ಭೋಪಾಲ್: ಬೈಕು, ಕಾರು ತೆಗೆದುಕೊಳ್ಳಬೇಕೆನ್ನುವ ಬಯಕೆ ಎಲ್ಲರಿಗೂ ಇರುತ್ತದೆ. ಆದರೆ ಇಲ್ಲೊಂದು ಸಣ್ಣ ಗ್ರಾಮದ ಮಹಿಳೆಗೆ ಹೆಲಿಕಾಫ್ಟರ್ ಬೇಕಂತೆ. ನನಗೆ ಹೆಲಿಕಾಪ್ಟರ್ ಕೊಡಿಸಿ, ಇಲ್ಲವೇ ಅದಕ್ಕೆ ಸಾಲ ಕೊಡಿಸಿ ಎಂದು ಮಹಿಳೆಯೊಬ್ಬಳು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ. ಆದರೆ ಈ ರೀತಿಯ ಬೇಡಿಕೆಯ ಹಿಂದಿಬನ ಕಥೆ ಕೇಳಿದರೆ ನಿಮಗೂ ಒಮ್ಮೆಗೆ ಅಚ್ಚರಿ ಆಗುವುದು ಗ್ಯಾರಂಟಿ.
ಮಧ್ಯಪ್ರದೇಶದ ಮಾಂಡ್ಸೌರ್ ಜಿಲ್ಲೆಯ ಅಗರ್ ಗ್ರಾಮದ ನಿವಾಸಿ ಬಸಂತಿ ಬಾಯಿ ಲೋಹರ್ ಇಂತದ್ದೊಂದು ಪತ್ರವನ್ನು ಬರೆದಿದ್ದಾರೆ. ಆಕೆಗೆ ಅವಳ ಮನೆಯಿಂದ ತುಸು ದೂರದಲ್ಲಿ ಹೊಲವಿದೆಯಂತೆ. ಆ ಕುಟುಂಬಕ್ಕೆ ಆ ಹೊಲವೇ ಆದಾಯದ ಮೂಲವಾಗಿದ್ದು, ಅದರಿಂದಲೇ ಜೀವನ ನಡೆಯುತ್ತಿದೆ. ಆದರೆ ಇತ್ತೀಚೆಗೆ ಆ ಹೊಲಕ್ಕೆ ಹೋಗುವುದು ಸಾಧ್ಯವಾಗುತ್ತಿಲ್ಲ. ಅದೇ ಕಾರಣಕ್ಕೆ ಹೆಲಿಕಾಪ್ಟರ್ ಕೊಡಿಸಿ ಎಂದು ಮಹಿಳೆ ಕೇಳಿಕೊಂಡಿದ್ದಾಳೆ.
ಊರಿನ ಪರಮಾನಂದ ಪಾಟಿದಾರ್ ಕುಟುಂಬದ ಜತೆ ಮಹಿಳೆಯ ಕುಟುಂಬವು ವೈಯಕ್ತಿಕ ಕಲಹ ಹೊಂದಿದೆಯಂತೆ. ಅದೇ ಕಾರಣದಿಂದಾಗಿ ಪಾಟಿದಾರ್ ಮತ್ತು ಅವರ ಲವ ಕುಶ ಹೆಸರಿನ ಇಬ್ಬರು ಮಕ್ಕಳು ಸೇರಿ ಮಹಿಳೆಯು ಹೊಲಕ್ಕೆ ಹೋಗುವ ದಾರಿಯನ್ನು ಮುಚ್ಚಿಬಿಟ್ಟಿದ್ದಾರಂತೆ. ಯಾವ ರೀತಿಯಲ್ಲೂ ಆಕೆ ಹೊಲಕ್ಕೆ ಹೋಗದಂತೆ ಬಂದೋಬಸ್ತ್ ಮಾಡಲಾಗಿದೆಯಂತೆ. ಈ ವಿಚಾರವಾಗಿ ಆಕೆ ಸ್ಥಳೀಯ ಆಡಳಿತಗಳಿಗೆ ದೂರು ನೀಡಿದ್ದಾಳೆ. ಆದರೆ ಅದರಿಂದ ಯಾವುದೇ ಸಹಾಯವಾಗಿಲ್ಲ. ಆ ಹಿನ್ನೆಲೆಯಲ್ಲಿ ಇದೀಗ ರಾಷ್ಟ್ರಪತಿಗಳಿಗೇ ಪತ್ರ ಬರೆದಿದ್ದಾಳೆ. ಟೈಪಿಸ್ಟ್ ಒಬ್ಬರನ್ನು ಸಂಪರ್ಕಿಸಿ ಅವರ ಸಹಾಯದಿಂದ ಹಿಂದಿಯಲ್ಲಿ ಪತ್ರ ಟೈಪ್ ಮಾಡಿಸಿ ಕಳುಹಿಸಿಕೊಟ್ಟಿದ್ದಾಳೆ. ಹೆಲಿಕಾಪ್ಟರ್ ಕೊಡಿಸಿ, ಇಲ್ಲವೇ ಹೆಲಿಕಾಪ್ಟರ್ ಕೊಳ್ಳಲು ಸಾಲ ಮತ್ತು ಅದರ ಪರವಾನಗಿ ಕೊಡಿಸಿ ಎಂದು ಪತ್ರದಲ್ಲಿ ಬೇಡಿಕೆಯಿಟ್ಟಿದ್ದಾಳೆ.
ಮಹಿಳೆಯ ಈ ಪತ್ರದ ವಿಚಾರ ಸಖತ್ ವೈರಲ್ ಆಗಿದೆ. ಕ್ಷೇತ್ರದ ಶಾಸಕರ ಕಿವಿಗೂ ಈ ವಿಚಾರ ಮುಟ್ಟಿದ್ದು, ಇದೀಗ ಮಹಿಳೆಯ ಸಹಾಯಕ್ಕೆ ಅವರು ಮುಂದೆ ಬಂದಿದ್ದಾರೆ. ಜಮೀನು ತಲುಪಲು ಸಾಧ್ಯವಾಗದಿದ್ದರೆ ನಾನು ಆಕೆಗೆ ಸಹಾಯ ಮಾಡಲಿದ್ದೇನೆ, ಆದರೆ ಹೆಲಿಕಾಪ್ಟರ್ ಕೊಡಿಸುವುದು ದೂರದ ಮಾತು ಎಂದು ಶಾಸಕ ಯಶ್ಪಾಲ್ ಸಿಂಗ್ ತಿಳಿಸಿದ್ದಾರೆ. (ಏಜೆನ್ಸೀಸ್)
ಹೆಂಡತಿ ನೋಡಲು ದೂರದ ಊರಿಂದ ಬಂದ ಗಂಡನಿಗೆ ಕಾದಿತ್ತು ಬಿಗ್ ಶಾಕ್! ಹಿಂಬದಿ ಬಾಗಿಲಿಂದ ಬಂದವ ಹೀಗೇಕೆ ಮಾಡಿದ?
ಮೂವರು ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಿದ ಉಗ್ರ ಕೊನೆಗೂ ಅರೆಸ್ಟ್