More

    ಏರ್​ಪೋರ್ಟ್​ನಲ್ಲಿ ಬಾಂಬ್​ ಇಟ್ಟಿದ್ದ ಆರೋಪಿ ಆದಿತ್ಯ ರಾವ್​​ನನ್ನು ಮಂಗಳೂರು ಪೊಲೀಸರ ವಶಕ್ಕೆ ನೀಡಿದ ಎಸಿಎಂಎಂ ಕೋರ್ಟ್

    ಬೆಂಗಳೂರು: ಮಂಗಳೂರಿನ ಏರ್​ಪೋರ್ಟ್​ನಲ್ಲಿ ಬಾಂಬ್​ ಇಟ್ಟ ಆದಿತ್ಯ ರಾವ್​ನನ್ನು ಮಂಗಳೂರು ಪೊಲೀಸರ ವಶಕ್ಕೆ ನೀಡಿ ಎಸಿಎಂಎಂ ಕೋರ್ಟ್ ಆದೇಶ ನೀಡಿದೆ.

    ಆದಿತ್ಯ ರಾವ್​ನನ್ನು ಟ್ರಾನ್ಸಿಟ್​ ವಾರಂಟ್​ ಮೂಲಕ ಕರೆದೊಯ್ಯಲು ಮಂಗಳೂರು ಪೊಲೀಸರಿಗೆ ನ್ಯಾಯಾಲಯ ಆದೇಶ ನೀಡಿದೆ. ಆದಿತ್ಯರಾವ್​ನನ್ನು ಮಂಗಳೂರು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ.
    ಇಂದು ಬೆಂಗಳೂರಿನ ಹುಲಸೂರು ಠಾಣೆ ಪೊಲೀಸರು ಆದಿತ್ಯ ರಾವ್​ನನ್ನು ವಿಚಾರಣೆಗೆ ಒಳಪಡಿಸಿದ್ದ ವೇಳೆ ಆತ ಹಲವು ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ. ಆತನ ಹೇಳಿಕೆಗಳನ್ನು ದಾಖಲಿಸಿಕೊಂಡ ಪೊಲೀಸರು ಕೆಲವೇ ಹೊತ್ತಿನ ಮೊದಲು ಒಂದನೇ ಎಸಿಎಂಎಂ ಕೋರ್ಟ್​ಗೆ ಹಾಜರು ಪಡಿಸಿದ್ದರು.

    ನಾಳೆ ( 23/01/2020) ಸಂಜೆ 5.30ಕ್ಕೆ ಮಂಗಳೂರು ಪೊಲೀಸರು 6ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಲು ಸೂಚಿಸಲಾಗಿದೆ. ಸಂಜೆ ಏಳು ಗಂಟೆ ವಿಮಾನದಲ್ಲಿ ಕೆಐಎಎಲ್​ ವಿಮಾನನಿಲ್ದಾಣದಿಂದ ಮಂಗಳೂರಿಗೆ ಆರೋಪಿ ಆದಿತ್ಯ ರಾವ್​ನನ್ನು ಪೊಲೀಸರು ಕರೆದುಕೊಂಡು ಹೋಗಲಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts