ಕುಣಿಗಲ್: ಜಮೀನು ಖಾತೆ ಮಾಡಿಕೊಡಲು ವಾಟರ್ ಮ್ಯಾನ್ನಿಂದ 10 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಇಪ್ಪಾಡಿ ಗ್ರಾಮಲೆಕ್ಕಿಗ ಕೆ.ಬಿ.ಲೋಕೇಶ್ ಎಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ತಾಲೂಕಿನ ಹುತ್ರಿದುರ್ಗ ಹೋಬಳಿ ಇಪ್ಪಾಡಿಯ ದಿ.ಹೀರಣ್ಣ ಅವರ ಹೆಸರಿನಲ್ಲಿ ಇರುವ ಸರ್ವೆ ನಂ 65/5 ರ ಮೂರೂವರೆ ಗುಂಟೆ ಜಮೀನು ಅವರ ಮಗ ಬಸವರಾಜು ಹಾಗೂ ಸೊಸೆಯಂದಿರಾದ ಸರೋಜಮ್ಮ ಹಾಗೂ ನಾಗಮ್ಮರ ಹೆಸರಿಗೆ ಜಂಟಿ ಖಾತೆ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದರು.
ಆದರೆ, ಗ್ರಾಮ ಲೆಕ್ಕಿಗ ಕೆ.ಬಿ.ಲೋಕೇಶ್ 10 ಸಾವಿರ ರೂ. ಲಂಚ ಕೊಡುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಸಂಬಂಧ ತುಮಕೂರು ಎಸಿಬಿ ಪೊಲೀಸರಿಗೆ ದೂರು ನೀಡಲಾಗಿತ್ತು. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಇಂದು ಸಂಜೆ 4ಗಂಟೆಗೆ ಹೀರಣ್ಣ ಅವರ ಮೊಮ್ಮಗ ಸತೀಶ ಎಂಬುವರು ಕುಣಿಗಲ್ ಪಟ್ಟಣದ ಮುನಿಕಾಳಯ್ಯನ ಬಿಲ್ಡಿಂಗ್ನಲ್ಲಿ ರುವ ವಿಎ ಕಚೇರಿಗೆ ತೆರಳಿ ಲೋಕೇಶ್ಗೆ 10 ಸಾವಿರ ಲಂಚ ನೀಡುತ್ತಿರುವಾಗ ಎಸಿಬಿ ಇನ್ಸ್ಪೆಕ್ಟರ್ ವಿಜಯಲಕ್ಷ್ಮಿ ನೇತೃತ್ವದ ತಂಡ ದಾಳಿ ನಡೆಸಿ, ಆರೋಪಿ ಲೋಕೇಶ್ರನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
ಡ್ಯೂಟಿ ಮುಗಿಸಿ ರಾತ್ರಿ ಬಂದವ ಮಗಳ ಬಾಯಿಗೆ ಬಟ್ಟೆ ತುರುಕುತ್ತಿದ್ದ.. ಕೈಕಾಲು ಕಟ್ಟಿ ಹೊಡೆಯುತ್ತಿದ್ದ…