ದೆಹಲಿ: ಕೇಂದ್ರ ಬಜೆಟ್ ಮಂಡಿಸುತ್ತಾ ಭಾರತದ ತೆರಿಗೆದಾರರಿಗೆ ಧನ್ಯವಾದ ತಿಳಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ನೇರ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಘೋಷಿಸಿದ್ದಾರೆ. ನೇರ ತೆರಿಗೆಯಲ್ಲಿ ಬದಲಾವಣೆ ಇಲ್ಲ ಆದಾಯ ವಂಚನೆಕೋರರಿಗೆ ಶಾಕ್ ಕೊಟ್ಟಿದ್ದು, ಕ್ರಿಪ್ಟೋ ಕರೆನ್ಸಿಗೆ ಶೇ.30 ತೆರಿಗೆ ಘೋಷಿಸಿದ್ದಾರೆ. ವಿಶೇಷಚೇತನ ಮಕ್ಕಳ ಪೊಷಕರಿಗೆ ತೆರಿಗೆ ವಿನಾಯ್ತಿ ಘೋಷಿಸಿದ್ದಾರೆ.
- ಐಟಿ ರಿಟರ್ನ್ಸ್ ಸಲ್ಲಿಕೆಗೆ ಹೊಸ ವ್ಯವಸ್ಥೆ: ಆದಾಯ ತೆರಿಗೆ ತಪ್ಪು ಸರಿಪಡಿಸಲು 2 ವರ್ಷ ಕಾಲಾವಕಾಶ
- ಕೇಂದ್ರ-ರಾಜ್ಯ ಸರ್ಕಾರದ ನೌಕರರಿಗೆ ಏಕ ರೂಪದ ತೆರಿಗೆ
- ಆದಾಯ ವಂಚನೆ ಕೋರರಿಗೆ ಶಾಕ್- ತೆರಿಗೆ ವಂಚನೆ ಪತ್ತೆಯಾದ್ರೆ ಯಾವುದೇ ಸೌಲಭ್ಯ ಸಿಗಲ್ಲ. ವಂಚಕ ಕಂಪನಿಗಳು ಬ್ಲ್ಯಾಕ್ ಲಿಸ್ಟ್ಗೆ
- ಸ್ಟಾರ್ಟ್ಅಪ್ಗಳಿಗೆ ಉತ್ತೇಜನ ನೀಡಲು ಮುಂದಿನ ವರ್ಷದವರೆಗೂ ಸ್ಟಾರ್ಟ್ಅಪ್ಗಳಿಗೆ ತೆರಿಗೆ ವಿನಾಯ್ತಿ
- ವಿಶೇಷಚೇತನ ಮಕ್ಕಳ ಪೊಷಕರಿಗೆ ತೆರಿಗೆ ವಿನಾಯ್ತಿ
- ಕ್ರಿಪ್ಟೋ ಕರೆನ್ಸಿಗೆ ಶೇ.30 ತೆರಿಗೆ ಘೋಷಣೆ
ಕೇಂದ್ರ ಬಜೆಟ್: ಸಿರಿಧಾನ್ಯ, ಡ್ರೋನ್ ಬಳಕೆ, ಎಣ್ಣೆಕಾಳು ಬೆಳೆಗೆ ಪ್ರೋತ್ಸಾಹ