More

    ಖುಷಿ ಕ್ಷಣ ಕಳೆಯಲು ಬಂದ ಮೂವರು ಬಿಇ ವಿದ್ಯಾರ್ಥಿಗಳು ದುರಂತ ಅಂತ್ಯ! ಉಡುಪಿಯಲ್ಲಿ ದುರ್ಘಟನೆ

    ಉಡುಪಿ: ಕಾಲೇಜಿಗೆ ರಜೆ ಹಿನ್ನೆಲೆ ಸ್ನೇಹಿತರೊಂದಿಗೆ ವಿಹಾರಕ್ಕೆಂದು ಬಂದಿದ್ದ ಮೂವರು ಬಿಇ ವಿದ್ಯಾರ್ಥಿಗಳು ಹೂಡೆ ಸಮೀಪದ ಬೀಚ್​ನಲ್ಲಿ ಆಟವಾಡಲು ಹೋಗಿ ದುರಂತ ಅಂತ್ಯಕಂಡಿದ್ದಾರೆ. ಮೃತರೆಲ್ಲರೂ ಮಣಿಪಾಲ ಎಂಐಟಿ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳು.

    ಭಾನುವಾರ ರಜಾ ದಿನವಾದ್ದರಿಂದ ಮಣಿಪಾಲದ 15ಕ್ಕೂ ಅಧಿಕ ವಿದ್ಯಾರ್ಥಿಗಳು ಹೂಡೆ ಬೀಚ್​ಗೆ ವಿಹಾರಕ್ಕೆಂದು ಬಂದಿದ್ದರು. ಕೆಲವರು ಸಮುದ್ರ ನೀರಿನಲ್ಲಿ ಆಟವಾಡುತ್ತಿದ್ದ ವೇಳೆ, ಬೃಹತ್ ಗಾತ್ರದ ಅಲೆ ಅಪ್ಪಳಿಸಿದ್ದು, ಅಲೆಗಳ ಹೊಡೆತಕ್ಕೆ ಸಿಲುಕಿ ಮೂವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

    ಈ ಪೈಕಿ ಬೆಂಗಳೂರಿನ ನಿಶಾಂತ್​(21) ಹಾಗೂ ಷಣ್ಮುಗ(21) ಅವರನ್ನು ಹೊರಗೆ ಕರೆತರಲಾಯಿತ್ತಾದರೂ ಬದುಕಲಿಲ್ಲ. ನೀರಲ್ಲಿ ಮುಳುಗಿದ್ದರಿಂದ ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಹೈದರಾಬಾದ್​ನ ಶ್ರೀಕರ್(21) ನೀರಲ್ಲಿ ನಾಪತ್ತೆಯಾಗಿದ್ದ. ಶ್ರೀಕರ್​ಗಾಗಿ ಶೋಧಕಾರ್ಯ ಮುಂದುವರಿದಿತ್ತು. ಸೋಮವಾರ ಬೆಳಗ್ಗೆ ಶ್ರೀಕರ್​ ಮೃತದೇಹ ಪತ್ತೆಯಾಗಿದೆ. ಮೂವರ ಸಾವಿನ ಸುದ್ದಿ ಕೇಳಿ ಸಹಪಾಠಿಗಳು ಆಘಾತಗೊಂಡಿದ್ದಾರೆ.

    ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಸಿಪಿಐ ಇಲ್ಲಾಳ್: ಹೆಚ್ಚಿನ ಚಿಕಿತ್ಸೆಗೆ ಏರ್​ಲಿಫ್ಟ್ ಮೂಲಕ ಬೆಂಗಳೂರಿಗೆ ಸ್ಥಳಾಂತರ

    ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಸಿಪಿಐ ಇಲ್ಲಾಳ್: ಹೆಚ್ಚಿನ ಚಿಕಿತ್ಸೆಗೆ ಏರ್​ಲಿಫ್ಟ್ ಮೂಲಕ ಬೆಂಗಳೂರಿಗೆ ಸ್ಥಳಾಂತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts