More

    ಗಬ್ಬುನಾರುವ ಶೌಚಗೃಹ

    ಕೆ.ಆರ್.ನಗರ: ಶೌಚಗೃಹ ಇದ್ದರೂ ಸರಿಯಾದ ನಿರ್ವಹಣೆ ಇಲ್ಲದೆ ಕಚೇರಿಗಳಿಗೆ ಆಗಮಿಸುವ ಸಾರ್ವಜನಿಕರ ಜತೆಗೆ ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿಗಳು, ಸಿಬ್ಬಂದಿ ಪರದಾಡುವಂತಾಗಿದೆ.

    ಪಟ್ಟಣದ ಮೈಸೂರು-ಹಾಸನ ರಸ್ತೆಯಲ್ಲಿರುವ ತಾಲೂಕು ಆಡಳಿತಸೌಧ ಪಟ್ಟಣದ ಕೇಂದ್ರ ಸ್ಥಾನದಲ್ಲಿದ್ದು, ಕೆ.ಆರ್.ನಗರ ತಾಲೂಕಿನ ಜತೆಗೆ ವಿಭಜನೆಯಾಗಿರುವ ಸಾಲಿಗ್ರಾಮ ತಾಲೂಕಿಗೂ ಇದು ಪ್ರಮುಖ ಆಡಳಿತ ಕೇಂದ್ರವಾಗಿದೆ.

    ತಾಲೂಕು ಕಚೇರಿ ಕಟ್ಟಡದ ಒಳಾಂಗಣ ಮತ್ತು ಹೊರಾಂಗಣದಲ್ಲಿರುವ ಶೌಚಗೃಹಗಳು ನಿರ್ವಹಣೆ ಕೊರತೆ ಮತ್ತು ಸಿಬ್ಬಂದಿಯ ನಿರ್ಲಕ್ಷೃದಿಂದ ಗಬ್ಬೆದ್ದು ನಾರುತ್ತಿದೆ. ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮಾರ್ಗದರ್ಶನ ಮಾಡಬೇಕಾದ ತಾಲೂಕು ಆಡಳಿತದ ಸೌಧದಲ್ಲಿಯೇ ಈ ರೀತಿ ಸಮಸ್ಯೆ ಎದುರಾಗಿರುವುದು ದುರಂತದ ವಿಷಯವಾಗಿದೆ.

    ಪ್ರತಿದಿನ ಕಂದಾಯ ಇಲಾಖೆಯ ನೌಕರರ ಜತೆಗೆ ಇತರ ಇಲಾಖೆಯ ನೂರಾರು ಸಿಬ್ಬಂದಿ ಮತ್ತು ಅಧಿಕಾರಿಗಳು ಹಾಗೂ ಸಾವಿರಾರು ಜನಬಡವರು, ರೈತರು, ವೃದ್ಧರು, ಮಹಿಳೆಯರು ಹಾಗೂ ಅಂಗವಿಕಲರು ತಮ್ಮ ನಿತ್ಯದ ಕೆಲಸ ಕಾರ್ಯಗಳಿಗೆ ದೂರದ ಊರುಗಳಿಂದ ಬರುತ್ತಿದ್ದು, ಶೌಚಗೃಹ ವ್ಯವಸ್ಥೆಯಿಂದ ಪರದಾಡುವಂತಾಗಿದೆ. ಕೆಲವರು ಬಹಿರ್ದೆಸೆ ಅವಲಂಬಿಸುವಂತಾಗಿದೆ.

    ಇದನ್ನು ಇಲ್ಲಿನ ಅಧಿಕಾರಿಗಳು ನೋಡಿದರೂ ಇದಕ್ಕೆ ನಮಗೆ ಸಂಬಂಧ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ತಾಲೂಕು ಆಡಳಿತ ಕಚೇರಿಯಲ್ಲಿ ಸ್ವಚ್ಛಭಾರತ ಕನಸು ಈಡೇರದಿರುವುದು ಆಡಳಿತವೈಖರಿ ಹಾಗೂ ತಾಲೂಕಿನ ಸ್ವಚ್ಛತೆಗೆ ಹಿಡಿದ ಕೈಗನ್ನಡಿಯಂತಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts