More

    ಪತ್ನಿ ಕಣ್ಣೆದುರೇ ನವವಿವಾಹಿತ ದುರಂತ ಸಾವು! ಅಳಿಯನ ಪ್ರಾಣ ಉಳಿಸಲು ಹೋದ ಅತ್ತೆಯೂ ಬದುಕಲಿಲ್ಲ

    ಹೊಸೂರು: ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಯುವಕ, ಪತ್ನಿಯ ತವರಿನಲ್ಲಿ ದುರಂತ ಅಂತ್ಯ ಕಂಡಿದ್ದಾನೆ. ಅಳಿಯನ ಪ್ರಾಣ ಉಳಿಸಲು ಹೋದ ಅತ್ತೆಯೂ ಸಾವಿನ ಕೂಪಕ್ಕೆ ಸಿಲುಕಿ ಪ್ರಾಣಬಿಟ್ಟಿದ್ದಾಳೆ.

    ಇಂತಹ ದುರ್ಘಟನೆ ಸೂಳಗಿರಿ ಸಮೀಪದ ವೆಂಪಲ್ಲಿ ಡ್ಯಾಂ ಬಳಿ ಸಂಭವಿಸಿದೆ. ಸುಳಗಿರಿಯ ಬಾಚನು ಬೇಗಂ (55) ಮತ್ತು ಇವರ ಅಳಿಯ ಬೆಂಗಳೂರಿನ ಸಮೀರ್ (23) ಮೃತ ದುರ್ದೈವಿಗಳು.

    ಮೂರು ತಿಂಗಳ ಹಿಂದೆ ಬಾಚನು ಬೇಗಂ ಅವರ ಮಗಳು ಮುಖಾಂ ಜತೆ ಸಮೀರ್ ಮೂರು ತಿಂಗಳ ಹಿಂದೆ ಮದುವೆಯಾಗಿದ್ದ. ಪತ್ನಿ ಜತೆ ಸಮೀರ್​ ಅತ್ತೆ ಮನೆಗೆ ಬಂದಿದ್ದ. ಮಂಗಳವಾರ ಬಟ್ಟೆ ತೊಳೆಯಲು ಹತ್ತಿರದ ವೆಂಪಲ್ಲಿ ಡ್ಯಾಂಗೆ ಪತ್ನಿ ಮತ್ತು ಈಕೆಯ ತಾಯಿ ಹೋಗಿದ್ದರು. ಈ ವೇಳೆ ಸಮೀರ್​ ಕೂಡ ತೆರಳಿದ್ದ. ಅಮ್ಮ-ಮಗಳು ಅತ್ತ ಬಟ್ಟೆ ತೊಳೆಯುತ್ತಿದ್ದರೆ, ಅತ್ತ ಸಮೀರ್​ ನೀರಲ್ಲಿ ಈಜಾಡುತ್ತಿದ್ದ. ಈ ವೇಳೆ ಸಮೀರ್​ ನೀರಲ್ಲಿ ಮುಳುಗಿದ್ದಾನೆ. ಆತನನ್ನು ರಕ್ಷಿಸಲು ಮುಂದಾದ ಅತ್ತೆಯೂ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾಳೆ.

    ಗಂಡ ಮತ್ತು ಅಮ್ಮ ನೀರಲ್ಲಿ ಮುಳುಗಿದ್ದಾರೆ, ಯಾರಾದ್ರೂ ಸಹಾಯಕ್ಕೆ ಬನ್ನಿ ಮುಖಾಂ ಚೀರಾಡುತ್ತಿದ್ದ ಸ್ಥಳಕ್ಕೆ ಬಂದ ಮೀನುಗಾರರು ರಕ್ಷಣೆಗೆ ಮುಂದಾದರಾದರೂ ಅಷ್ಟರಲ್ಲಿ ಅವರಿಬ್ಬರು ಮೃತಪಟ್ಟಿದ್ದರು. ಮೀನುಗಾರರು ಇಬ್ಬರ ಮೃತದೇಹವನ್ನು ಹೊರತೆಗೆದಿದ್ದಾರೆ. ಸುಳಗಿರಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

    ಬೇಲೂರಿನ ಪ್ರೇಮಿಗಳು ಶಿವಮೊಗ್ಗದಲ್ಲಿ ಪತ್ತೆ! ಪ್ರಿಯಕರ ವಾಹನದಿಂದ ಜಿಗಿಯುತ್ತಿದ್ದಂತೆ ಪ್ರೇಯಸಿ ಹೈಡ್ರಾಮ

    ಪದೇಪದೆ ಸರ್ಪಗಳು ಬರುತ್ತಿವೆ… ಎಂದು ಮನೆಯಲ್ಲಿ ಬಾವಿ ತೋಡಿದ ದಂಪತಿ! ವಾರದ ಬಳಿಕ ಕಾದಿತ್ತು ಶಾಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts