ಆನೇಕಲ್: ಅನೈತಿಕ ಸಂಬಂಧಕ್ಕೆ ತೊಡಕಾದ ಗಂಡ ಹಾಗೂ ಆತನ ತಂಗಿಯ ಮೇಲೆ ಹೊಂಚು ಹಾಕಿ ಆಸಿಡ್ ಮಿಶ್ರಿತ ಟಾಯ್ಲೆಟ್ ಕ್ಲೀನರ್ ಎರಚಿ ದಾಳಿ ಮಾಡಿರುವ ಘಟನೆ ಬಿಹೊಸಹಳ್ಳಿ ಹಾಗೂ ಚಿಕ್ಕತಿಮ್ಮಸಂದ್ರ ರಸ್ತೆಯಲ್ಲಿ ನಡೆದಿದೆ.
ವಿಶ್ವನಾಥ್ ಮತ್ತವರ ತಂಗಿ ನಿರ್ಮಲಾರ ಮೇಲೆ ವಿಶ್ವನಾಥ್ ಪತ್ನಿ ಹಾಗೂ ಆತನ ಪ್ರಿಯಕರ ಟಾಯ್ಲೆಟ್ ಕ್ಲೀನರ್ ಎರಚಿರುವ ಆರೋಪ ಕೇಳಿಬಂದಿದೆ. ವಿಶ್ವನಾಥ್ ಮತ್ತು ತಂಗಿ ನಿರ್ಮಲಾ ಲಿಫ್ಟ್ ರಿಪೇರಿ ಮಾಡಲು ಸರ್ಜಾಪುರ ಅಪಾರ್ಟ್ಮೆಂಟ್ಗೆ ಭೇಟಿ ನೀಡಿ ಮರಳುತಿದ್ದಾಗ ದುಷ್ಕೃತ್ಯ ನಡೆದಿದೆ. ಇದನ್ನೂ ಓದಿ: ಸರ್ಕಾರಿ ಶಾಲಾ ಶಿಕ್ಷಕನಾಗಿದ್ದ ಪತಿಯ ಆತ್ಮಹತ್ಯೆ ಸುದ್ದಿ ಕೇಳಿ ನೇಣಿಗೆ ಶರಣಾದ ಪತ್ನಿ
ವಿಶ್ವನಾಥ್ ಹೆಂಡತಿ ಲಕ್ಷ್ಮಿ ಮತ್ತಾಕೆಯ ಪ್ರಿಯಕರ ರಸ್ತೆಯಲ್ಲಿ ಕಾದು ಕುಳಿತು ಹೊಂಚು ಹಾಕಿ ಇಬ್ಬರ ಮೇಲೆ ದಾಳಿ ಮಾಡಿ ಪರಾರಿಯಾಗಿದ್ದಾರೆ. ಇಬ್ಬರು ಹೆಲ್ಮೆಟ್ ಹಾಕಿದ್ದರಿಂದ ಆಸಿಡ್ಯುಕ್ತ ಕ್ಲೀನರ್ನಿಂದ ಅಣ್ಣ-ತಂಗಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ವಿಶ್ವನಾಥನ ಬಲ ಎದೆ ಹಾಗೂ ತೋಳಿಗೆ ಬೊಬ್ಬೆಗಳಾಗಿದ್ದರೆ, ತಂಗಿ ನಿರ್ಮಲಾರಿಗೆ ಕೈಮೇಲೆ ಬೊಬ್ಬೆಗಳಾಗಿ ಸರ್ಜಾಪುರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನೂ ಓದಿ: ಮಟಮಟ ಮಧ್ಯಾಹ್ನ ಅಲ್ಲೇನಾಯ್ತು? … ಮುಗಿಲು ಮುಟ್ಟಿದೆ ಬಡ ಕುಟುಂಬಗಳ ಆಕ್ರಂದನ
ಸಂತ್ರಸ್ತರು ಮೂಲತಃ ಕೋಲಾರ ಜಿಲ್ಲೆಯ ಹೆಬ್ಬಣಿಯವರಾಗಿದ್ದು, ಚಂದಾಪುರದಲ್ಲಿ ವಾಸವಿದ್ದರು. ಘಟನಾ ಸ್ಥಳಕ್ಕೆ ಸರ್ಜಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)
ಇನ್ಮುಂದೆ ಯಾವುದೇ ಎಲೆಕ್ಷನ್ಗೆ ನಿಲ್ಲಬಾರದೆಂದು ಮನಸ್ಸು ಗಟ್ಟಿ ಮಾಡ್ಕೊಂಡಿದ್ದೆ, ಆದರೆ…