ಬೆಂಗಳೂರು: ಮಂಗಳೂರಿನ ಏರ್ಪೋರ್ಟ್ನಲ್ಲಿ ಬಾಂಬ್ ಇಟ್ಟ ಆದಿತ್ಯ ರಾವ್ನನ್ನು ಮಂಗಳೂರು ಪೊಲೀಸರ ವಶಕ್ಕೆ ನೀಡಿ ಎಸಿಎಂಎಂ ಕೋರ್ಟ್ ಆದೇಶ ನೀಡಿದೆ.
ಆದಿತ್ಯ ರಾವ್ನನ್ನು ಟ್ರಾನ್ಸಿಟ್ ವಾರಂಟ್ ಮೂಲಕ ಕರೆದೊಯ್ಯಲು ಮಂಗಳೂರು ಪೊಲೀಸರಿಗೆ ನ್ಯಾಯಾಲಯ ಆದೇಶ ನೀಡಿದೆ. ಆದಿತ್ಯರಾವ್ನನ್ನು ಮಂಗಳೂರು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ.
ಇಂದು ಬೆಂಗಳೂರಿನ ಹುಲಸೂರು ಠಾಣೆ ಪೊಲೀಸರು ಆದಿತ್ಯ ರಾವ್ನನ್ನು ವಿಚಾರಣೆಗೆ ಒಳಪಡಿಸಿದ್ದ ವೇಳೆ ಆತ ಹಲವು ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ. ಆತನ ಹೇಳಿಕೆಗಳನ್ನು ದಾಖಲಿಸಿಕೊಂಡ ಪೊಲೀಸರು ಕೆಲವೇ ಹೊತ್ತಿನ ಮೊದಲು ಒಂದನೇ ಎಸಿಎಂಎಂ ಕೋರ್ಟ್ಗೆ ಹಾಜರು ಪಡಿಸಿದ್ದರು.
ನಾಳೆ ( 23/01/2020) ಸಂಜೆ 5.30ಕ್ಕೆ ಮಂಗಳೂರು ಪೊಲೀಸರು 6ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಲು ಸೂಚಿಸಲಾಗಿದೆ. ಸಂಜೆ ಏಳು ಗಂಟೆ ವಿಮಾನದಲ್ಲಿ ಕೆಐಎಎಲ್ ವಿಮಾನನಿಲ್ದಾಣದಿಂದ ಮಂಗಳೂರಿಗೆ ಆರೋಪಿ ಆದಿತ್ಯ ರಾವ್ನನ್ನು ಪೊಲೀಸರು ಕರೆದುಕೊಂಡು ಹೋಗಲಿದ್ದಾರೆ. (ದಿಗ್ವಿಜಯ ನ್ಯೂಸ್)