More

    ಯೋಗರಾಜ್​ ರಾಜ್​ ಭಟ್​ ‘ಗರಡಿ’ಗೆ ನಟ ದರ್ಶನ್​ ಎಂಟ್ರಿ; ಈ ಊರಿನಲ್ಲಿ ಟ್ರೇಲರ್​ ಲಾಂಚ್​

    ಬೆಂಗಳೂರು: ನಿರ್ದೇಶಕ, ಬರಹಗಾರ, ವಿಕಟಕವಿ ಎಂದೇ ಖ್ಯಾತರಾದ ಯೋಗರಾಜ್​ ಭಟ್​ ನಿರ್ದೇಶನದ ‘ಗರಡಿ’ ಸಿನಿಮಾ ಸದ್ಯ ಕನ್ನಡ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡುತ್ತಿದೆ. ಚಿತ್ರದ ಒಂದೊಂದು ಕುತೂಹಲಕಾರಿ ವಿಷಯಗಳು ಸೋಷಿಯಲ್​ ಮೀಡಿಯಾದಲ್ಲಿ ಸಿನಿಪ್ರಿಯರ ಕೌತುಕವನ್ನು ಹೆಚ್ಚಿಸಿದೆ. ಇತ್ತೀಚೆಗೆ ನಿರ್ದೇಶಕರು ಹೊರಡಿಸಿದ ಅಧಿಕೃತ ಮಾಹಿತಿಯ ಅನುಸಾರ ಸಿನಿಮಾದ ಟ್ರೇಲರ್​ ಶೀಘ್ರವೇ ಅನಾವರಣಗೊಳ್ಳಲು ಸಜ್ಜಾಗಿದೆ.

    ಇದನ್ನೂ ಓದಿ: ಪೈಗಂಬರ್ ವಿರುದ್ಧ ಹೇಳಿಕೆ: ಶಾಸಕ ರಾಜಾ ಸಿಂಗ್​ ಅಮಾನತು ರದ್ದು ಮಾಡಿ, ಟಿಕೆಟ್ ನೀಡಿದ​ ತೆಲಂಗಾಣ ಬಿಜೆಪಿ

    ಯೋಗರಾಜ್​ ಭಟ್​ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ‘ಗರಡಿ’ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೆ ಸಂಪೂರ್ಣವಾಗಿ ಮುಗಿದಿದೆ. ಸಿನಿಮಾದಲ್ಲಿ ಯಶಸ್ ಸೂರ್ಯ ಮತ್ತು ಸೋನಾಲ್​ ಮೊಂಟೇರೊ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ಯೋಗರಾಜ್​ ಹಾಗೂ ವಿ. ಹರಿಕೃಷ್ಣ ಅವರ ಸಂಗೀತ ಸಂಯೋಜನೆಯಿದೆ.

    ಇದನ್ನೂ ಓದಿ:  ರೌಡಿಶೀಟರ್​ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

    ಕುಸ್ತಿ ಕಥೆಯನ್ನು ಒಳಗೊಂಡ ಈ ಸಿನಿಮಾ ಇದೇ ನವೆಂಬರ್​ 10 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಚಿತ್ರದ ಅಧಿಕೃತ ಟ್ರೇಲರ್​ ಅನ್ನು ನವೆಂಬರ್​ 01 ಕನ್ನಡ ರಾಜ್ಯೋತ್ಸವದಂದು ನಟ ದರ್ಶನ್​ ಅವರು ರಾಣೆಬೆನ್ನೂರಿನಲ್ಲಿ ರಿಲೀಸ್​ ಮಾಡಲಿದ್ದಾರೆ ಎಂದು ಖುದ್ದಾಗಿ ಪೋಸ್ಟರ್​ ಮೂಲಕ ಯೋಗರಾಜ್​ ಭಟ್​ ಘೋಷಿಸಿದ್ದಾರೆ. ಗರಡಿ ಚಿತ್ರದಲ್ಲಿ ದರ್ಶನ್​ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    BBKS10: ಹೂ ನಾ? ಊಹೂ ನಾ?; ಸ್ಪರ್ಧಿಗಳಿಗೆ ನಗು, ವೀಕ್ಷಕರಲ್ಲಿ ಗೊಂದಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts