ಎನ್.ಆರ್.ಪುರ: ಮಳೆ, ಗಾಳಿ ಇಲ್ಲದಿದ್ದರೂ ಬಿ.ಎಚ್. ಕೈಮರ-ಕುದುರೆಗುಂಡಿ ಮಾರ್ಗ ಮಧ್ಯದ ಸುತ್ತ ಗ್ರಾಮದ ಸಮೀಪದ ಮುಖ್ಯ ರಸ್ತೆಗೆ ಸೋಮವಾರ ಸಂಜೆ ಅಕೇಶಿಯಾ ಮರವೊಂದು ಬಿದ್ದು ಕೆಲವು ಸಮಯ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಅಕೇಷಿಯಾ ಮರ ಮೊದಲು ವಿದ್ಯುತ್ಲೈನ್ ಮೇಲೆ ನಂತರ ರಸ್ತೆ ಮೇಲೆ ಉರುಳಿದೆ. ಇದರಿಂದ ಕೊಪ್ಪದಿಂದ ಶಿವಮೊಗ್ಗಕ್ಕೆ ಹೋಗುವ ವಾಹನ ಹಾಗೂ ಎನ್.ಆರ್.ಪುರದಿಂದ ಕೊಪ್ಪದ ಕಡೆ ಹೋಗುವ ವಾಹನಗಳು ಕೆಲವು ಸಮಯ ಸಾಲುಗಟ್ಟಿ ನಿಂತಿದ್ದವು. ತಕ್ಷಣ ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರು ಸೇರಿ ರಸ್ತೆಗೆ ಬಿದ್ದ ಮರ ತೆರವುಗೊಳಿಅಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟುರು .