More

    10 ಲಕ್ಷ ಹಿರಿಯ ನಾಗರಿಕರ ಮನೆ ಬಾಗಿಲಿಗೆ ಪಡಿತರ ರವಾನೆ: ಆಮ್​ ಆದ್ಮಿ ಪಕ್ಷದ ಪ್ರಣಾಳಿಕೆ ಬಿಡುಗಡೆ

    ನವದೆಹಲಿ: ಆಮ್​ ಆದ್ಮಿ ಪಕ್ಷ (ಎಎಪಿ) ದೆಹಲಿ ಚುನಾವಣೆ ಹಿನ್ನೆಲೆಯಲ್ಲಿ 10 ಅಂಶ ಹೊಂದಿರುವ ಪ್ರಣಾಳಿಕೆಯನ್ನು ಮಂಗಳವಾರ ಬಿಡುಗಡೆ ಮಾಡಿದೆ.

    ಪಕ್ಷದ ಪ್ರಣಾಳಿಕೆಯನ್ನುಉಪ ಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಅವರು ಬಿಡುಗಡೆ ಮಾಡಿದರು.
    ಮನೆ ಬಾಗಿಲಿಗೆ ಪಡಿತರ, ಗುಣಮಟ್ಟದ ಶಿಕ್ಷಣ, ಶಾಲೆಗಳಲ್ಲಿ ದೇಶಭಕ್ತಿ ಪಠ್ಯ ಅಳವಡಿಕೆ ಪ್ರಣಾಳಿಕೆಯಲ್ಲಿರುವ ಪ್ರಮುಖ ಭರವಸೆಗಳು.

    ಉಪ ಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಮಾತನಾಡಿ, ಪಕ್ಷ ಆಹಾರ ಹಾಗೂ ಶುದ್ಧ ಕುಡಿಯುವ ನೀರು ಒದಗಿಸಲು ಬದ್ಧತೆ ಹೊಂದಿದೆ. ಅಲ್ಲದೆ ದೆಹಲಿ ಜನರಿಗೆ 24 ತಾಸು ವಿದ್ಯುತ್​ ಪೂರೈಕೆ ಮಾಡಲಿದೆ ಎಂದು ಹೇಳಿದರು.

    10 ಲಕ್ಷ ಮಂದಿ ಹಿರಿಯ ನಾಗರಿಕರ ಮನೆ ಬಾಗಿಲಿಗೆ ಪಡಿತರ ರವಾನೆಯಾಗಲಿದೆ, ಯುವಕರು, ಮಹಿಳೆ ಹಾಗೂ ಜನ ಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆ ತಯಾರಿಸಲಾಗಿದೆ ಎಂದು ಅವರು ಹೇಳಿದರು.
    ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​, ಮುಖಂಡರಾದ ಗೋಪಾಲ್ ರೈ, ಸಂಜಯ್ ಸಿಂಗ್, ಜಾಸ್ಮಿನ್ ಶಾ ಮತ್ತು ಡಾ.ಅಜಯ್​ ಕುಮಾರ್ ಇದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts