಗಿಲ್ಲ, ಮನೆಯಲ್ಲೇ ಆರಾಮಾಗಿದ್ದೀನಿ ನೋಡಿ ಎಂದು ಅವರು ವಿಡಿಯೋ ಹಂಚಿಕೊಂಡಿದ್ದಾರೆ. ಹಾಗೆಯೇ ಈ ಕರೊನಾ ಸಂದರ್ಭದಲ್ಲಿ ಎಲ್ಲರೂ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ ಎಂಬ ಕಿವಿಮಾತನ್ನೂ ಹೇಳಿದ್ದಾರೆ.

    ಕರೊನಾದಿಂದ ಸತ್ತ 300ಕ್ಕೂ ಹೆಚ್ಚು ಜನರ ಶವಸಂಸ್ಕಾರ ಮಾಡಿದ್ದವ ಕೊನೆಗೆ ಕೋವಿಡ್​ಗೇ ಬಲಿಯಾದ!

    ಹೆಂಡತಿಗೆ ಕಿರುಕುಳ ಕೊಟ್ಟು ಸಾವು ತಂದುಕೊಂಡ ಗಂಡ; ಆಕೆ ಹೊಡೆಯಿರಿ ಎಂದಳು, ಅವರಿಬ್ಬರು ಕೊಂದೇ ಬಿಟ್ಟರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts