More

    ಸಾರ್ವಜನಿಕರನ್ನು ಕಚೇರಿ ಹೊರಗೆ ಕಾಯಿಸಿ, ಒಳಗೆ ಜನ್ಮದಿನ ಆಚರಿಸಿಕೊಂಡ ಎ.ಸಿ.!

    ತುಮಕೂರು: ಕಚೇರಿಗೆ ಬಂದ ಸಾರ್ವಜನಿಕರನ್ನು ಹೊರಗೆ ಕಾಯಿಸಿ, ಒಳಗೆ ಜನ್ಮದಿನ ಆಚರಿಸಿಕೊಳ್ಳುವಲ್ಲಿ ಉಪ ವಿಭಾಗಾಧಿಕಾರಿ (ಎಸಿ) ಬಿಜಿಯಾದ ಪ್ರಸಂಗವೊಂದು ಬೆಳಕಿಗೆ ಬಂದಿದ್ದು, ಆ ಕುರಿತ ವಿಡಿಯೋ ಕೂಡ ವೈರಲ್ ಆಗಿದೆ. ತುಮಕೂರು ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

    ತುಮಕೂರು ಉಪ ವಿಭಾಗಾಧಿಕಾರಿ ಅಜಯ್​ ಕುಮಾರ್ ಅವರ ವಿರುದ್ಧ ಈ ಆರೋಪ ಕೇಳಿಬಂದಿದೆ. ಅವರು ನಿಯಮ ಉಲ್ಲಂಘಿಸಿ ಕರ್ತವ್ಯದ ಸಮಯದಲ್ಲಿ ಕಚೇರಿಯಲ್ಲೇ ಜನ್ಮದಿನ ಆಚರಿಸಿಕೊಂಡ ಕುರಿತು ಈಗ ಆಕ್ಷೇಪಗಳು ಕೇಳಿಬರುತ್ತಿವೆ.

    ಸಾರ್ವಜನಿಕರನ್ನು ಕಚೇರಿ ಹೊರಗೆ ಕಾಯಿಸಿ, ಒಳಗೆ ಜನ್ಮದಿನ ಆಚರಿಸಿಕೊಂಡ ಎ.ಸಿ.!

    ನಿರಂತರ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಸಾರ್ವಜನಿಕರು ಅಹವಾಲು ಸಲ್ಲಿಸಲು ಕಚೇರಿಗೆ ಬಂದಿದ್ದರೂ ಅವರನ್ನು ಹೊರಗೆ ಕಾಯುವಂತೆ ಮಾಡಿ ಇವರು ಒಳಗೆ ಕಚೇರಿಯಲ್ಲಿ ಜನ್ಮದಿನ ಆಚರಿಸಿಕೊಂಡಿದ್ದಾರೆ. ತಲೆಗೆ ಪೇಟ ತೊಟ್ಟು, ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಂಡಿದ್ದಾರೆ. ಉಪವಿಭಾಗಾಧಿಕಾರಿಯ ನಡೆಗೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದ್ದು, ಎಸಿ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಡಿಸಿಗೆ ಒತ್ತಾಯಿಸುವ ಧ್ವನಿ ಎದ್ದಿದೆ.

    ರಾಜ್ಯಾದ್ಯಂತ ಮಕ್ಕಳ ಕಳ್ಳರು?; ಜನರ ಕೈಗೆ ಸಿಕ್ಕಿಹಾಕಿಕೊಂಡ ಇಬ್ಬರ ಪೈಕಿ ಒಬ್ಬನ ಜೇಬಲ್ಲಿದ್ದವು ಮಕ್ಕಳ ಫೋಟೋಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts