ಬೆಂಗಳೂರು: ಪತ್ನಿ ಆತ್ಮಹತ್ಯೆ ಕೇಸ್ನಲ್ಲಿ ಬಂಧನಕ್ಕೊಳಪಟ್ಟಿದ್ದ ಆರೋಪಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಅಪಘಾತದಲ್ಲಿ ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ನಗರದಲ್ಲಿ ಸಂಭವಿಸಿದೆ.
ಕೆ.ಆರ್. ಪುರಂ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಸಂಗೀತಾ ಎಂಬಾಕೆ ಡೆತ್ನೋಟ್ ಬರೆದಿಟ್ಟು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಪ್ರಕರಣದಲ್ಲಿ ಸಂಗೀತಾಳ ಗಂಡ ಶಕ್ತಿವೇಲು ಎಂಬಾತನನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆತಂದಿದ್ದರು. ಇಂದು ಮುಂಜಾನೆ ಶೌಚಗೃಹಕ್ಕೆ ಹೋಗಬೇಕು ಎಂದಿದ್ದರಿಂದ ಆರೋಪಿಯನ್ನು ಲಾಕಪ್ನಿಂದ ಪೊಲೀಸರು ಶೌಚಗೃಹಕ್ಕೆ ಕರೆದೊಯ್ದಿದ್ದರು. ಈ ವೇಳೆ ಆರೋಪಿ ಎಸ್ಕೇಪ್ ಆಗಿದ್ದ. ಈತನನ್ನು ಪೊಲೀಸರು ಹಿಂಬಾಲಿಕೊಂಡು ಹೋಗಿದ್ದರು.
ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಶಕ್ತಿವೇಲು, ಮಾರ್ಗಮಧ್ಯೆ ಅಂದರೆ ಟಿನ್ ಫ್ಯಾಕ್ಟರಿ ಬ್ರಿಡ್ಜ್ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾನೆ.
ಪ್ರಿಯಕರನ ಜತೆ ಲಾಡ್ಜ್ಗೆ ಹೋದಾಕೆ ವಾಪಸ್ ಬಂದದ್ದು ಶವವಾಗಿ! ಆ ಕೋಣೆಯಲ್ಲಿತ್ತು ಪುರುಷರಿಬ್ಬರ ಜತೆಗಿನ ರಹಸ್ಯ
ಗಂಡನ ಆ ಒಂದು ವಿರೋಧಕ್ಕೆ ನೊಂದು ಮಗು ಜತೆ ಸಾವಿನ ಮನೆಯ ಕದ ತಟ್ಟಿದ ಪತ್ನಿ!