ಬೆಂಗಳೂರು: ಮಾರ್ಟಿನ್ ಚಿತ್ರತಂಡ ಹಾಗೂ ನಟ ಧ್ರುವ ಸರ್ಜಾ ಶ್ರೀನಗರಕ್ಕೆ ತೆರಳುತ್ತಿದ್ದ ವಿಮಾನ ತಾಂತ್ರಿಕ ತೊಂದೆರೆ ಎದುರಿಸಿದ್ದು, ಸದ್ಯ ಅಪಾಯದಂಚಿನಿಂದ ಪಾರಾಗಿದೆ. ಕೂದಲೆಳೆ ಅಂತರದಲ್ಲಿ ಆ್ಯಕ್ಷನ್ ಪ್ರಿನ್ಸ್ ಹಾಗೂ ಚಿತ್ರತಂಡ ಪಾರಾಗಿದ್ದಾರೆ.
ಇದನ್ನೂ ಓದಿ: ಪ್ರಭಾಸ್ ಮುಂಬರುವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಈ ನಟಿ! ಯಾರೀ ಬೆಡಗಿ?
ದೆಹಲಿಯಿಂದ ಶ್ರೀನಗರಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ತಾಂತ್ರಿಕ ತೊಂದರೆ ಆದ ಪರಿಣಾಮ ಹೀಗಾಗಿದೆ. ತೊಡಕು ಉಂಟಾದ ಕೂಡಲೇ ಸಾವಿರಾರು ಅಡಿ ಕೆಳಗಿಳಿದು, ಪೈಲೆಟ್ ಕಂಟ್ರೋಲ್ ತಪ್ಪಿದೆ. ಕೂಡಲೇ ಎಚ್ಚೆತ್ತುಕೊಂಡ ಪೈಲೆಟ್, ಕ್ರಾಶ್ ಆಗಬೇಕಿದ್ದ ವಿಮಾನವನ್ನು ಕಂಟ್ರೋಲ್ ಪಡೆದು, ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.
ಯಾವುದೇ ಅನಾಹುತ ಅಗದಂತೆ ಶ್ರೀನಗರದಲ್ಲಿ ಪೈಲೆಟ್ ಪ್ಲೈಟ್ಲ್ಯಾಂಡ್ ಮಾಡಿದ್ದಾರೆ. ಮಾರ್ಟಿನ್ ಚಿತ್ರದ ಸಾಂಗ್ ಶೂಟಿಂಗ್ಗಾಗಿ ಕಾಶ್ಮೀರಕ್ಕೆ ಹೋಗಿರುವ ಚಿತ್ರತಂಡ ಇದೀಗ ಕೂದಲೆಳೆ ಅಂತರದಲ್ಲಿ ಪಾರಾಗಿರುವುದು ನಿಜಕ್ಕೂ ಅದೃಷ್ಟ ಎನ್ನಬಹುದು. ಸದ್ಯ ಸೇಫ್ ಆಗಿ ಚಿತ್ರತಂಡದ ಜತೆ ಶ್ರೀನಗರದಲ್ಲಿರುವ ಧ್ರುವ ಸರ್ಜಾ, ಈ ಕುರಿತಂತೆ ಅಭಿಮಾನಿಗಳಿಗೆ ಚಿಕ್ಕ ಅಪ್ಟೇಟ್ ಕೂಡ ನೀಡಿದ್ದಾರೆ.
View this post on Instagram
ಘಟನೆ ನೆನಪಿಸಿಕೊಂಡು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿರುವ ಧೃವ ಸರ್ಜಾ, ಚಿತ್ರತಂಡದೊಂದಿಗೆ ಇರುವ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ.
ಈ ನಟ ಯಾರೆಂದು ಗೊತ್ತಿಲ್ಲದಿದ್ದರೂ ಇವರ ಡೈಲಾಗ್ ಮಾತ್ರ ಪಕ್ಕಾ ನೆನಪಿರುತ್ತೆ!